
ಟೀಂ ಇಂಡಿಯಾಗೆ ಗುಡ್ ನ್ಯೂಸ್..ರೀ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿ ಈ ಸ್ಟಾರ್ ವೇಗಿ
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್. ಸ್ಟಾರ್ ವೇಗಿ ಮೊಹಮ್ಮದ್ ಶಮಿ ಮತ್ತೆ ಮೈದಾನಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಪಾದದ ಗಾಯದಿಂದ ಸುಮಾರು ಒಂದು ವರ್ಷದಿಂದ ತಂಡದಿಂದ ದೂರ ಉಳಿದಿರುವ ಮೊಹಮ್ಮದ್ ಶಮಿ ಬಂಗಾಳ ಪರ ರಣಜಿ ಟ್ರೋಫಿ ಆಡಲು ಸಿದ್ಧರಾಗಿದ್ದಾರೆ.

ಬುಧವಾರ ಮಧ್ಯಪ್ರದೇಶ ವಿರುದ್ಧದ ಐದನೇ ಸುತ್ತಿನ ರಣಜಿ ಪಂದ್ಯದಲ್ಲಿ ಶಮಿ ಬಂಗಾಳದ ಪರ ಆಡಲಿದ್ದಾರೆ. ಈ ಬಗ್ಗೆ ಬೆಂಗಾಲ್ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ವಾಸ್ತವವಾಗಿ, ಕರ್ನಾಟಕ ವಿರುದ್ಧದ ನಾಲ್ಕನೇ ಸುತ್ತಿನ ರಣಜಿ ಪಂದ್ಯದಲ್ಲಿ ಶಮಿ ಕಣಕ್ಕೆ ಇಳಿಯಬೇಕಿತ್ತು. ಆದರೆ ಸಂಪೂರ್ಣ ಫಿಟ್ ನೆಸ್ ಇಲ್ಲದ ಕಾರಣ ಸಾಧ್ಯವಾಗಿರಲಿಲ್ಲ.


ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಪಂದ್ಯದ ಫಿಟ್ನೆಸ್ ಪಡೆದಿರುವ ಶಮಿ, ಬೆಂಗಾಲ್ ಪರ ಆಡಲು ಬಿಸಿಸಿಐ ವೈದ್ಯಕೀಯ ತಂಡದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ರಣಜಿ ಟ್ರೋಫಿಯಲ್ಲಿ ಲಯ ಕಂಡುಕೊಂಡು ಮೊದಲಿನಂತೆ ಪ್ರದರ್ಶನ ನೀಡಿದರೆ ಆಸ್ಟ್ರೇಲಿಯಾ ವಿಮಾನ ಹತ್ತುತ್ತಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಸರಣಿಯ ಮಧ್ಯದಲ್ಲಿ ಆಡಬಹುದು.




