
ಜೈ ಕರ್ನಾಟಕ ಬೆಂಗಳೂರು ಸಚಿನ್ ಮಹಾದೇವ್ ಅವರಿಗೆ ಪಿತೃ ವಿಯೋಗ
ರಾಜ್ಯದ ಟೆನಿಸ್ ಬಾಲ್ ಕ್ರಿಕೆಟ್ ನ ಹಿರಿಯ ಸಂಸ್ಥೆ ಜೈ ಕರ್ನಾಟಕ ಬೆಂಗಳೂರು ತಂಡದ ಖ್ಯಾತ ಆಲ್ರೌಂಡರ್ ಆಟಗಾರ ಸಚಿನ್ ಮಹಾದೇವ್ ಅವರ ತಂದೆ ಎಚ್. ಟಿ ಮಹಾದೇವ್ (70 ವರ್ಷ) ಇಂದು ಅಲ್ಪಕಾಲದ ಅಸೌಖ್ಯದಿಂದ ಇಂದು ರಾತ್ರಿ ಅಸುನೀಗಿದರು.


ಹೆಚ್.ಟಿ ಮಹಾದೇವ್ ಇವರು ಕರ್ನಾಟಕ ರಾಜ್ಯದ ಅಥ್ಲೆಟಿಕ್ ಅಸೋಸಿಯೇಷನ್ ಇದರ ಉಪಾಧ್ಯಕ್ಷರಾಗಿದ್ದರು. ಭಾರತೀಯ ರೈಲ್ವೇ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು.
ಅತ್ಯಂತ ಉತ್ಸಾಹಿ ವ್ಯಕ್ತಿತ್ವದ ಮಹಾದೇವರವರು ಸಂಘಟನಾ ಚತುರರು,ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಅನೇಕ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡ ಸಾಧಕರು, ಮಾತ್ರವಲ್ಲದೆ ಸರ್ವರಿಗೂ ಸ್ಫೂರ್ತಿದಾತರಾಗಿದ್ದರು. ಇವರ ಅಗಲುವಿಕೆ ಆತ್ಮೀಯ ವಲಯಕ್ಕೆ, ಹಾಗೂ ಕುಟುಂಬವರ್ಗಕ್ಕೆ ತುಂಬಲಾರದ ನಷ್ಟ. ಶ್ರೀಯುತರು ಪತ್ನಿ, ಓರ್ವ ಪುತ್ರಿ ಹಾಗೂ ಈರ್ವರು ಪುತ್ರರೊಂದಿಗೆ ಸರಳ ಸಜ್ಜನ ಜೀವನ ನಡೆಸಿದವರು.
ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ,
ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸ್ಪೋರ್ಟ್ಸ್ ಕನ್ನಡ ರಾಜ್ಯ ಟೆನಿಸ್ ಕ್ರಿಕೆಟ್, ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮತ್ತು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಪ್ರಾರ್ಥಿಸುತ್ತೇವೆ.
ಅರಸೀಕೆರೆ ಮಹದೇವಣ್ಣನವರು ದೈವಾಧೀನರಾಗಿದ್ದಾರೆ. ಶನಿವಾರ ಬೆಳಿಗ್ಗೆ 6 ರಿಂದ 9.30 ರ ವರೆಗೆ ಅರಸೀಕೆರೆ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಂತರ ಅವರ ಸ್ವಗ್ರಾಮ ಹೊನ್ನೇನಹಳ್ಳಿಗೆ ಕರೆತರಲಾಗುವುದೆಂದು ಕುಟುಂಬ ವರ್ಗ ತಿಳಿಸಿರುತ್ತಾರೆ.




