Categories
ಕ್ರಿಕೆಟ್

ಅವಿಘ್ನ ಸೃಷ್ಟಿ ಟ್ರೋಫಿ-2021- 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಗೆಳೆಯರ ಬಳಗ ಬೀಜಾಡಿ ಇವರ ಆಶ್ರಯದಲ್ಲಿ,ಗ್ರಾಮೀಣ ಮಟ್ಟದ ಪ್ರತಿಭೆಗಳ ಅನಾವರಣ ಹಾಗೂ ಅಶಕ್ತರಿಗೆ ಸಹಾಯಹಸ್ತ ನೀಡುವ ಸದುದ್ದೇಶದಿಂದ,ದ್ವಿತೀಯ ಬಾರಿಗೆ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಅವಿಘ್ನ ಸೃಷ್ಟಿ ಟ್ರೋಫಿ-2021 ಪಂದ್ಯಾಟವನ್ನು ಫೆಬ್ರವರಿ 6 ಮತ್ತು 7 ರಂದು ಬೀಜಾಡಿ ಪಡುಶಾಲೆಯ ಹತ್ತಿರದ ಮೈದಾನದಲ್ಲಿ ಆಯೋಜಿಸಲಾಗಿದೆ.
6 ಶನಿವಾರದಂದು ಆಯ್ದ ಸ್ಥಳೀಯ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು,7 ಆದಿತ್ಯವಾರದಂದು ಆಯಾ ಏರಿಯಾದ 16 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ.
*ಅವಿಘ್ನ ಸೃಷ್ಟಿ ಚಾಂಪಿಯನ್ಸ್ ಟ್ರೋಫಿ-2021*
ಫೆಬ್ರವರಿ 6 ಶನಿವಾರ ಸಂಜೆ 7.30 ರ ನಂತರ ಕುಂದಾಪುರ ವ್ಯಾಪ್ತಿಯ ಬಲಿಷ್ಠ 4 ತಂಡಗಳಾದ ಚಾಲೆಂಜ್ ಕುಂದಾಪುರ,ಜಾನ್ಸನ್ ಹಂಗಳೂರು,ಅಜೇಯ್ ಕುಂಜಿಗುಡಿ ಹಾಗೂ ಫ್ರೆಂಡ್ಸ್ ಗಿಳಿಯಾರು ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು,ವಿಜೇತ ತಂಡ ವಿಶೇಷವಾಗಿ ಆಯೋಜಿಸಲಾದ ಅವಿಘ್ನ ಸೃಷ್ಟಿ ಚಾಂಪಿಯನ್ಸ್ ಟ್ರೋಫಿ-2021 ಜಯಿಸಲಿದೆ.
ಇದಲ್ಲದೇ  ಪೋಲಿಸ್ ತಂಡ ಹಾಗೂ ಗೆಳೆಯರ ಬಳಗ ಸೀನಿಯರ್ಸ್ ತಂಡಗಳ ನಡುವೆ ಪ್ರದರ್ಶನ ಪಂದ್ಯವೊಂದನ್ನು ಹಮ್ಮಿಕೊಳ್ಳಲಾಗಿದೆ.
ಅವಿಘ್ನ ಸೃಷ್ಟಿ ಟ್ರೋಫಿ ವಿಜೇತ ತಂಡ 22,222 ನಗದು,ದ್ವಿತೀಯ ಸ್ಥಾನಿ 15,555 ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಟ ನಿರ್ವಹಣೆ ನೀಡಿದ ಆಟಗಾರ ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.ಪಂದ್ಯಾಕೂಟದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಕ್ಕೆ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ.
M.Sports ಪಂದ್ಯಾಟದ ನೇರ ಪ್ರಸಾರವನ್ನು ಬಿತ್ತರಿಸಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಲಿದ್ದಾರೆ‌.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

two × 1 =