18.4 C
London
Saturday, May 18, 2024
Homeಕ್ರಿಕೆಟ್ಪ್ರವೇಶ ಶುಲ್ಕ ರಹಿತ-ಗರಿಷ್ಟ ಬಹುಮಾನ-ಎತ್ತರದ ಟ್ರೋಫಿಗಳು-ದಾಖಲೆ ಸೃಷ್ಟಿಸಿದ್ದ ಅನ್ಪ್ರೆಡಿಕ್ಟೇಬಲ್ ಕೆ.ಆರ್.ಪುರಂ

ಪ್ರವೇಶ ಶುಲ್ಕ ರಹಿತ-ಗರಿಷ್ಟ ಬಹುಮಾನ-ಎತ್ತರದ ಟ್ರೋಫಿಗಳು-ದಾಖಲೆ ಸೃಷ್ಟಿಸಿದ್ದ ಅನ್ಪ್ರೆಡಿಕ್ಟೇಬಲ್ ಕೆ.ಆರ್.ಪುರಂ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img

ರಾಘವೇಂದ್ರ ಎನ್‌.ಜಿ ಸಾರಥ್ಯದಲ್ಲಿ
ಪ್ರವೇಶ ಶುಲ್ಕ ರಹಿತ-ಗರಿಷ್ಟ ಬಹುಮಾನ-ಎತ್ತರದ ಟ್ರೋಫಿಗಳು-ಕಳೆದ ಋತುವಿನಲ್ಲಿ ದಾಖಲೆ ಸೃಷ್ಟಿಸಿದ್ದ ಅನ್ಪ್ರೆಡಿಕ್ಟೇಬಲ್ ಕೆ.ಆರ್.ಪುರಂ.

ರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಚರಿತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಕಳೆದ ಋತುವಿನಲ್ಲಿ ಐತಿಹಾಸಿಕ ಪಂದ್ಯಾಟವೊಂದು ದಾಖಲಾಯಿತು.
ಪ್ರಪ್ರಥಮ ಬಾರಿಗೆ ಪ್ರವೇಶ ದರ ರಹಿತ ಪಂದ್ಯಾಟ ಗರಿಷ್ಟ ಮೊತ್ತದ ಪ್ರಶಸ್ತಿಯೊಂದಿಗೆ ಏರ್ಪಟ್ಟಿತ್ತು.

2010 ರ ಆಸುಪಾಸಿನಲ್ಲಿ ಬಲಿಷ್ಟ ತಂಡಗಳನ್ನು ಅನಾಯಾಸವಾಗಿ ಮಣಿಸುತ್ತಿದ್ದ 2010 ರ ಆಸುಪಾಸಿನ
ಶ್ರೇಷ್ಠ ತಂಡವಾಗಿದ್ದ “Unpredictable Bangalore
K.R Puram) ತಂಡದ ಅಗಲಿದ ಪ್ರತಿಭಾನ್ವಿತ ಆಲ್ ರೌಂಡರ್ ವಿಭೂಷಣ್ (ಆಪ್ಲಾ) ಇವರ ಸ್ಮರಣಾರ್ಥ
” Vibhushan Memorial Cup-2019″
ಅಬುಧಾಬಿಯಲ್ಲಿದ್ದರೂ,
ಪಂದ್ಯಾವಳಿ ಸಂಘಟನೆಗೆ ಆಗಮಿಸಿದ್ದ ಶ್ರೀ ರಾಘವೇಂದ್ರ ಎನ್‌.ಜಿ (Unpredictable)ರವರ ದಕ್ಷ ಸಾರಥ್ಯದಲ್ಲಿ,ಲೆದರ್ ಬಾಲ್ ಕ್ರಿಕೆಟಿಗ ಸಂತೋಷ್ ಕುಮಾರ್ ಸಿಂಗ್,ಆರ್.ಭರತ್ ಕುಮಾರ್ ಸಹಕಾರದೊಂದಿಗೆ,
ಕೆ.ಆರ್.ಪುರಂ ನ ಐ.ಟಿ.ಐ ಗ್ರೌಂಡ್ ನಲ್ಲಿ
ಒಂದು ದಿನದ ಹಗಲಿನ ರಾಜ್ಯ ಮಟ್ಟದ ಪಂದ್ಯಾಟ ನಡೆಸಿತ್ತು.

ಉಡುಪಿಯ ರಿಯಲ್ ಫೈಟರ್ಸ್ ಮಲ್ಪೆ,
ಜೈ ಕರ್ನಾಟಕ ಬೆಂಗಳೂರು,ಎಸ್.ಝಡ್.ಸಿ.ಸಿ,
ಫ್ರೆಂಡ್ಸ್ ಬೆಂಗಳೂರು ಸಹಿತ 8 ತಂಡಗಳು ಕುತೂಹಲಕಾರಿ ಹಣಾಹಣಿಗಿಳಿದಿತ್ತು‌.
ಲೀಗ್ ಸಮರದ ಬಳಿಕ ಯುವ ಕ್ರಿಕೆಟಿಗರ ಪಡೆ ರಾಕರ್ಸ್ ಬೆಂಗಳೂರು ತಂಡ ದಾವಣಗೆರೆ ತಂಡವನ್ನು ಸೋಲಿಸಿ,
ಹಾಗೂ ಬಲಿಷ್ಠ ನ್ಯಾಶ್ ತಂಡ ರಿಯಲ್ ಫೈಟರ್ಸ್ ಮಲ್ಪೆ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದಿದ್ದರು.

ಫೈನಲ್ ನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಕರ್ಸ್ ತಂಡ 4 ಓವರ್ ಗಳಲ್ಲಿ 20 ರನ್ ಗಳಿಸಿದರೆ, ಸುಲಭದ ಗುರಿ ಬೆನ್ನತ್ತಿದ ನ್ಯಾಶ್ ತಂಡ
3 ಓವರ್ ಗಳಲ್ಲಿ ವಿಜಯದ ಗುರಿಯನ್ನು ಸಾಧಿಸಿದರು.

ವಿಜಯೀ ನ್ಯಾಶ್ ತಂಡ 1,00,000 ರೂ ನಗದು ಸಹಿತ ಟೆನ್ನಿಸ್ ಬಾಲ್ ಇತಿಹಾಸದ ಅತಿ ಎತ್ತರದ
10 ಫೀಟ್ ಎತ್ತರದ ಟ್ರೋಫಿಯನ್ನು ,
ರನ್ನರ್ಸ್ ತಂಡ ರಾಕರ್ಸ್ 50,000 ಸಾವಿರ ರೂ ನಗದು
ಸಹಿತ 7 ಫೀಟ್ ಎತ್ತರದ ಟ್ರೋಫಿಯನ್ನು ಪಡೆದುಕೊಂಡರು. ಸರಣಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ನ್ಯಾಶ್ ನ ಅಕ್ಷಯ್.ಸಿ.ಕೆ
ಸರಣಿ ಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಆಕರ್ಷಕ ವಾಚ್ ಪಡೆದುಕೊಂಡಿದ್ದರು

ಈ ಪಂದ್ಯಾಟದ ನೇರ ಪ್ರಸಾರವನ್ನು “M.Sports” ಬಿತ್ತರಿಸಿತ್ತು. ತೀರ್ಪುಗಾರರಾಗಿ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಸಂಗಡಿಗರು,
ವೀಕ್ಷಕ ವಿವರಣೆಕಾರರಾಗಿ ಪ್ರಶಾಂತ್ ಅಂಬಲಪಾಡಿ,ವಿನಯ್ ಉದ್ಯಾವರ್ ಸಹಕರಿಸಿದ್ದರು.
ಆರ್.ಕೆ.ಆಚಾರ್ಯ ಕೋಟ…

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

three × four =