ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಪೂರ್ಣಪ್ರಜ್ಞ ಕಾಲೇಜ್ ಹಾಗೂ ಸ್ನಾತಕೋತ್ತರ ಪದವಿ ಕೇಂದ್ರ ಉಡುಪಿಯ ವಜ್ರಮಹೋತ್ಸವದ ಪ್ರಯುಕ್ತ ಉಡುಪಿಯ ಪಿ.ಪಿ.ಸಿ ಕಾಲೇಜು ಅಂಗಣದಲ್ಲಿ
ರಾಷ್ಟ್ರೀಯ ಮಟ್ಟದ ಅಂತರ್ ಯೂನಿವರ್ಸಿಟಿ ಕಬಡ್ಡಿ ಚಾಂಪಿಯನ್ ಶಿಪ್-2019-20, ಡಿಸೆಂಬರ್ 18 ರಿಂದ 21 ರ ತನಕ 4 ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆಯಲಿದೆ.
ವಿಶೇಷ ಆಕರ್ಷಣೆಯಾಗಿ ಪ್ರೊಕಬಡ್ಡಿ ಯ ಖ್ಯಾತನಾಮ ಆಟಗಾರರಾದ ಮಣಿಂದರ್ ಸಿಂಗ್,ಸುಕೇಶ್ ಹೆಗ್ಡೆ,ರಿಶಾಂಕ್ ದೇವಾಡಿಗ,ಪ್ರಶಾಂತ್ ಕುಮಾರ್ ರೈ,ಸಚಿನ್ ಸುವರ್ಣ ಹಾಗೂ ಇನ್ನಿತರ ಪ್ರಸಿದ್ಧ ಆಟಗಾರರು ಭಾಗವಹಿಸಲಿದ್ದಾರೆ.