12.8 C
London
Tuesday, April 30, 2024
Homeಸ್ಪೋರ್ಟ್ಸ್ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಶಟ್ಲರ್ಸ್ ಗಳ ನಡುವಿನ ಬ್ಯಾಡ್ಮಿಂಟನ್ ಮಹಾ ಸಂಗ್ರಾಮ

ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಶಟ್ಲರ್ಸ್ ಗಳ ನಡುವಿನ ಬ್ಯಾಡ್ಮಿಂಟನ್ ಮಹಾ ಸಂಗ್ರಾಮ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಕ್ರೀಡಾ ಕ್ಷೇತ್ರದಲ್ಲಿ ಯುವ ಕ್ರೀಡಾಪಟುಗಳಿಗೆ ಉತ್ತೇಜನವನ್ನು ನೀಡುತ್ತಾ ಹಲವಾರು ಕ್ರೀಡಾ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುತ್ತಾ ಹೊಸ ಮೈಲಿಗಲ್ಲನ್ನು ಸೃಷ್ಟಿಸುತ್ತಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಇದೀಗ ಅಧ್ಯಕ್ಷರಾಗಿರುವ ಗೌತಮ್ ಶೆಟ್ಟಿ ಸಾರಥ್ಯದಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್ ಪಂದ್ಯಾಟವನ್ನು 2021 ನೇ ನವೆಂಬರ್ 13 ಹಾಗೂ 14 ರಂದು ಮಂಗಳೂರಿನ ಯು.ಎಸ್.ಮಲ್ಯ ಒಳಾಂಗಣ ಸ್ಟೇಡಿಯಂನಲ್ಲಿ ಆಯೋಜಿಸಿದೆ.
     ಈ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ವಿಜೇತರಿಗೆ 2 ಲಕ್ಷ ನಗದು ಬಹುಮಾನ ಹಾಗೂ ದ್ವಿತೀಯ ಸ್ಥಾನ ವಿಜೇತರಿಗೆ ಒಂದು ಲಕ್ಷ ನಗದು ಬಹುಮಾನ ದೊರೆಯಲಿದೆ.

ಸ್ಪರ್ಧೆಯ ನಿಯಮಗಳು:-

  • ✓. ಲೀಗ್ ಕಮ್ ನಾಕೌಟ್
  • ✓. ಪಂದ್ಯಾಟಕ್ಕೆ ಜೆರ್ಸಿಯನ್ನು ನೀಡಲಾಗುತ್ತದೆ.
  • ✓. ಆಹಾರ ಹಾಗೂ ವಸತಿ ವ್ಯವಸ್ಥೆಯಿದೆ.
  • ✓. ಪ್ರತಿ ಹಂತದಲ್ಲೂ ನಗದು ಬಹುಮಾನವಿದೆ.
  • ✓. ಪ್ರತಿ ಪಂದ್ಯಾಟದ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.

ಈ ಬ್ಯಾಡ್ಮಿಂಟನ್ ಸ್ಪರ್ಧೆ ಬೇರೆ ಬೇರೆ ವಿಭಾಗಗಳಲ್ಲಿ ನಡೆಯಲಿದ್ದು 11 ರಿಂದ 19 ವರ್ಷ ವಯೋಮಿತಿಯ ಬಾಲಕರು, 19ರಿಂದ 30 ವರ್ಷದವರ ಪುರುಷರು, 30ರಿಂದ 40 ವರ್ಷ ವಯೋಮಿತಿಯ ಪುರುಷರು ,ನಲವತ್ತರಿಂದ ಐವತ್ತು ವರ್ಷ ವಯೋಮಿತಿಯ ಪುರುಷರು ,50 ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಮಿಶ್ರ ಡಬಲ್ಸ್ ಹಾಗೂ 85 ವರ್ಷ ಮೇಲ್ಪಟ್ಟ ಜಂಬಲ್ಡ್ ಡಬಲ್ಸ್ ಹೇಗೆ ಒಟ್ಟು 9 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
        ಸ್ಪರ್ಧೆಯಲ್ಲಿ ಭಾಗವಹಿಸಲು ಒಟ್ಟು 12 ತಂಡಗಳಿದ್ದು ಪ್ರತಿ ತಂಡದಲ್ಲಿ 18 ಜನ ಆಟಗಾರರಿದ್ದು ಅದರಲ್ಲಿ ನಾಲ್ಕು ಮಹಿಳಾ ಆಟಗಾರರಿರುತ್ತಾರೆ‌. ರಾಜ್ಯ,ರಾಷ್ಟ್ರ ಮಟ್ಟದ ಆಟಗಾರರು ಸೇರಿದಂತೆ ಒಟ್ಟು 250 ಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಿರುವುದು ಸ್ಪರ್ಧೆಗೆ ಇನ್ನಷ್ಟು ಮೆರುಗು ತಂದುಕೊಡಲಿದೆ.
 ಭಾಗವಹಿಸುವ ತಂಡಗಳು ಹಾಗೂ ತಂಡದ ಮಾಲೀಕರ ಹೆಸರು:-

1)ದೀಪಕ್ ಪುಟ್ಟರಾಜ್-ಫೆದರ್ ಫೈಟರ್ಸ್

2)ಸದಾನಂದ ನಾವಡ-ಗ್ಯಾಲಕ್ಸಿ ಸರ್ವರ್ಸ್

3)ಸಂದೀಪ್ ಶೆಟ್ಟಿ-ಸುರತ್ಕಲ್ ವಾರಿಯರ್ಸ್

4)ಅನುರಂಜನ್ ರಾವ್-ಕೋಸ್ಟಲ್ ಪವರ್ ಷಟ್ಲರ್ಸ್

5)ಜಹೀರ್ ಝಕ್ರಿಯ-ಝಾರಾ ರಾಯಲ್ಸ್

6)ವಿಜಯ್ ಹೆಗ್ಡೆ-ಸವ್ಯಸಾಚಿ ಅಟ್ಯಾಕರ್ಸ್

7)ಗಣೇಶ್ ಕಾಮತ್-ಸ್ಪೋರ್ಟ್ಸ್ ಡೆನ್ ಸ್ಮ್ಯಾಶರ್ಸ್

8)ಝಕ್ರಿಯ ಬಜ್ಪೆ-ಝಾರಾ ಚಾಲೆಂಜರ್ಸ್

9)ಪ್ರತಿಭಾ ಕುಳಾಯಿ-ಕುಳಾಯಿ ಸ್ಮ್ಯಾಶರ್ಸ್

10)ಡಾ.ಸಂದೀಪ್-ಕುಂದಾಪುರ ಫೂಟ್ ವರ್ಕರ್ಸ್

11)ದೇವೇಂದ್ರ ಶೆಟ್ಟಿ-ಮಂಗಳೂರು ಸ್ಟ್ರೋಕರ್ಸ್

12)ಗೌತಮ್ ಶೆಟ್ಟಿ-ಟೊರ್ಪೆಡೋಸ್ ಟೈಟನ್ಸ್

  •ರಾಜ್ಯದ ರಾಂಕ್ ಪಟ್ಟಿಯಲ್ಲಿರುವ ದೀಪಕ್ ವೆಟರನ್ಸ್, ಎಸ್ ಕೆ ಬಿ ನಾಯ್ಡುರವರು ಸದಾನಂದ ನಾವಡ ಮಾಲೀಕತ್ವದ ಗ್ಯಾಲಕ್ಸಿ ಸರ್ವರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ದರ್ಶನ್. ಎಸ್, ದೀಪಕ್ ಪುಟ್ಟರಾಜ್ ಹಾಗೂ ಶಾಲಿನಿ ಶೆಟ್ಟಿಯವರು ದೀಪಕ್ ಪುಟ್ಟರಾಜ್ ಮಾಲಕತ್ವದ ಫೆದರ್ ಫೈಟರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ಕೇರಳದ ರಾಜ್ಯಮಟ್ಟದ ಆಟಗಾರರಾಗಿರುವ ರಾಯಿ ಪಿ.ಜೆಯವರು ಡಾ.ಸಂದೀಪ್ ನಾಯಕತ್ವದ ಫೂಟ್ ವರ್ಕರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
• ರಾಜ್ಯದ ರ್ಯಾಂಕ್ ಪಟ್ಟಿಯಲ್ಲಿರುವ ಸಂಕೇತ್.ಎಸ್ ಹಾಗೂ ವಿಘ್ನೇಶ್ ಭಟ್ ರವರು ಸಂದೀಪ್ ಶೆಟ್ಟಿ ಮಾಲಕತ್ವದ ಸುರತ್ಕಲ್ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ರಾಜ್ಯ ಮಟ್ಟದಲ್ಲಿ ವಿಜೇತರಾಗಿರುವ ಕಿರಣ್ ಕುಮಾರ್ ರವರು ಜಹೀರ್ ಝಕ್ರೀಯಾ ಮಾಲಕತ್ವದ ಝರಾ ರಾಯಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ರಾಜ್ಯ ಮಟ್ಟದಲ್ಲಿ ವಿಜೇತರಾಗಿರುವ ಶಮಂತ್ ರಾವ್,ಆತ್ರೀಯಾ.ಎಸ್ ಪ್ರಭು.ಎನ್.ರೇಣುಕಾ ಪ್ರಸಾದ್ ರವರು ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾಗಿರುವ ಗೌತಮ್ ಶೆಟ್ಟಿ ಮಾಲಕತ್ವದ ಟೋರ್ಪೆಡೋಸ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
• ರಾಜ್ಯ ಮಟ್ಟದಲ್ಲಿ ವಿಜೇತರಾಗಿರುವ  ಉಮೇಶ್ ರಾಜ್ ಹಾಗೂ ಪರಿಮಳ್ ಪ್ರತಿಭಾ ಕುಳಾಯಿ ಮಾಲಕತ್ವದ ಕುಳಾಯಿ ಸ್ಮ್ಯಾಶರ್ಸ್ ತಂಡವನ್ನು ಪ್ರತನಿಧಿಸಲಿದ್ದಾರೆ.
•ರಾಜ್ಯ ಮಟ್ಟದ ಆಟಗಾರರಾಗಿರುವ ಅಭಿಷೇಕ್ ಗೌಡ ಮತ್ತು ಚಿರಾಗ್ ಗೌಡರವರು ವಿಜಯ್ ಹೆಗ್ಡೆ ಮಾಲಕತ್ವದ ಸವ್ಯಸಾಚಿ ಅಟ್ಯಾಕರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ರಾಜ್ಯ ರ್ಯಾಂಕಿಂಗ್ ಪಟ್ಟಿಯಲ್ಲಿರುವ ವಿನಯ್.ಡಿ.ಆರ್ ,ಸಂಕೇತ್ ವೈದ್ಯ ಮತ್ತು ಸಂಜಯ್ ಆರ್.ಎಂ ರವರು ಝಕ್ರೀಯಾ ಬಜ್ಪೆ ಮಾಲಕತ್ವದ ಝರಾ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ರಾಜ್ಯ ಮಟ್ಟದಲ್ಲಿ ವಿಜೇತರಾಗಿರುವ ಸಚಿನ್ ಜೈಸನ್,ರಿಯಾಝ್ ಕೊಪ್ಪರವರು ದೇವೇಂದ್ರ ಶೆಟ್ಟಿ ಮಾಲಕತ್ವದ ಮಂಗಳೂರು ಸ್ಟ್ರೋಕರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ಮಿಕ್ಸ್ ಡ್ ಡಬಲ್ಸ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ವಿಜೇತರಾಗಿರುವ ಅಬಿ ಅಮುಧಾನ್ ಹಾಗೂ ಅಂಜಲಿ ದಿಲಿಶ್ ಹಾಗೂ ಮಂಗಳೂರಿನ ಅತ್ಯುನ್ನತ ಆಟಗಾರರಾಗಿರುವ ರಾಯೀಝ್.ಪಿ.ಸಿ ಮತ್ತು ಮಹೇಶ್ ಪ್ರಭು ರವರು ಗಣೇಶ್ ಕಾಮತ್ ನಾಯಕತ್ವದ ಸ್ಪೋರ್ಟ್ಸ್ ಡೆನ್ ಸ್ಮ್ಯಾಷರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

two + two =