8 C
London
Tuesday, April 23, 2024
Homeಕ್ರಿಕೆಟ್ಕಷ್ಟ ಹಂಚಿಕೊಂಡು ಪೂಮಾದಿಂದ ಉಚಿತ ಶೂ ಪಡೆದಿದ್ದ ಕ್ರಿಕೆಟಿಗನಿಗೆ ಸಂಕಷ್ಟ...!!

ಕಷ್ಟ ಹಂಚಿಕೊಂಡು ಪೂಮಾದಿಂದ ಉಚಿತ ಶೂ ಪಡೆದಿದ್ದ ಕ್ರಿಕೆಟಿಗನಿಗೆ ಸಂಕಷ್ಟ…!!

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಇತ್ತೀಚೆಗಷ್ಟೇ ಜಿಂಬಾಬ್ವೆ ತಂಡದ ಆಟಗಾರ ರ‍್ಯಾನ್ ಬರ್ಲ್‌ ನಮ್ಮ ತಂಡಕ್ಕೆ ಕ್ರಿಕೆಟ್ ಆಡಲು ಸರಿಯಾದ ಶೂ ಇಲ್ಲ ಎಂದು. ಪ್ರತಿ ಪಂದ್ಯದ ನಂತರ ನಾವುಗಳು ಕಿತ್ತುಹೋದ ಶೂಗಳನ್ನು ಧರಿಸಿ ಕ್ರಿಕೆಟ್ ಆಡುತ್ತಿದ್ದೇವೆ, ಪ್ರತಿ ಸರಣಿ ಮುಗಿದ ನಂತರ ಕಿತ್ತುಹೋದ ಶೂಗಳನ್ನು ನಾವೇ ಸರಿಮಾಡುಕೊಳ್ಳಬೇಕಿದೆ. ಹಾಗೂ ಹೊಲಿದುಕೊಳ್ಳುತ್ತಿದ್ದೇವೆ ಎಂದು ಟ್ವೀಟ್ ಮಾಡುವುದರ ಮೂಲಕ ಪ್ರಾಯೋಜಕತ್ವಕ್ಕಾಗಿ ಮನವಿ ಮಾಡಿದ್ದರು.
ರ‍್ಯಾನ್ ಬರ್ಲ್‌ ಮಾಡಿದ ಮನವಿಗೆ 24 ಗಂಟೆಯೊಳಗೆ ಸ್ಪಂದಿಸಿದ ಪ್ರತಿಷ್ಠಿತ  ಪೂಮಾ ಸಂಸ್ಥೆ ಜಿಂಬಾಬ್ವೆ ಆಟಗಾರರಿಗೆ ಉಚಿತ ಶೂಗಳನ್ನು ನೀಡುವುದರ ಮೂಲಕ ಮಾನವೀಯತೆ ಮೆರೆಯಿತು. ಈ ಮೂಲಕ ಶೂಗಳಿಲ್ಲದೆ ಕಷ್ಟಪಡುತ್ತಿದ್ದ ಜಿಂಬಾಬ್ವೆ ತಂಡಕ್ಕೆ ಹೊಚ್ಚಹೊಸ ಶೂಗಳು ಕೈ ಸೇರಿತ್ತು.
ಪೂಮಾ ಸಂಸ್ಥೆ ಮುಂದೆ ಬಂದು ಸ್ಪಂದಿಸಿದಕ್ಕೆ  ಜಿಂಬಾಬ್ವೆ ತಂಡದ ಆಟಗಾರರು ಸಂತೋಷವನ್ನು ವ್ಯಕ್ತಪಡಿಸಿದ್ದರು, ಹಾಗೂ ಟ್ವೀಟ್ ಮೂಲಕ ಮನವಿ ಮಾಡಿದ್ದ ರ‍್ಯಾನ್ ಬರ್ಲ್‌ ಮನವಿಯಂತೆ ಬೇಡಿಕೆ ಈಡೇರಿತ್ತು.
ಆದರೆ ಇದೀಗ ಈ ಎಲ್ಲಾ ಬೆಳವಣಿಗೆಯ ನಂತರ  ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದ ರ‍್ಯಾನ್ ಬರ್ಲ್‌ನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದೆಯಂತೆ. ರ‍್ಯಾನ್ ಬರ್ಲ್‌ ಶೂ ಪ್ರಾಯೋಜಕತ್ವ ಕೇಳಿ ಮಾಡಿದ್ದ ಟ್ವೀಟ್ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್‌ಗೆ ಮಾಡಿರುವ ಅವಮಾನ ಎಂದು ಬೋರ್ಡ್ ನ ಸದಸ್ಯರು ಅಂದುಕೊಂಡಿದ್ದಾರೆಂದು ಹೇಳಲಾಗುತ್ತಿದ್ದು ಆತನ ವಿರುದ್ಧ ಕಠಿಣ ಕ್ರಮಕ್ಕೆ ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ರ‍್ಯಾನ್ ಬರ್ಲ್‌ ತಂಡದಲ್ಲಿ ಇರುತ್ತಾರೊ ಇಲ್ಲವೊ ಎನ್ನುವ ಅನುಮಾನವಿದೆ. ತಂಡದಲ್ಲಿ  ಅವಕಾಶ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದ್ದು ಟ್ವೀಟ್ ಮೂಲಕ ಕಷ್ಟವನ್ನು ಹಂಚಿಕೊಂಡು  ಸಹಾಯ ಪಡೆದಿದ್ದ ರ‍್ಯಾನ್ ಬರ್ಲ್‌ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎನ್ನುವುದು ಮಾತ್ರ ದುರಂತವೆ ಹೌದು….!!!
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

eight + 12 =