
ಸೈಯದ್ ಮುಷ್ತಾಕ್ ಅಲಿ ಟಿ20: ಕರ್ನಾಟಕ ಸಂಭಾವ್ಯರ ತಂಡದಲ್ಲಿ ಅಭಿಲಾಷ್ ಶೆಟ್ಟಿ

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಕರ್ನಾಟಕದ ಸಂಭಾವ್ಯರ ತಂಡವನ್ನು ಪ್ರಕಟಿಸಲಾಗಿದೆ.
ಉಡುಪಿ ಜಿಲ್ಲೆಯ ಕೋಟಾದ ಮೂಡು ಗಿಳಿಯಾರಿನ ಪ್ರತಿಭಾವಂತ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ 26 ಮಂದಿ ಸದಸ್ಯರ ಕರ್ನಾಟಕ ಸಂಭಾವ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಡಗೈ ಸ್ವಿಂಗ್ ಬೌಲಿಂಗ್’ನಿಂದ ಗಮನ ಸೆಳೆಯುತ್ತಿರುವ ಅಭಿಲಾಷ್ ಶೆಟ್ಟಿ ಸದ್ಯ ಕರ್ನಾಟಕ ರಣಜಿ ತಂಡದಲ್ಲಿದ್ದಾರೆ. ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ ಕೂಡ ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಕರ್ನಾಟಕದ ಸಂಭಾವ್ಯರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಕರ್ನಾಟಕ ಸಂಭಾವ್ಯರ ತಂಡ ಹೀಗಿದೆ:
1. ಕೆ.ಎಲ್ ರಾಹುಲ್
2. ಮಯಾಂಕ್ ಅಗರ್ವಾಲ್
3. ಮನೀಶ್ ಪಾಂಡೆ
4. ದೇವದತ್ತ್ ಪಡಿಕ್ಕಲ್
5. ಪ್ರಸಿದ್ಧ್ ಕೃಷ್ಣ
6. ಚೇತನ್ ಎಲ್.ಆರ್
7.ಮೆಕ್’ಲೀನ್ ನೊರೊಹ್ನ
8. ಶ್ರೇಯಸ್ ಗೋಪಾಲ್
9. ಅಭಿನವ್ ಮನೋಹರ್
10. ಶ್ರೀಜಿತ್ ಕೆ.ಎಲ್
11. ಮನೋಜ್ ಭಾಂಡಗೆ
12. ಹಾರ್ದಿಕ್ ರಾಜ್
13. ವಿ.ಕೌಶಿಕ್
14. ವಿದ್ಯಾಧರ್ ಪಾಟೀಲ್
15. ಶುಭಾಂಗ್ ಹೆಗ್ಡೆ
16. ಅಭಿಲಾಷ್ ಶೆಟ್ಟಿ
17. ಮೊಹ್ಸಿನ್ ಖಾನ್
18. ಲವ್ನೀತ್ ಸಿಸೋಡಿಯಾ,
19. ವೈಶಾಕ್ ವಿಜಯ್ ಕುಮಾರ್,
20. ಸ್ಮರಣ್ ಆರ್.
21. ಮನ್ವಂತ್ ಕುಮಾರ್,
22. ಯಶೋವರ್ಧನ್ ಪರಂಟಪ್,
23. ಅಧೋಕ್ಷ್ ಹೆಗ್ಡೆ,
24. ಶರತ್ ಬಿ.ಆರ್,
25. ವೆಂಕಟೇಶ್ ಎಂ.
26.ಪ್ರವೀಣ್ ದುಬೆ




