ಹಳೆಯಂಗಡಿ : ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಕ್ಲಬ್ ಇವರ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಡಿಗ್ ಫ್ಲಿಕ್ (ವಿಮೆ) ಪ್ರಾಯೋಜಕತ್ವದಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ವಿಜ್-2019 ಸಮಾರಂಭ ಹಳೆಯಂಗಡಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಕ್ವಿಜ್-2019 ಸಮಾರಂಭವನ್ನು ಮೂಡಬಿದಿರೆಯ ಮಾಜಿ ಶಾಸಕ ಅಭಯಚಂದ್ರ ಜೈನ್ ಉದ್ಘಾಟಿಸಿ, ಕ್ರೀಡೆಯಿಂದ ಮಾನಸಿಕ ಸಧೃಡತೆ ಸಾಧ್ಯ ಜೊತೆಗೆ ಕ್ರೀಡಾ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ದಿನದ ಮಹತ್ವವನ್ನು ವಿವರಿಸಿದರು. ಪ್ರಧಾನಿಯವರು ಕರೆ ಕೊಟ್ಟ “ಫಿಟ್ ಇಂಡಿಯಾ” ಅಭಿಯಾನದಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು.ಈ ನಿಟ್ಟಿನಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಸಾಧನೆ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿದೆ ಎಂದರು.
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಮುಖ್ಯಸ್ಥ ಗೌತಮ್ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು.
ಮುಖ್ಯಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶ್ರೀಮತಿ ಪ್ರತಿಭಾ ಕುಳಾಯಿ, ಟೊರ್ಪೆಡೋಸ್ ಕ್ಲಬ್ಉಪಾಧ್ಯಕ್ಷರು ನಾಗಭೂಷಣ್ ರೆಡ್ಡಿ ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ವಿವಿಧ ಶಾಲಾ,ಕಾಲೇಜುಗಳಿಂದ ಜ್ಯೂನಿಯರ್ಸ್ (ಎಸ್.ಎಸ್.ಎಲ್.ಸಿ ವರೆಗಿನ ವಿದ್ಯಾರ್ಥಿಗಳು) ಸೀನಿಯರ್ಸ್(ಪದವೀಧರರು) ಹೀಗೆ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಮುಂಬಯಿಯ ಪ್ರಸಿದ್ಧ ಕ್ವಿಜ್ ಮಾಸ್ಟರ್ ಒಡಿ.ರಂಜನ್ ನಗರಕಟ್ಟೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ಟೊರ್ಪೆಡೋಸ್ ಕ್ಲಬ್ ಮ್ಯಾನೇಜರ್ ಕೆ.ಪಿ.ಸತೀಶ್ ಸ್ವಾಗತಿಸಿದರು. ಅಶ್ವಿನ್ ಪಡುಕೋಣೆ ಕಾರ್ಯಕ್ರಮವನ್ನು ನಿರ್ವವಹಿಸಿ, ವಂದಿಸಿದರು.
ಬ್ಯಾಡ್ಮಿಂಟನ್ ಕೋಚ್ ಸಂತೋಷ್ ಖಾರ್ವಿ, ಭಾಗ್ಯರಾಜ್, ಪ್ರಜ್ವಲ್ ಕುಳಾಯಿ, ದೀಪಕ್ ಕೋಟ್ಯಾನ್, ಕಾರ್ತಿಕ್,ಸಂಪತ್ ಚರಣ್, ನವನೀತ್, ತೇಜಸ್, ರಾಘವೇಂದ್ರ ಸಹಕರಿಸಿದರು.
ಕ್ರಿಕ್ ಸೇ ಯೂಟ್ಯೂಬ್ ಚಾನೆಲ್ ಈ ಕಾರ್ಯಕ್ರಮದ ನೇರ ಪ್ರಸಾರ ಬಿತ್ತರಿಸಿತ್ತು.
ವರದಿ : ಆರ್.ಕೆ.ಆಚಾರ್ಯ ಕೋಟ