ನಮ್ಮ ಬೆಂಗಳೂರಲ್ಲಿ ವಿಶ್ವಕಪ್‌ ವಿಜೇತೆಯರ ಪತ್ರಿಕಾಗೋಷ್ಠಿ

ನಮ್ಮ ಬೆಂಗಳೂರಲ್ಲಿ ವಿಶ್ವಕಪ್‌ ವಿಜೇತೆಯರ ಪತ್ರಿಕಾಗೋಷ್ಠಿ

ನಮ್ಮ ಬೆಂಗಳೂರಲ್ಲಿ ವಿಶ್ವಕಪ್‌ ವಿಜೇತೆಯರ ಪತ್ರಿಕಾಗೋಷ್ಠಿ

ವಿಶ್ವಕಪ್‌ ಜಯದ ಸಂಭ್ರಮ ಇನ್ನೂ ದೇಶದ ಮನಸ್ಸಿನಲ್ಲಿ ತಾಜಾಗಿರುವ ಸಂದರ್ಭದಲ್ಲಿ, ಭಾರತದ ಮಹಿಳಾ ಅಂಧರ ಕ್ರಿಕೆಟ್‌ ತಂಡದ ಸದಸ್ಯರು ಬೆಂಗಳೂರಿನಲ್ಲಿ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ಡಾ. ಮಹಾಂತೇಶ್ ಜಿ. ಕೆ. (ಅಧ್ಯಕ್ಷರು, CABI), ದೀಪಿಕಾ (ನಾಯಕಿ, ಭಾರತೀಯ ಮಹಿಳಾ ಅಂಧರ ಕ್ರಿಕೆಟ್‌ ತಂಡ) ಹಾಗೂ ಗಂಗಾ (ಉಪನಾಯಕಿ, ಭಾರತೀಯ ಮಹಿಳಾ ಅಂಧರ ಕ್ರಿಕೆಟ್‌ ತಂಡ) ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಮಹಾಂತೇಶ್ ಅವರು, “ಈ ಜಯವು ಕೇವಲ ತಂಡದ್ದೆ ಅಲ್ಲ; ದೇಶದ ಪ್ರತಿಯೊಬ್ಬರದು. ಈ ಯುವತಿಯರು ಪ್ರದರ್ಶಿಸಿದ ಶಿಸ್ತಿನ ಆಟ ಮತ್ತು ಧೈರ್ಯವು ಅನನ್ಯ,” ಎಂದು ಹೇಳಿದರು. ತಂಡದ ನಾಯಕಿ ದೀಪಿಕಾ ಅವರು, ವಿಶ್ವಕಪ್‌ ಪ್ರಯಾಣದ ಅನುಭವಗಳನ್ನು ಹಂಚಿಕೊಂಡು, “ತಂಡದ ಏಕತೆ, ಪರಿಶ್ರಮ ಮತ್ತು ಅಭಿಮಾನಿಗಳ ನಂಬಿಕೆಯೇ ನಮ್ಮ ಸಾಮರ್ಥ್ಯವಾಯಿತು,” ಎಂದು ಸಂತಸ ವ್ಯಕ್ತಪಡಿಸಿದರು. ಉಪನಾಯಕಿ ಗಂಗಾ ಅವರು ಸಹ ತಮ್ಮ ಸಹ ಆಟಗಾರರ ಶ್ರಮ ಹಾಗೂ ದೇಶದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಂಡವು ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿತು. ನಿರಂತರ ಬೆಂಬಲ, ಪ್ರೋತ್ಸಾಹ ಮತ್ತು ಅವರ ಸಾಧನೆಗಳನ್ನು ದೇಶದ ಮುಂಭಾಗಕ್ಕೆ ತಲುಪಿಸಿದಕ್ಕಾಗಿ ಮಾಧ್ಯಮ ತಂಡಕ್ಕೆ ಅಭಿನಂದನೆಗಳು ಹಾಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಲಾಯಿತು.

ವಿಶ್ವಕಪ್‌ ಗೆಲುವಿನ ಈ ಉಲ್ಲಾಸ ಬೆಂಗಳೂರು ನಗರದಲ್ಲಿ ಹೊಸ ಉತ್ಸಾಹ ತುಂಬಿದ್ದು, ಮಹಿಳಾ ಅಂಧರ ಕ್ರಿಕೆಟ್‌ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಎನಿಸಿದೆ.

Leave a Reply

Your email address will not be published. Required fields are marked *