Categories
ಕ್ರಿಕೆಟ್

ಬಹ್ರೇನ್- ಫ್ರೀ ಬರ್ಡ್ಸ್ ಕ್ರಿಕೆಟ್ ಚಾಂಪಿಯನ್ಶಿಪ್-ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದ ನಮ್ಮ ಕುಡ್ಲ

ಬಹ್ರೇನ್ ನ ಬುಸೈದ್ದೀನ್ ಅಂಗಣದಲ್ಲಿ ನಡೆದ ಫ್ರೀಬರ್ಡ್ಸ್ ಕ್ರಿಕೆಟ್ ಟಿ-12 ಟೂರ್ನಮೆಂಟ್ ಚಾಂಪಿಯನ್ಶಿಪ್ ಲೀಗ್-ಸೀಸನ್ 2 ರ ಚಾಂಪಿಯನ್ಸ್ ಪಟ್ಟವನ್ನು ಬಹುಪಾಲು ಉಡುಪಿ ಮತ್ತು ಕುಂದಾಪುರದ ಆಟಗಾರರನ್ನೊಳಗೊಂಡ “ನಮ್ಮ ಕುಡ್ಲ” ತಂಡ ಅಲಂಕರಿಸಿದೆ.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಯು.ಕೆ‌.ಸಿ.ಸಿ ಕಾಸರಗೋಡು ನಿಗದಿತ 12 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 78 ರನ್ ಕಲೆಹಾಕಿತ್ತು.ಇದಕ್ಕುತ್ತರವಾಗಿ ನಮ್ಮ ಕುಡ್ಲ ತಂಡ 11.2 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು.
ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಯು.ಕೆ.ಸಿ‌.ಸಿ ತಂಡದ ಸುನಿಲ್ ಬಂಗೇರ,ಬೆಸ್ಟ್ ಬೌಲರ್ ನಮ್ಮ ಕುಡ್ಲ ತಂಡದ ಲಿಸ್ಟನ್ ಬಸ್ರೂರು,ಸರಣಿಯುದ್ದಕ್ಕೂ ಸರ್ವಾಂಗೀಣ ಶ್ರೇಷ್ಠ ಪ್ರದರ್ಶನ ನೀಡಿದ ನಮ್ಮ ಕುಡ್ಲ ತಂಡದ ಅರುಣ್ ಶೆಟ್ಟಿ ಕಟಪಾಡಿ ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾದರು….

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

sixteen + 9 =