
ಉಡುಪಿಯ ಜಿ ಎಸ್ ಬಿ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದ ತೆಂಕಪೇಟೆ ಟ್ರೋಫಿ ಮತ್ತು SLVT Volunteers ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್
ತೆಂಕಪೇಟೆ ಫ್ರೆಂಡ್ಸ್ ಏರ್ಪಡಿಸಿದ್ದ ಎರಡನೇ ಆವೃತ್ತಿಯ ತೆಂಕಪೇಟೆ ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಜಯ ಗಳಿಸಿರುವ ಭುವನ್ ಕ್ರಿಕೆಟರ್ಸ್, ಕಟಪಾಡಿ ಪ್ರಶಸ್ತಿ ಜಯಿಸಿದೆ.
2025 ರ ಜನವರಿ 11 ರಂದು ನಡೆದ 40 ಗಜಗಳ ಹೊನಲು ಬೆಳಕಿನ ಟೂರ್ನಿಯಲ್ಲಿ 14 ತಂಡಗಳು ಭಾಗವಹಿಸಿದ್ದವು. ಇದು ಜಿ ಎಸ ಬಿ ಸಮಾಜ ಭಾಂದವರಿಗಾಗಿ ಆಯೋಜಿಸಿದ ಹರಾಜು ಆಧಾರಿತ ಕ್ರಿಕೆಟ್ ಟೂರ್ನಮೆಂಟ್ ಆಗಿತ್ತು. ಉಡುಪಿಯ ಬೀಡಿನ ಗುಡ್ಡೆ ಮೈದಾನದಲ್ಲಿ ಈ ಟೂರ್ನಮೆಂಟ್ ನಡೆಸಲಾಯಿತು.


ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಭುವನ್ ಕ್ರಿಕೆಟರ್ಸ್, ಕಟಪಾಡಿ, ಎಸ್ ವಿ ಕ್ರಿಕೆಟರ್ಸ್ ನಾಯ್ಕನಕಟ್ಟೆ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಉದ್ಯಮಿ ಮತ್ತು ಕ್ರಿಕೆಟ್ ಪ್ರೇಮಿ ಪ್ರಶಾಂತ್ ಬಾಳಿಗ, ಕ್ರೀಡಾ ಪ್ರೋತ್ಸಾಹಕರಾದಂತಹ ನೇತ್ರತಜ್ಞ ಡಾ. ನರೇಂದ್ರ ಶೆಣೈ, ಟಿ ಗಣೇಶ್ ಶೆಣೈ, ನಿತೇಶ್ ಶೆಣೈ ,ವಿಶಾಲ್ ಶೆಣೈ ಆಶ್ಲೇಷ ಶೆಣೈ ,ಬ್ರಹ್ಮಾನಂದ ಭಟ್ ಮತ್ತಿತರರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿ ವಿಜೇತ ತಂಡಕ್ಕೆ ₹45 ಸಾವಿರ ನಗದು ಬಹುಮಾನ, ರನ್ನರ್ ಅಪ್ ತಂಡಕ್ಕೆ ₹25 ಸಾವಿರ ನಗದು ಬಹುಮಾನ ,ಟ್ರೋಫಿ ನೀಡಿದರು.
ವೀರಾಂಜನೇಯ ಕ್ರಿಕೆಟರ್ಸ್ ಕಾಪು ಮತ್ತು ಶ್ರೀ ಲಕ್ಷ್ಮಿ ವೆಂಕಟೇಶ ಕ್ರಿಕೆಟರ್ಸ್ ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನವನ್ನು ಪಡೆಯಿತು.


ಉಡುಪಿಯ ಯುವ ಆಟಗಾರರದ ಅನಂತ್ ಶೆಣೈ, ಅಜಯ್ ನಾಯಕ್, ಬಾಲಕೃಷ್ಣ ನಾಯಕ್, ರಾಹುಲ್ ಪೈ, ವಿಜಯ್ ನಾಯಕ್ , ಹಿರಿಯ ಆಟಗಾರರಾದ ಬ್ರಹ್ಮಾನಂದ ಭಟ್ ಮತ್ತಿತರರ ನೇತೃತ್ವದಲ್ಲಿ ಹಮ್ಮಿಕೊಂಡ ಈ ಟೂರ್ನಮೆಂಟ್ ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು. ತೆಂಕಪೇಟೆ ಫ್ರೆಂಡ್ಸ್ ಉಡುಪಿ ಆಯೋಜಿಸಿದ ಈ ಕ್ರಿಕೆಟ್ ಟೂರ್ನಿಯು ವೀಕ್ಷಿಸಲು ಬಂದಂತಹ ಎಲ್ಲಾ ಪ್ರೇಕ್ಷಕರ ಮನ ಸೆಳೆಯಿತು.
ಅದಾದ ಬಳಿಕ ಭಾನುವಾರ ಜನವರಿ 12 ರಂದು ಎಸ್ ಎಲ್ ವಿ ಟಿ ದೇವಸ್ಥಾನದ ಸ್ವಯಂ ಸೇವಕರಿಗಾಗಿ SLVT Volunteers ಟ್ರೋಫಿ ಕೂಡಾ ಆಯೋಜಿಸಲಾಗಿತ್ತು. ಹಿರಿಯರು ಮತ್ತು ಹಿರಿಯರು ಎಂಬ ಪ್ರತ್ಯೇಕ ವಿಭಾಗಗಳಲ್ಲಿ ಪಂದ್ಯಗಳನ್ನು ನಡೆಸಲಾಯಿತು.
ವಿಜೇತರಿಗೆ ಬಹುಮಾನ ನೀಡುವುದರೊಂದಿಗೆ ಟೂರ್ನಮೆಂಟ್ ಮುಕ್ತಾಯವಾಯಿತು.





