ಕ್ರಿಕೆಟ್ಬದುಕು ಕೊಡುವ ಅಚ್ಚರಿಗಳಿಗೆ ಸಾಕ್ಷಿ ಈ ಇಬ್ಬರು ಜೊತೆಗಾರರು..!

ಬದುಕು ಕೊಡುವ ಅಚ್ಚರಿಗಳಿಗೆ ಸಾಕ್ಷಿ ಈ ಇಬ್ಬರು ಜೊತೆಗಾರರು..!

-

- Advertisment -spot_img

ಬದುಕು ಕೊಡುವ ಅಚ್ಚರಿಗಳಿಗೆ ಸಾಕ್ಷಿ ಈ ಇಬ್ಬರು ಜೊತೆಗಾರರು..!

ಅದೊಂದು ಸಿಂಹದಮರಿ ಸೈನ್ಯ.. ಅದಕ್ಕೊಬ್ಬ ನಾಯಕ.. ಅವನು ಕಿಡಿ ಕಿಚ್ಚು.. ಅವನ ತಂಡ ಅವನ ಹಾಗೆಯೇ ಬೆಂಕಿ.

ಆ ಸಿಂಹದಮರಿ ಸೈನ್ಯ ಮಲೇಷ್ಯಾದಲ್ಲಿ ಯುದ್ಧ ಗೆದ್ದಿತ್ತು ಆ ದಿನ.. ಇನ್ನೇನು ಗೆಲುವಿನ ಬಾಗಿಲು ಮುಚ್ಚಿತೆನ್ನುವಷ್ಟರಲ್ಲಿ ಆ ಬಾಗಿಲನ್ನು ಒದ್ದು, ಸೋಲಿನ ಚಕ್ರವ್ಯೂಹವನ್ನು ಭೇದಿಸಿ ವಿಜೃಂಭಿಸಿತ್ತು ಆ ಯುವಸೈನ್ಯ.

ಅಂದ ಹಾಗೆ, ಇದು 2008ರ ಅಂಡರ್-19 ವಿಶ್ವಕಪ್ ವಿಜಯದ ಕಥೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಕಿರಿಯರ ವಿಶ್ವಕಪ್ ಗೆದ್ದು ಬೀಗಿದ ಕಥೆ.

ಆ ತಂಡಲ್ಲಿದ್ದವರ ಪೈಕಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ದಿಗ್ಗಜರ ಸಾಲು ಸೇರಿದರೆ, ಉಳಿದವರದ್ದು ಒಂದೊಂದು ಕಥೆ.

ಈ ಕಥೆಯ ಕಥಾನಾಯಕ ಒಬ್ಬನಲ್ಲ, ಇಬ್ಬರು. ಒಬ್ಬ ಅಜಿತೇಶ್ ಅರ್ಗಲ್, ಇನ್ನೊಬ್ಬ ತನ್ನಯ್ ಶ್ರೀವಾತ್ಸವ್.
ಇಬ್ಬರೂ ಆ ಅಂಡರ್-19 ವಿಶ್ವಕಪ್ ಫೈನಲ್ ಹೀರೋಗಳು.
ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 5 ಓವರ್’ಗಳಲ್ಲಿ ಕೇವಲ 7 ರನ್ನಿತ್ತು 2 ವಿಕೆಟ್ ಪಡೆದು ಭಾರತ ಚಾಂಪಿಯನ್ ಆಗಲು ಕಾರಣರಾದವರಲ್ಲಿ ಒಬ್ಬ ಅಜಿತೇಶ್. ಅದೇ ಪಂದ್ಯದಲ್ಲಿ ಭಾರತ ಪರ ಟಾಪ್ ಸ್ಕೋರರ್ ಆಗಿದ್ದವನು (46 ರನ್) ತನ್ಮಯ್ ಶ್ರೀವಾತ್ಸವ್.

ಅಜಿತೇಶ್ ಅರ್ಗಲ್ ಮಧ್ಯಪ್ರದೇಶದ ಬಲಗೈ ಮಧ್ಯಮ ವೇಗದ ಬೌಲರ್.. ಅಂದು ಅಂಡರ್-19 ವಿಶ್ವಕಪ್ ಗೆದ್ದ ತಂಡದ ನಾಯಕ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ದಿಗ್ಗಜನೆನಿಸಿಕೊಂಡಿದ್ದಾನೆ. ರವೀಂದ್ರ ಜಡೇಜ ವಿಶ್ವಶ್ರೇಷ್ಠ ಆಲ್ರೌಂಡರ್.. ಮನೀಶ್ ಪಾಂಡೆ ಭಾರತ ಪರ ಮಿಂಚಿ ಮರೆಯಾಗಿದ್ದಾನೆ.. ಈ ಹುಡುಗರದ್ದು ಬೇರೆಯೇ ಕಥೆ. ಭಾರತ ಪರ ಆಡುವ ಕನಸು ನನಸಾಗಲಿಲ್ಲ. ಕ್ರಿಕೆಟ್ ಬಿಟ್ಟು ಇನ್ಕಮ್ ಟ್ಯಾಕ್ಸ್ ಇನ್ಸ್’ಪೆಕ್ಟರ್ ಆಗಿದ್ದ ಅಜಿತೇಶ್, ಈಗ ಕ್ರಿಕೆಟ್ ಅಂಪೈರ್.

ಉತ್ತರ ಪ್ರದೇಶದ ಕಾನ್ಪುರದವನಾದ ತನ್ಮಯ್ ಶ್ರೀವಾತ್ಸವ್ ಕೂಡ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿ ಅಂಪೈರಿಂಗ್ ವೃತ್ತಿಗೆ ಕಾಲಿಟ್ಟಿದ್ದಾನೆ. ವಿಶೇಷವೆಂದರೆ ಅಂಡರ್-19 ವಿಶ್ವಕಪ್ ಹೀರೋಗಳಿಬ್ಬರೂ ದೇಶೀಯ ಕ್ರಿಕೆಟ್’ನ ಒಂದೇ ಪಂದ್ಯದಲ್ಲಿ ಅಂಪೈರಿಗಳಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬದುಕು ಕೊಡುವ ಅಚ್ಚರಿಗಳೇ ಹೀಗೆ.

LEAVE A REPLY

Please enter your comment!
Please enter your name here

five + 4 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you