ಕ್ರಿಕೆಟ್ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ?

ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ?

-

- Advertisment -spot_img

ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ?

ಭಾರತ ಕ್ರಿಕೆಟ್ ತಂಡ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್’ಗಳ ಹೀನಾಯ ಸೋಲು ಕಂಡಿದೆ.

ತವರು ನೆಲದಲ್ಲಿ ಟೀಮ್ ಇಂಡಿಯಾ ಸೋಲು ಕಾಣುತ್ತಿದ್ದಂತೆ ಆ ಸೋಲಿಗೆ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಹೊಣೆ ಮಾಡಲಾಗುತ್ತಿದೆ. ಭಾರತದ ಸೋಲಿಗೆ ರಾಹುಲ್ ಅವರೇ ಕಾರಣ ಎಂದು ದೂಷಿಸಲಾಗುತ್ತಿದೆ.

ಹೌದು, ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ರಾಹುಲ್ ಬಂಗಾರದಂಥಾ ಅವಕಾಶಗಳನ್ನು ತಮ್ಮ ಕೈಯಾರೆ ಹಾಳು ಮಾಡಿಕೊಂಡಿದ್ದಾರೆ. ಪ್ರಥಮ ಇನ್ನಿಂಗ್ಸ್’ನಲ್ಲಿ ಶೂನ್ಯಕ್ಕೆ ಔಟಾಗಿದ್ದ ರಾಹುಲ್ ದ್ವಿತೀಯ ಇನ್ನಿಂಗ್ಸ್’ನಲ್ಲಿ 12 ರನ್ ಗಳಿಸಿ ಔಟಾಗಿದ್ದರು. ಈ ಮೂಲಕ ಮನೆಯಂಗಳದಲ್ಲಿ ಮಿಂಚುವ ಸುವರ್ಣಾವಕಾಶವನ್ನು ವ್ಯರ್ಥ ಮಾಡಿದ್ದರು.

ಹಾಗಂತ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಭಾರತದ ಸೋಲಿಗೆ ನಿಜಕ್ಕೂ ರಾಹುಲ್ ಕಾರಣರೇ? ಖಂಡಿತಾ ಇಲ್ಲ.. ಇದು ನಾಯಕ ರೋಹಿತ್ ಶರ್ಮಾ ಪ್ರಮಾದದಿಂದ ಎದುರಾಗಿದ್ದ ಸೋಲು. ಚಿನ್ನಸ್ವಾಮಿ ಪಿಚ್ ವೇಗದ ಬೌಲರ್’ಗಳಿಗೆ ನೆರವು ನೀಡಲಿದೆ ಎಂಬುದನ್ನು ತಿಳಿದೂ ಪಂದ್ಯದ 2ನೇ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡದ್ದೇ ದೊಡ್ಡ ಪ್ರಮಾದ. ಪರಿಣಾಮ ಭಾರತ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 46 ರನ್’ಗಳಿಗೆ ಆಲೌಟಾಗಿತ್ತು. ನಂತರ ನ್ಯೂಜಿಲೆಂಡ್’ನ ಪ್ರಥಮ ಇನ್ನಿಂಗ್ಸ್’ನಲ್ಲಿ 7 ವಿಕೆಟ್’ಗೆ 233 ರನ್ ಗಳಿಸಿದ್ದಾಗ 8ನೇ ವಿಕೆಟ್’ಗೆ ಜೊತೆಗೂಡಿದ್ದ ರಚಿನ್ ರವೀಂದ್ರ ಮತ್ತು ಟಿಮ್ ಸೌಥಿ ಶತಕದ ಜೊತೆಯಾಟವಾಡಿದ್ದರು. ಈ ಜೊತೆಯಾಟವನ್ನು ಬೇಗನೆ ಮುರಿಯಲು ವಿಫಲವಾಗಿದ್ದೇ ಭಾರತದ ಸೋಲಿಗೆ ಕಾರಣ. ಸ್ವತಃ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್’ನಲ್ಲಿ ಮೂರು ಕ್ಯಾಚ್’ಗಳನ್ನು ಕೈಚೆಲ್ಲಿದ್ದರು.

ಇನ್ನು ರಾಹುಲ್ ವೈಫಲ್ಯದ ಬಗ್ಗೆ ಮಾತನಾಡುವವರು ರೋಹಿತ್ ಶರ್ಮಾ ವೈಫಲ್ಯದ ಬಗ್ಗೆ ಮೌನವಾಗಿರುವುದೇಕೆ?
10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರಾಹುಲ್ 339 ರನ್ ಕಲೆ ಹಾಕಿದ್ದರೆ, ನಾಯಕ ರೋಹಿತ್ ಶರ್ಮಾ ಕೇವಲ 275 ರನ್ ಗಳಿಸಿದ್ದಾರೆ. ರಾಹುಲ್’ರನ್ನು ಟೀಮ್ ಇಂಡಿಯಾದಿಂದ ಕೈಬಿಡಲೇಬೇಕು ಎಂದಾದರೆ ರೋಹಿತ್ ಶರ್ಮಾ ಸಾಧನೆಯೇನು? ಕೇವಲ ನಾಯಕನೆಂಬ ಕಾರಣಕ್ಕೆ ತಂಡದಲ್ಲಿ ಮುಂದುವರಿಯಬೇಕೇ?

ಕಳೆದ 10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರಾಹುಲ್ ಗಳಿಸಿರುವ ರನ್: 101, 4, 8, 86, 22, 16, 22*, 68, 0, 12

ಕಳೆದ 10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರೋಹಿತ್ ಶರ್ಮಾ ಗಳಿಸಿರುವ ರನ್: 19, 2, 55, 103, 6, 5, 23, 8, 2, 52

LEAVE A REPLY

Please enter your comment!
Please enter your name here

1 × 4 =

Latest news

ಶ್ರೀ ಜಲವಿನಾಯಕ ಟ್ರೋಫಿ 2026: ಕ್ರಿಕೆಟ್ ಪಂದ್ಯಾವಳಿಗೆ ಸಜ್ಜಾದ ಹುಣಸವಳ್ಳಿ

ಶ್ರೀ ಜಲವಿನಾಯಕ ಟ್ರೋಫಿ 2026: ಕ್ರಿಕೆಟ್ ಪಂದ್ಯಾವಳಿಗೆ ಸಜ್ಜಾದ ಹುಣಸವಳ್ಳಿ ಹುಣಸವಳ್ಳಿ ಹಾಗೂ ಕುರುವಳ್ಳಿ ಪೋಸ್ಟ್, ತೀರ್ಥಹಳ್ಳಿ ತಾಲೂಕು ಕ್ರೀಡಾಭಿಮಾನಿಗಳಿಗೆ ಸಂತಸದ ಸುದ್ದಿ. ಆಗುಂಬೆ ಮತ್ತು ಮುತ್ತೂರು...

ಭಾರತೀಯ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿ ಹೀರೋ ಆದ ಸಂಜು ಸ್ಯಾಮ್ಸನ್ ಕಥೆ

  ಭಾರತೀಯ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿ ಹೀರೋ ಆದ ಸಂಜು ಸ್ಯಾಮ್ಸನ್ ಕಥೆ ಕ್ರಿಕೆಟ್ ಜೀವನದಲ್ಲಿ ಕೆಲ ಕ್ಷಣಗಳು ಆಟಗಾರನ ಜೀವನವನ್ನೇ ಬದಲಾಯಿಸುತ್ತವೆ. ಆ ಕ್ಷಣಗಳು ನೋವು,...

ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ!

  ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ! ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಹಾಲಿ ಚಾಂಪಿಯನ್ ಆಗಿ ಟಿ20 ವಿಶ್ವಕಪ್ ಉಳಿಸಿಕೊಳ್ಳುವುದರ ಜೊತೆಗೆ, ತವರು ನೆಲದಲ್ಲಿ...

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ ಕ್ರಿಕೆಟ್ ಲೋಕದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ Team India ತಂಡವು ಟಿ20 ವಿಶ್ವಕಪ್‌ನಲ್ಲಿ ತನ್ನ ಪ್ರಭಾವವನ್ನು...
- Advertisement -spot_imgspot_img

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್ **New Mangalore Port Authority (ಎನ್‌ಎಂಪಿಎ)** ತಂಡವು **NIPM Cricket Explosion Corporate Cricket Tournament...

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ; NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ ಮಂಗಳೂರು: ಮಾನವ ಸಂಪನ್ಮೂಲ ಕ್ಷೇತ್ರದ ಪ್ರಮುಖ ಸಂಘಟನೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ (NIPM)...

Must read

- Advertisement -spot_imgspot_img

You might also likeRELATED
Recommended to you