7.1 C
London
Tuesday, April 23, 2024
Homeಕ್ರಿಕೆಟ್ಸೌದಿ ಅರೇಬಿಯಾ-M.P.L-2021 ಪ್ರಶಸ್ತಿಗೆ ಮುತ್ತಿಕ್ಕಿದ ನಮ್ಮ ಕುಡ್ಲ ವಾರಿಯರ್ಸ್‌

ಸೌದಿ ಅರೇಬಿಯಾ-M.P.L-2021 ಪ್ರಶಸ್ತಿಗೆ ಮುತ್ತಿಕ್ಕಿದ ನಮ್ಮ ಕುಡ್ಲ ವಾರಿಯರ್ಸ್‌

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಉದ್ಯಮಿ ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಮಿ.ಸಲೀಂ ಅಬ್ದುಲ್ ಘನಿ ಇವರ ಸಾರಥ್ಯದಲ್ಲಿ,ಟಾರ್ಗೆಟ್ ಗಯ್ಸ್ ತಂಡದ ಪ್ರೋತ್ಸಾಹದೊಂದಿಗೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಪ್ರತಿಷ್ಠಿತ M.P.L-2021 ಪ್ರಶಸ್ತಿ ನಮ್ಮ ಕುಡ್ಲ ವಾರಿಯರ್ಸ್‌ ಜಯಿಸಿದೆ.
ಹಗಲು ರಾತ್ರಿ ನಡೆದ ಈ ಪಂದ್ಯಾಟದಲ್ಲಿ ಸೌದಿಯ ಬಲಿಷ್ಠ ತಂಡಗಳಾದ ಎ.ಟಿ.ಎಸ್ ವಾರಿಯರ್ಸ್‌,ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು,ಶಾಕ್ಸ್ ಇಲೆವೆನ್,ನಮ್ಮ‌ ಕುಡ್ಲ ವಾರಿಯರ್ಸ್‌,ಫೈವ್ ಸ್ಟಾರ್ ಅಡೂರು ಭಾಗವಹಿಸಿತ್ತು.
ಕ್ವಾಲಿಫೈಯರ್ ಹಂತದಲ್ಲಿ ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು,ನಮ್ಮ‌ ಕುಡ್ಲ ವಾರಿಯರ್ಸ್‌ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಪಡೆದರೆ,ಎಲಿಮಿನೇಟರ್ ಸುತ್ತಿನಲ್ಲಿ ನಮ್ಮ ಕುಡ್ಲ ವಾರಿಯರ್ಸ್‌ ಎ.ಟಿ.ಎಸ್ ವಾರಿಯರ್ಸ್‌ ತಂಡವನ್ನು ಸೋಲಿಸಿ ಫೈನಲ್ ಟಿಕೆಟ್ ಪಡೆದಿತ್ತು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕ್ಲಾಸಿಕ್ ಪುತ್ತೂರು 7 ಓವರ್ ಗಳಲ್ಲಿ 53 ರನ್ ಗಳಿಸಿತ್ತು.ಇದಕ್ಕುತ್ತರವಾಗಿ ನಮ್ಮ‌ಕುಡ್ಲ ವಾರಿಯರ್ಸ್‌ ನ ದಾಂಡಿಗರ ಸಾಹಸದಿಂದ 6.3 ಓವರ್ ಗಳಲ್ಲೇ ಗುರಿಯನ್ನು ಸಾಧಿಸಿ ಪ್ರಶಸ್ತಿಗೆ ಮುತ್ತಿಕ್ಕಿತು.
ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ನಮ್ಮ ಕುಡ್ಲದ ಹೈದರ್ ಆಲಿ ಉಚ್ಚಿಲ ಪರ್ಪಲ್ ಕ್ಯಾಪ್ ಹಾಗೂ ಎ.ಟಿ.ಎಸ್ ವಾರಿಯರ್ಸ್‌ ನ ಶಮ್ಶುದ್ದೀನ್ ಬಂಟ್ವಾಳ ಆರೆಂಜ್ ಕ್ಯಾಪ್ ಪಡೆದರು.ಸರಣಿಯುದ್ದಕ್ಕೂ ಸರ್ವಾಂಗೀಣ ಶ್ರೇಷ್ಠ ನಿರ್ವಹಣೆ ನೀಡಿದ ಹೈದರ್ ಆಲಿ ಉಚ್ಚಿಲ ಸರಣಿಶ್ರೇಷ್ಟ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು…
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

nine + 10 =