
ಸೈಮಂಡ್ಸ್ ಕಡಿಯಾಳಿ ಆಶ್ರಯದಲ್ಲಿ ಇಂಡಿಪೆಂಡೆನ್ಸ್ ಡೇ ಟ್ರೋಫಿ-2025
ಉಡುಪಿಯ ಹಿರಿಯ ತಂಡ ಸೈಮಂಡ್ಸ್ ಕ್ರಿಕೆಟ್ ಕ್ಲಬ್ ಕಡಿಯಾಳಿ ಇವರ ಆಶ್ರಯದಲ್ಲಿ,ತಂಡದ ಯುವ ಪ್ರತಿಭೆಗಳ ಅನ್ವೇಷಣೆಯ ಸಲುವಾಗಿ,ವಿಶಿಷ್ಟ ನಿಯಮಗಳನ್ನು ಅಳವಡಿಸಿ, ಇಂಡಿಪೆಂಡೆನ್ಸ್ ಡೇ ಟ್ರೋಫಿ ಆಯೋಜಿಸಲಾಗಿದೆ.
ಆಗಸ್ಟ್ 17 ರವಿವಾರ ನಡೆಯುವ ಈ ಪಂದ್ಯಾಟದಲ್ಲಿ
ತಂಡದ ನೂರಕ್ಕೂ ಮಿಕ್ಕಿ ಸದಸ್ಯರ ಒಟ್ಟು 6 ತಂಡಗಳು ಭಾಗವಹಿಸಲಿದೆ.


ವಿಶೇಷವಾಗಿ ತಂಡದ ಪ್ರತಿಯೊಬ್ಬ ಆಟಗಾರ 20 ರನ್ ಗಳಿಸಿದ ಬಳಿಕ ಇನ್ನೊಬ್ಬ ಆಟಗಾರನಿಗೆ ಬ್ಯಾಟಿಂಗ್ ಅವಕಾಶ ನೀಡಬೇಕಿದೆ.ತಂಡದ 5 ಮಂದಿ ಆಟಗಾರರು ಬೌಲಿಂಗ್ ಮಾಡಲೇಬೇಕಿದೆ.
ಇನ್ನು ಪ್ರತಿ ಪಂದ್ಯದ ಪಂದ್ಯಶ್ರೇಷ್ಟ ಆಟಗಾರ ಹೋಮ್ ಪ್ರಾಡಕ್ಟ್ ಗಳನ್ನು,ಪಂದ್ಯಾಟದ ಬೆಸ್ಟ್,ಬೌಲರ್,ಬೆಸ್ಟ್ ಬ್ಯಾಟರ್,ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ತಲಾ 5 ಕೆ.ಜಿ ಅಕ್ಕಿ ಹಾಗೂ ವಿಜೇತ ತಂಡ 35 ಕೆ.ಜಿ ಅಕ್ಕಿ ಹಾಗೂ ರನ್ನರ್ ಅಪ್ ತಂಡ 35 ಕೆ.ಜಿ ಅಕ್ಕಿ ಬಹುಮಾನ ರೂಪದಲ್ಲಿ ಪಡೆಯಲಿದ್ದಾರೆ.ಒಟ್ಟು 105 ಕೆ.ಜಿ ಅಕ್ಕಿ ಯನ್ನು ಸೈಮಂಡ್ಸ್ ಇಂಡಿಪೆಂಡೆನ್ಸ್ ಡೇ ಟ್ರೋಫಿಯಲ್ಲಿ ಆಟಗಾರರಿಗೆ ನೀಡಲಿದ್ದಾರೆ.

ಪಂದ್ಯಾಟ ಉದ್ಘಾಟನಾ ಸಮಾರಂಭದಲ್ಲಿ ಸೈಮಂಡ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನರಸಿಂಹ ಕಿಣಿ,ಸೈಮಂಡ್ಸ್ ಲೆಜೆಂಡ್ಸ್ ಪ್ರವೀಣ್ ಶೇರಿಗಾರ್,ಸೈಮಂಡ್ಸ್ ಸ್ನೈಪರ್ಸ್ ನಿತಿನ್ ಸುವರ್ಣ,ಸೈಮಂಡ್ಸ್ ನ್ಯೂ ಪವರ್ ಪ್ರವೀಣ್ ಕೋಟ್ಯಾನ್,ಸೈಮಂಡ್ಸ್ ರಾಯಲ್ ಚಾಲೆಂಜರ್ಸ್ ಯೋಗೀಶ್ ದೇವಾಡಿಗ,ಸೈಮಂಡ್ಸ್ ಸ್ಟ್ರೈಕರ್ಸ್ ಪ್ರವೀಣ್ ಬೈಲಕೆರೆ,ಸೈಮಂಡ್ಸ್ ಬ್ರದರ್ಸ್ ಅಶ್ವಿತ್ ಶೆಟ್ಟಿ, ಆಯೋಜಕರಾದ ರತನ್ ಶೇರಿಗಾರ್ ಮತ್ತು ಮೊಹಮ್ಮದ್ ಮುಬಿನ್ ಭಾಗವಹಿಸಲಿದ್ದಾರೆ.




