5 C
London
Wednesday, April 24, 2024
Homeಕ್ರಿಕೆಟ್ರಿಯಾಜ್ ಬಿ.ಕೆ ಮಾಲೀಕತ್ವದ ಬಹ್ರೇನ್ ಬೌನ್ಸರ್ಸ್ ತಂಡಕ್ಕೆ B.B.L ಚಾಂಪಿಯನ್ಸ್ ಲೀಗ್ ಕಿರೀಟ

ರಿಯಾಜ್ ಬಿ.ಕೆ ಮಾಲೀಕತ್ವದ ಬಹ್ರೇನ್ ಬೌನ್ಸರ್ಸ್ ತಂಡಕ್ಕೆ B.B.L ಚಾಂಪಿಯನ್ಸ್ ಲೀಗ್ ಕಿರೀಟ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
Wega west end Arabia,
Casa Arabia ಇವರ ಪ್ರಾಯೋಜಕತ್ವದಲ್ಲಿ,ಬಹ್ರೇನ್ ನ ಗಲ್ಫ್ ಏರ್ ಗ್ರೌಂಡ್ ನಲ್ಲಿ ನಡೆದ ಬಹ್ರೇನ್ ಚಾಂಪಿಯನ್ಸ್ ಲೀಗ್ B.B.L-2020 ಫೈನಲ್ ನಲ್ಲಿ ರಿಯಾಜ್ ಬಿ.ಕೆ.ಮಾಲೀಕತ್ವದ
ಬಹ್ರೇನ್ ಬೌನ್ಸರ್ಸ್,ಮಂಗಳೂರು ಬಾಯ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
 ಬಹ್ರೇನ್ ನ ಈ ಪ್ರತಿಷ್ಟಿತ ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸಿದ್ದು,ಲೀಗ್ ಹಂತದ ರೋಚಕ ಹೋರಾಟಗಳ ಬಳಿಕ
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ಬಾಯ್ಸ್ 5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿತ್ತು.ಸುಲಭ ಸವಾಲನ್ನು ಅನಾಯಾಸವಾಗಿ ಬೆಂಬತ್ತಿದ ಬಹ್ರೇನ್ ಬೌನ್ಸರ್ಸ್ 3.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯ ಗರಿಷ್ಠ ಸ್ಕೋರರ್(ಆರೆಂಜ್ ಕ್ಯಾಪ್) ಹಾಗೂ ಅತ್ಯಧಿಕ ಸಿಕ್ಸರ್ ಪ್ರಶಸ್ತಿ  ಬಹ್ರೇನ್ ಬೌನ್ಸರ್ಸ್ ನ ಅರುಣ್ ಶೆಟ್ಟಿ,ಮಂಗಳೂರು ಬಾಯ್ಸ್ ನ ರೌಫ್ ಅತ್ಯಧಿಕ ವಿಕೆಟ್‌ ಗಳಿಸಿದರೆ,ಅತ್ಯಧಿಕ‌‌ ಸ್ಟ್ರೈಕ್ ರೇಟ್ ಬಹ್ರೇನ್ ಬೌನ್ಸರ್ಸ್ ನ ರಿಯಾಜ್ ಬಿ.ಕೆ‌ ಹಾಗೂ ಟೂರ್ನಮೆಂಟ್ ನಲ್ಲಿ 6 ಸಿಕ್ಸರ್ ಸಹಿತ 82 ರನ್ ಹಾಗೂ ಅತ್ಯಧಿಕ 10 ವಿಕೆಟ್ ನೊಂದಿಗೆ ಪರ್ಪಲ್ ಕ್ಯಾಪ್ ಗೌರವ ಪಡೆದ ಉಡುಪಿಯ ವಸಂತ್ ಸಾಲ್ಯಾನ್ ಸರಣಿಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು…
ಗಣ್ಯ ಅತಿಥಿಗಳು ಕ್ರೀಡಾ ಪ್ರೋತ್ಸಾಹಕರು ಭಾಗವಹಿಸಿದ್ದ
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಉದ್ಯಮಿ ಅಬ್ದುಲ್ ರಜಾಕ್ ಹಾಜಿ ಸಹೋದರರು ವಿಜೇತರಿಗೆ ಪ್ರಶಸ್ತಿ ಹಸ್ತಾಂತರಿಸಿದರು.
ಬಿ.ಬಿ.ಎಲ್ ಚಾಂಪಿಯನ್ಸ್ ಲೀಗ್-2020 ಪಂದ್ಯಾವಳಿಯಲ್ಲಿ ಸಮಸ್ತ ಕನ್ನಡಿಗರ ಹೆಮ್ಮೆಯ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ಕಾರ್ಯ ನಿರ್ವಹಿಸಿದ್ದು,
ಕ್ರಿಕ್ ಹೀರೋಸ್ ಸ್ಕೋರಿಂಗ್ ಪಾರ್ಟ್ನರ್,ವೆನ್ಯೂ ಪಾರ್ಟ್ನರ್ ಗೋಲ್ಡನ್ ಈಗಲ್ ಹೆಲ್ತ್ ಕ್ಲಬ್ ಹಾಗೂ B-Human ಸಂಸ್ಥೆ ಸಹಕಾರದೊಂದಿಗೆ ಪಂದ್ಯಾವಳಿ ಯಶಸ್ವಿಯಾಗಿ ನಡೆದಿತ್ತು…
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

four × one =