ಕ್ರಿಕೆಟ್ಬೆಂಗಳೂರು-ಜಿ.ಗುರು ಪ್ರಸಾದ್ ಸಾರಥ್ಯದಲ್ಲಿ ದಾಸರಹಳ್ಳಿಯಲ್ಲಿ ಕ್ರಿಕೆಟ್ ಹಬ್ಬ-ಬಿಗ್ ಬ್ಯಾಷ್ ದಾಸರಹಳ್ಳಿ

ಬೆಂಗಳೂರು-ಜಿ.ಗುರು ಪ್ರಸಾದ್ ಸಾರಥ್ಯದಲ್ಲಿ ದಾಸರಹಳ್ಳಿಯಲ್ಲಿ ಕ್ರಿಕೆಟ್ ಹಬ್ಬ-ಬಿಗ್ ಬ್ಯಾಷ್ ದಾಸರಹಳ್ಳಿ

-

- Advertisment -spot_img
ದಾಸರಹಳ್ಳಿ ಪರಿಸರದ ಕ್ರಿಕೆಟ್ ಉತ್ಸಾಹಿ,ಬಿ.ಜೆ.ಪಿ ಮುಖಂಡರಾದ ಜಿ‌.ಗುರು ಪ್ರಸಾದ್ ಸಾರಥ್ಯದಲ್ಲಿ,2019 ರಲ್ಲಿ  ಗುರು ಕ್ರಿಕೆಟರ್ಸ್ ಸ್ಥಾಪನೆಯಾಗಿದ್ದು,ಪ್ರಸ್ತುತ ದಿನಗಳಲ್ಲಿ ಬೆಂಗಳೂರು ಪರಿಸರದ ಪ್ರಬಲ ತಂಡವಾಗಿ ಗುರುತಿಸಿಕೊಂಡಿದೆ.
ಗ್ರಾಮಾಂತರ ಪ್ರತಿಭೆಗಳನ್ನು ರಾಜ್ಯ,ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜಿ.ಗುರು ಪ್ರಸಾದ್ ರವರ
ಸಾರಥ್ಯದ ಗುರು ಕ್ರಿಕೆಟರ್ಸ್, ಸ್ಯಾನ್ ಸಿಟಿ ಮತ್ತು ರಾಜ್ಯ ಬಿ.ಜೆ.ಪಿ ಕಾರ್ಯಕಾರಿಣಿ ಸದಸ್ಯರು ಮತ್ತು ದಾಸರ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ.ಎಸ್.ಮುನಿರಾಜು ಇವರ ಪ್ರಾಯೋಜಕತ್ವದಲ್ಲಿ,
 ಮೊದಲ ಆವೃತ್ತಿಯ ಅದ್ಧೂರಿಯ ಹೊನಲು ಬೆಳಕಿನ “ಬಿಗ್ ಬ್ಯಾಷ್ ದಾಸರಹಳ್ಳಿ” ಪಂದ್ಯಾಕೂಟವನ್ನು ಆಯೋಜಿಸಲಾಗಿದೆ.
ಫೆಬ್ರವರಿ 26,27,28 ಮತ್ತು ಮಾರ್ಚ್ 1 ರಂದು,ಬಗಲಗುಂಟೆ ವಾರ್ಡ್ ನಂ-14,ಎಮ್.ಇ.ಐ ಲೇಯೌಟ್ ಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು,ಪ್ರಥಮ ಬಹುಮಾನ 3,99,999 ಮತ್ತು ಬೆಳ್ಳಿ ಟ್ರೋಫಿ,ದ್ವಿತೀಯ ಬಹುಮಾನ 2,22,222 ಮತ್ತು ಬೆಳ್ಳಿ ಟ್ರೋಫಿ ತೃತೀಯ 77,777 ಮತ್ತು ಬೆಳ್ಳಿ ಟ್ರೋಫಿ ಮತ್ತು ಚತುರ್ಥ 55,555 ಮತ್ತು ಬೆಳ್ಳಿ ಟ್ರೋಫಿ ನೀಡಲಾಗುತ್ತಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಉಡುಗೊರೆಗಳನ್ನು ಪಡೆಯಲಿದ್ದಾರೆ.
ಫೆಬ್ರವರಿ 25 ಶುಕ್ರವಾರ ಸಂಜೆ 6 ಗಂಟೆಗೆ ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು,ಕೇಂದ್ರ
 ಸರಕಾರದ ಮಾಜಿ ಸಚಿವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು,ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರು ಶ್ರೀ‌.ಡಿ.ವಿ.ಸದಾನಂದ ಗೌಡ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ.ಎಸ್.ಮುನಿರಾಜು ಇವರು  “ಬಿಗ್ ಬ್ಯಾಶ್ ದಾಸರಹಳ್ಳಿ ಸೀಸನ್-೧” ಉದ್ಘಾಟನೆ ನೆರವೇರಿಸಲಿದ್ದಾರೆ.ಈ ಸಂದರ್ಭ ತಂಡದ ಮಾಲೀಕರ ಭೇಟಿ,ಆಟಗಾರರ ಪರಿಚಯ,ಟ್ರೋಫಿ ಅನಾವರಣ ಆಟಗಾರರಿಗೆ ಜೆರ್ಸಿ ವಿತರಣೆ ನಡೆಯಲಿದೆ.
ಉದ್ಘಾಟನೆಯ ಬಳಿಕ ಟೂರ್ನಮೆಂಟ್ ನ ಆಯೋಜಕರ ವಿರುದ್ಧವಾಗಿ ಪೊಲೀಸ್ ತಂಡ ಮತ್ತು A ಗ್ರೂಪ್ ನ  ಮಾಲೀಕರ ತಂಡದ ವಿರುದ್ಧವಾಗಿ B ಗ್ರೂಪ್ ನ ಮಾಲೀಕರ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ.
ಭಾಗವಹಿಸುವ 12 ತಂಡಗಳ ವಿವರ ಈ ಕೆಳಗಿನಂತಿದೆ
1)ಸುಧೀರ್ ರೆಡ್ಡಿ ಮಾಲೀಕತ್ವದ ಟೆಂಪಲ್ ಬುಲ್ಸ್
2)ಎನ್‌‌.ನರಸಿಂಹ ಮೂರ್ತಿ ಮಾಲೀಕತ್ವದ ಸಿಂಹ ಇಲೆವೆನ್
3)ಸತೀಶ್ ಮಿತ್ರವೃಂದ ಮಾಲೀಕತ್ವದ ಸತೀಶ್ ಇಲೆವೆನ್
4)ಶಶಿಕಾಂತ್ ರಾವ್ ಮಾಲೀಕತ್ವದ ಸ್ನೇಹಜೀವಿ
5)ಮಣಿ ಶಶಾಂಕ್ ಮಾಲೀಕತ್ವದ ಆರ್.ಸಿ‌.ಬಿ ಇಲೆವೆನ್
6)ಮನೋಜ್ ಮಾಲೀಕತ್ವದ ರಂಗ ಇಲೆವೆನ್
7)ಪಿ.ಎನ್‌.ಕೃಷ್ಣಮೂರ್ತಿಯವರ ಮಾಲೀಕತ್ವದ ಪಿ‌.ಎನ್‌.ಕೆ ಟೀಮ್
8)ಮಂಜುನಾಥ್.ಟಿ‌.ಮಾಲೀಕತ್ವದ ಕ್ರಿಕೆಟ್ ನಕ್ಷತ್ರ
9)ಮುರಳೀಧರ್.ಹೆಚ್.ಎಮ್ ಮಾಲೀಕತ್ವದ  ಮಹಾಶ್ರೀ ಇಲೆವೆನ್
10)ಪಿ.ಎನ್.ದಿನೇಶ್ ಮಾಲೀಕತ್ವದ ದಿನೇಶ್ ಸಾಂಘ್ವಿ ಕ್ರಿಕೆಟ್
11)ಮಂಜುನಾಥ್.ಎಸ್ ಮಾಲೀಕತ್ವದ ಚೇತು ಇಲೆವೆನ್
12)ಅರುಣ್ ಮಾಲೀಕತ್ವದ ವಿಷು ಎಂಟರ್ ಪ್ರೈಸಸ್
ಪಂದ್ಯಾವಳಿಯ ನೇರ ಪ್ರಸಾರ M.Sports ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

18 − 9 =

Latest news

Проститутки Москва Ашу: практический гид по доступу, приватности и премиум‑опыту

Проститутки Москва ашу: практический гид, который вы искали Что такое «Ашу» и...

ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ

ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ **ಮಂಗಳೂರು, ಜೂನ್ 29:** ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ...

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್.

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್. ಬ್ರಹ್ಮಾವರ ಸಂತೆಕಟ್ಟೆಯಲ್ಲಿ ವಿರಾಟ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಮಾನ್ಸೂನ್ ಟ್ರೋಫಿ -26 ಕ್ರಿಕೆಟ್ ಪಂದ್ಯಾಟವು ಶುಭಾರಂಭಗೊಂಡಿತು. ದುಬೈ ಟೆಕ್ನೋಟೈಟಾನ್ಸ್ ಕ್ರಿಕೆಟ್...

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ; ಅದು ಜನರ ಭಾವನೆ ಮತ್ತು ಗುರುತಿನ ಭಾಗವಾಗಿದೆ. ಆದರೆ ದೀರ್ಘಕಾಲದವರೆಗೆ ಬಿಹಾರ...
- Advertisement -spot_imgspot_img

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...

Must read

- Advertisement -spot_imgspot_img

You might also likeRELATED
Recommended to you