ಕ್ರಿಕೆಟ್ಹರಿ ಓಂ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಜಯಿಸಿದ ವೀರಾಂಜನೇಯ...

ಹರಿ ಓಂ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಜಯಿಸಿದ ವೀರಾಂಜನೇಯ ಕ್ರಿಕೆಟರ್ಸ್ ಕಾಪು ತಂಡ

-

- Advertisment -spot_img
ಗಂಗೊಳ್ಳಿ ಪಟ್ಟಣದ  ಎಸ್ ವಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹರಿ ಓಂ ಗಂಗೊಳ್ಳಿ   ತಂಡದಿಂದ ಹಮ್ಮಿಕೊಂಡಿದ್ದ 30 ಗಜಗಳ ಹೊನಲು ಬೆಳಕಿನ  ಜಿ ಎಸ್ ಬಿ  ಕ್ರಿಕೆಟ್ ಪಂದ್ಯಾವಳಿ ಭಾನುವಾರ ಮುಕ್ತಾಯಗೊಂಡಿತು.
ಮಾರ್ಚ್ 9, 2024ರ ಶನಿವಾರ ಸಂಜೆ 7:00 ಗಂಟೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ವೆಂಕಟೇಶ ಕೃಪಾ ಟ್ರೇಡರ್ಸ್ ಗಂಗೊಳ್ಳಿಯ ಮಾಲೀಕ  ಜಿ ಭಾಸ್ಕರ ಶೆಣೈ, ಮೆಸರ್ಸ್ ಭಂಡಾರಿ ಪದ್ಮನಾಭ ಶೆಣೈ ಇದರ ಮಾಲೀಕರಾಗಿರುವ ಪದ್ಮನಾಭ  ಶೆಣೈ,  ಕುಂದಾಪುರದ  ಶೆಣೈ ಎಲೆಕ್ಟ್ರಿಕಲ್ಸ್ ನ  ಅಕ್ಷಯ್ ಶೆಣೈ, ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಕರಸೇವಕರಲ್ಲಿ ಓರ್ವರಾದ ಗಂಗೊಳ್ಳಿಯ ಪ್ರಕಾಶ್ ಪೈ, ಗಂಗೊಳ್ಳಿಯ ಜನರಲ್ ಮರ್ಚೆಂಟ್ ಎಂ ವಿನೋದ್ ಪೈ ಇವರುಗಳು ಉಪಸ್ಥಿತರಿದ್ದರು.
ರೈಸಿಂಗ್ ಸ್ಟಾರ್ಸ್ ಮಂಗಳೂರು ,ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್, ಟೀಮ್ ಜಿಎಸ್‌ಬಿ ಕುಂದಾಪುರ, ವೀರಾಂಜನೇಯ ಕ್ರಿಕೆಟರ್ಸ್ ಕಾಪು ,ರೋಶನ್ ಚಾಲೆಂಜರ್ಸ್ ಕುಂದಾಪುರ, ಕೊಂಕಣ್ ಎಕ್ಸ್‌ಪ್ರೆಸ್ ಕೋಟೇಶ್ವರ, VK ಫೋವಾಸ್, ಇರ್ವತ್ತೂರ್ ಸ್ಪೋರ್ಟ್ಸ್ ಕ್ಲಬ್  ಮಣಿಪಾಲ್, ಶ್ರೀ ರಾಮ್ ಕ್ರಿಕೆಟರ್ಸ್  ಮತ್ತು ಸ್ಪಾರ್ಕ್ SLVT ಉಡುಪಿ ತಂಡಗಳು ಟೂರ್ನಿಯಲ್ಲಿ  ಪಾಲ್ಗೊಂಡು ಅತ್ಯುತ್ತಮ ಪ್ರದರ್ಶನವನ್ನು ತೋರಿಸಿದವು.
ಒಟ್ಟಾರೆಯಾಗಿ 10 ಫ್ರ್ಯಾಂಚೈಸೀ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ವಿಜಯಿಯಾದ ವೀರಾಂಜನೇಯ ಕ್ರಿಕೆಟರ್ಸ್ ಕಾಪು  ತಂಡಕ್ಕೆ 55,555 ರೂ.ನಗದು ಮತ್ತು ಪಾರಿತೋಷಕ, 2 ನೇ ಸ್ಥಾನ ಪಡೆದ ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್ ತಂಡಕ್ಕೆ 33,333 ರೂ.ನಗದು, ಪಾರಿತೋಷಕ ವಿತರಿಸಲಾಯಿತು. ಪ್ರತಿಷ್ಠಿತ ಫೈನಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವೀರಾಂಜನೇಯ ಕ್ರಿಕೆಟರ್ಸ್ ಕಾಪು ತಂಡದ ಕಪ್ತಾನ ಶರತ್ ಪ್ರಭು ಮೂಲ್ಕಿ ಗಳಿಸುವುದರೊಂದಿಗೆ ವೈಯಕ್ತಿಕ ಶ್ರೇಷ್ಠತೆಯನ್ನು ಸಹ ಗುರುತಿಸಲಾಯಿತು. ಶರತ್ ಪ್ರಭು ಅವರು ಸರಣಿ ಪುರುಷೋತ್ತಮ ಎಂದು ಗುರುತಿಸಲ್ಪಟ್ಟರು.  ಈ ಸಂದರ್ಭ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಆಚಾರ್ಯ ಮೆಡಿಕಲ್ಸ್ ಮಾಲೀಕರಾಗಿರುವ ವಿಶ್ವನಾಥ ಆಚಾರ್ಯ,  ಉದ್ಧಾಕ್ ಕುಂದಾಪುರದ ಮಾಲೀಕ ಸುಹಾಸ್ ಭಂಡಾರ್ಕರ್, ನಿನಾದ ಚಾರಿಟೇಬಲ್ ಟ್ರಸ್ಟ್ ಗಂಗೊಳ್ಳಿಯ ಕಾರ್ಯದರ್ಶಿಗಳು ಆಗಿರುವ ಸುದರ್ಶನ ಆಚಾರ್ಯ, ರೋಟರಿ ಗಂಗೊಳ್ಳಿ  ಅಧ್ಯಕ್ಷರು ಮತ್ತು ಜಿಎಸ್ ವಿ ಎಸ್ ಸ್ಕೂಲ್ಸ್ ಅಸೋಸಿಯೇಶನ್ ಗಂಗೊಳ್ಳಿಯ  ಸದಸ್ಯರು ಆಗಿರುವ ನಾಗೇಂದ್ರ ಪೈ  ಹಾಗೂ ಜಿ ವಿಠ್ಠಲ್ ದಾಸ್ ಭಟ್ ಅರ್ಚಕರು ಮತ್ತು ಪುರೋಹಿತರು ಅಂಬಿಕಾ ದೇವಸ್ಥಾನ ಗಂಗೊಳ್ಳಿ  ಇದ್ದರು.
ಇದೇ ಸಂದರ್ಭ ಮಾರ್ಚ್ 10 ರಂದು ಗಂಗೊಳ್ಳಿ ಪರಿಸರದ ಜಿ ಎಸ್ ಬಿ ಆಟಗಾರರಿಗೆ ಸೀಮಿತವಾದ ಗಂಗೊಳ್ಳಿ ಜಿ ಎಸ್ ಬಿ ಪ್ರೀಮಿಯರ್ ಲೀಗ್ ( GGPL-2024) ಕೂಡ ಆಯೋಜಿಸಲಾಗಿತ್ತು. ಪಂದ್ಯಾವಳಿಯ ಅಂತಿಮ ಪಂದ್ಯ ವಿ ಕೆ ಫೋವಾಸ್ ಮತ್ತು ಭಾವಾಜಿ XI ನಡುವೆ ನಡೆದಿದ್ದು, ಇದನ್ನು ವಿ ಕೆ ಫೋವಾಸ್ 51 ರನ್ನುಗಳಿಂದ ಗೆದ್ದಿದೆ ಎಂದು ಪ್ರಕಟಣೆ ತಿಳಿಸಿದೆ. ಎರಡೂ ತಂಡಗಳು ಟ್ರೋಫಿಗಳು ಮತ್ತು ಪದಕಗಳನ್ನು ಪಡೆದರು.
ಜಿ ಜಿ ಪಿ ಎಲ್- 2024 ರ ಉದ್ಘಾಟನಾ ಸಮಾರಂಭ  ಭಾನುವಾರ ಸಾಯಂಕಾಲ 4:30 ಗೆ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ರಮೇಶ್ ಮಲ್ಯ ಜನರಲ್ ಮರ್ಚೆಂಟ್ ಕುಂದಾಪುರ,  ಎಂ ಮುಕುಂದ ಪೈ ನಿನಾದ ಚಾರಿಟೇಬಲ್ ಟ್ರಸ್ಟ್ ಗಂಗೊಳ್ಳಿಯ ಅಧ್ಯಕ್ಷರು, ವಿಶ್ವನಾಥ ಭಟ್ HMSV ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ  ಮತ್ತು  ಎಂ ಅನಂತ್ ಪೈ ಉಪನ್ಯಾಸಕರು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ಅತಿಥಿಗಳಾಗಿ ಭಾಗವಹಿಸಿದ್ದರು.
ಬೆಳಗಿನ ಜಾವ 3:00 ಗಂಟೆಗೆ ನಡೆದ ಮುಕ್ತಾಯ ಸಮಾರಂಭದಲ್ಲಿ ಯು ಸದಾನಂದ ಪೈ ಲೋಕೋಪಕಾರಿ ಮತ್ತು ನಿವೃತ್ತ RBI ಉದ್ಯೋಗಿ ಬೆಂಗಳೂರು, ಮಲ್ಯರ ಮಠ ಶ್ರೀ ವೆಂಕಟರಮಣ ದೇವಸ್ಥಾನದ ಕಾರ್ಯದರ್ಶಿ ಹಾಗೂ  ಗಂಗೊಳ್ಳಿಯ ಜನರಲ್ ಮರ್ಚೆಂಟ್  ಆಗಿರುವ ಜಿ ವೆಂಕಟೇಶ ನಾಯಕ್ ,ಎಂಜಿ ಜಗನ್ನಾಥ್ ಪೈ ಮತ್ತು ಪೈ ಗ್ರೂಪ್ ಆಫ್ ಹೋಟೆಲ್ಸ್ ಬೆಂಗಳೂರು ಪ್ರತಿನಿಧಿ ಎಂ ವಾಮನ್ ಎಸ್ ಪೈ  ಜನರಲ್ ಮರ್ಚೆಂಟ್ ಗಂಗೊಳ್ಳಿ, ವೆಂಕಟರಮಣ ದೇವರ ಹಿರಿಯ ಭಜಕರಲ್ಲಿ ಓರ್ವರು ಆಗಿರುವ ಎನ್ ಕೃಷ್ಣಾನಂದ ನಾಯಕ್ ,  GSVS ಶಾಲಾ ಸಂಘದ ಅಧ್ಯಕ್ಷ  ಡಾ.ಯು.ಕಾಶಿನಾಥ ಪೈ ಭಾಗವಹಿಸಿದ್ದರು.
 ಹರಿ ಓಂ ಗಂಗೊಳ್ಳಿ ಏರ್ಪಡಿಸಿದ ಈ ಟೂರ್ನಮೆಂಟ್ ಅತ್ಯುತ್ತಮ ಪಂದ್ಯಾವಳಿಗಳಲ್ಲಿ ಒಂದಾಗಿದೆ. ಕೇವಲ ಕ್ರಿಕೆಟ್ ಮಾತ್ರವಲ್ಲದೆ ಎರಡು ದಿನಗಳ ಕಾಲ ನಡೆದ ಟೂರ್ನಿಯುದ್ದಕ್ಕೂ ಭಾಗವಹಿಸಿದ ಆಟಗಾರರಿಗೆ ಮತ್ತು  ಪ್ರೇಕ್ಷಕರಿಗೆ ಜಿ ಎಸ್ ಬಿ ಯ ವಿವಿಧ ಖಾದ್ಯಗಳನ್ನುಉಣಬಡಿಸಲಾಯಿತು. ಗಂಗೊಳ್ಳಿ ಪರಿಸರದ ಮೈಕಲ್ ಜಾಕ್ಸನ್ ಖ್ಯಾತಿಯ ವಿಷ್ಣು ಭಟ್  ಮೈದಾನದೊಳಗಿನ  ಆಟಗಾರರು ಎದುರಿಸುವ ಒತ್ತಡಗಳನ್ನು ತನ್ನ ವಿಶೇಷ ನೃತ್ಯದ ಮೂಲಕ ನಿವಾರಿಸಿ, ಆಟಗಾರರನ್ನು ಹುರಿದುಂಬಿಸಿ ಹಾಗೂ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಎಂ ನಾಗೇಶ್ ಪೈ,  ಸುದರ್ಶನ ಆಚಾರ್ಯ, ರಮೇಶ್ ಪೈ ಇವರುಗಳ ಮುಂದಾಳುತ್ವದಲ್ಲಿ ನಡೆದ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಆಟಗಾರರು, ಪ್ರೇಕ್ಷಕರು ಮತ್ತು ಎಲ್ಲಾ ಕೊಡುಗೆದಾರರಿಗೆ ಹರಿ ಓಂ ಗಂಗೊಳ್ಳಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here

14 − fourteen =

Latest news

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...
- Advertisement -spot_imgspot_img

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್ ಚಿತ್ರದುರ್ಗ:  ವಿಶ್ವಕರ್ಮ ಸಮುದಾಯದ ಯುವಕರ ಕ್ರೀಡಾ ಪ್ರತಿಭೆಯನ್ನು...

Must read

- Advertisement -spot_imgspot_img

You might also likeRELATED
Recommended to you