22.5 C
London
Sunday, May 19, 2024
Homeಕ್ರಿಕೆಟ್ಮೈಸೂರು ಮಹಾರಾಜಾಸ್ ಮಡಿಲಿಗೆ ಅಂಚೆಪಾಳ್ಯ ಪ್ರೀಮಿಯರ್ ಲೀಗ್ ಸೀಸನ್-4 ಟ್ರೋಫಿ

ಮೈಸೂರು ಮಹಾರಾಜಾಸ್ ಮಡಿಲಿಗೆ ಅಂಚೆಪಾಳ್ಯ ಪ್ರೀಮಿಯರ್ ಲೀಗ್ ಸೀಸನ್-4 ಟ್ರೋಫಿ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img

ಬೆಂಗಳೂರು  : ಕನ್ನಡ ಭಾಷೆ, ಸಂಸ್ಕೃತಿಯ ರಾಯಭಾರಿ ಸಂಸ್ಥೆ ಜೈ ಭುವನೇಶ್ವರಿ ಯುವಕರ ಸಂಘ ಅಂಚೆಪಾಳ್ಯ ಬೆಂಗಳೂರು ಇವರ ಆಶ್ರಯದಲ್ಲಿ, ಹಿರಿಯ ಶ್ರೀನಿವಾಸ್.ಟಿ ಹಾಗೂ ಚಿಕ್ಕಣ್ಣರವರ ದಕ್ಷ ಸಾರಥ್ಯದಲ್ಲಿ ಮೂರು ದಿನಗಳ ಕಾಲ ನಡೆದ ಹೊನಲು ಬೆಳಕಿನ ಪಂದ್ಯಾಕೂಟವನ್ನು ದೊಡ್ಮನೆ ಹುಡುಗ D.H.P.L ಖ್ಯಾತಿಯ ಆಕಾಶ್ ಗೌಡರ ಸಾರಥ್ಯದ ಮೈಸೂರು ಮಹಾರಾಜಾಸ್ ತಂಡ ಗೆದ್ದುಕೊಂಡಿತು.

6 ಫ್ರಾಂಚೈಸಿಗಳು ಸ್ಪರ್ಧಿಸಿದ್ದ ಈ ಪಂದ್ಯಾಟದಲ್ಲಿ ಲೀಗ್ ಹಂತದಲ್ಲಿ ಒಂದೊಂದು ತಂಡಗಳು ಪರಸ್ಪರ 5 ಬಾರಿ ಮುಖಾಮುಖಿ ಹೋರಾಟಕ್ಕಿಳಿದಿದ್ದರು. ಅಂತಿಮವಾಗಿ ಮೈಸೂರು ಮಹಾರಾಜಾಸ್,ಕೃಷ್ಣ ದೇವರಾಯ ತಂಡವನ್ನು ಸೋಲಿಸಿ, ಮಯೂರ ಬಾಯ್ಸ್ ತಂಡ ವಿಷ್ಣುವರ್ಧನ್ ತಂಡವನ್ನು ಸೋಲಿಸಿ‌ ಫೈನಲ್ ಗೆ ನೆಗೆದೇರಿದ್ದವು. ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮಯೂರ ತಂಡ 8 ಓವರ್ ನಲ್ಲಿ ನೀಡಿದ 42 ರನ್ ಗಳ ಗುರಿಯನ್ನು ಮೈಸೂರು ಮಜಾರಾಜಾಸ್ ತಂಡ ಕೇವಲ 5.2 ಓವರ್ ಗಳಲ್ಲಿ ಚೇಸ್ ಮಾಡಿ ಚಾಂಪಿಯನ್ ಪಟ್ಟ ಪಡೆಯಿತು.

ಪಂದ್ಯಾಟದ ಬೆಸ್ಟ್ ಬ್ಯಾಟ್ಸ್‌ಮನ್,ಬೆಸ್ಟ್ ಬೌಲರ್ ಮಯೂರ ಬಾಯ್ಸ್ ನ ವರುಣ್ ಹಾಗೂ ಕಿರಣ್ ಪಾಲಾದರೆ,ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಿರಿಯ ಆಟಗಾರ ಶೇಖರ್.ಟಿ(ಚಮಕ್) ಪಡೆದುಕೊಂಡರು.ಮೈಸೂರು ಮಹಾರಾಜಾಸ್ ನ ಹರೀಶ್ ಬೆಸ್ಟ್ ಕ್ಯಾಪ್ಟನ್ ಹಾಗೂ
14 ವರ್ಷ ಪ್ರಾಯದ ಡೇವಿಡ್ ಪಂದ್ಯಾವಳಿಯುದ್ದಕ್ಕೂ ಗಮನಾರ್ಹ ನಿರ್ವಹಣೆ ನೀಡಿ ಭವಿಷ್ಯದ ಭರವಸೆಯ ಆಟಗಾರನಾಗಿ ಮೂಡಿಬಂದರು.

ಪ್ರಮುಖವಾಗಿ ಹಿರಿಯ ಆಟಗಾರರಿಗೆ ಮೀಸಲಾಗಿದ್ದ ಈ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಮೈಸೂರು ಮಹಾರಾಜಾಸ್ ಪರವಾಗಿ ಆಡಿದ ಸ್ಥೂಲ ಕಾಯದ ಫ್ರೆಂಡ್ಸ್ ಬೆಂಗಳೂರಿನ ಮಾಜಿ ಆಟಗಾರ ಬಿ.ಟಿ.ಶ್ರೀನಿವಾಸ್ ರವರ ಅದ್ಭುತ ಕ್ಯಾಚ್ ಹಾಗೂ ಚಮಕ್ ನ ಮಾಜಿ ಆಲ್ ರೌಂಡರ್ ಶೇಖರ್.ಟಿ ಅತ್ಯುತ್ತಮ ನಿರ್ವಹಣೆ ತೋರಿ ಗತಕಾಲದ ಟೆನ್ನಿಸ್ ಕ್ರಿಕೆಟ್ ವೈಭವನ್ನು ಮತ್ತೆ ನೆನಪಿಸಿದರು.

ಅಂಚೆಪಾಳ್ಯದ ವೃತ್ತ ನಿರೀಕ್ಷಕ ಸತ್ಯನಾರಾಯಣ ರವರು ವಿಷ್ಣುವರ್ಧನ ಇಲೆವೆನ್ಸ್ ತಂಡದ ಪರವಾಗಿ ಆಡಿ ಪಂದ್ಯಾವಳಿಯ ಮೆರುಗನ್ನು ಹೆಚ್ಚಿಸಿದ್ದರು.

ಅಂಚೆಪಾಳ್ಯ ಪ್ರೀಮಿಯರ್ ಲೀಗ್ ನ ಕಳೆದ ಋತುವಿನ ಆವೃತ್ತಿಯ ಚಾಂಪಿಯನ್ ಒಡೆಯರ್ ತಂಡವನ್ನು ಮುನ್ನಡೆಸಿದ್ದ ಟೆನ್ನಿಸ್ ಕ್ರಿಕೆಟ್ ಇತಿಹಾಸದ ದಾಖಲೆಯ ಪಂದ್ಯಾವಳಿ D.H.P.L ಖ್ಯಾತಿಯ ದೊಡ್ಮನೆ ಹುಡುಗ ಆಕಾಶ್ ಗೌಡ ಈ ಬಾರಿ ಮೈಸೂರು ಮಹಾರಾಜಾಸ್ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಿ 2 ನೇ ಬಾರಿ ದೊಡ್ಮನೆಗೆ ಟ್ರೋಫಿ ತಂದಿತ್ತಿದ್ದಾರೆ, ರನ್ನರ್ಸ್ ಮಯೂರ ಬಾಯ್ಸ್ ತಂಡವನ್ನು ಗಿರೀಶ್ ಕುಮಾರ್ ರವರು ಮುನ್ನಡೆಸಿದ್ದರು.

ಆರ್‌.ಕೆ‌.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

4 × 3 =