ಉಡುಪಿ-ಟೀಮ್ ಕೆಮ್ಮಣ್ಣೈಟ್ಸ್ ಇವರ ಆಶ್ರಯದಲ್ಲಿ,ಕೀನ್ಯಾದಲ್ಲಿ ನೆಲೆಸಿರುವ ಉಡುಪಿ ಮೂಲದ ಕ್ರೀಡಾ ಪ್ರೋತ್ಸಾಹಕರಾದ ಶ್ರೀ ಆಲ್ಫ್ರೆಡ್ ಕ್ರಾಸ್ಟೋ ಇವರ ಸಾರಥ್ಯದಲ್ಲಿ ಹಿರಿಯ ಆಟಗಾರರ ಸಮಾಗಮದ ಸದುದ್ದೇಶದಿಂದ,ಡಿಸೆಂಬರ್ 21 ರಂದು ಕೆಮ್ಮಣ್ಣು ಲಿಟ್ಲ್ ಫ್ಲವರ್ ಚರ್ಚ್ ಮೈದಾನದಲ್ಲಿ ಕೆ.ಪಿ.ಎಲ್ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು.
ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಮಾತನಾಡಿ “ಹಿರಿಯ ಆಟಗಾರರ ಒಗ್ಗಟ್ಟಿನಿಂದ ಕ್ರೀಡೆಯಲ್ಲಿ ಸುಧಾರಣೆಯ ಅಲೆಯನ್ನು ಸೃಷ್ಟಿಸಬಹುದು ಇದಕ್ಕೆ ಸ್ಪಷ್ಟ ಉದಾಹರಣೆ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್


ಪಂದ್ಯಾಟದ ಪ್ರಥಮ ಸ್ಥಾನಿ ಆಸಿಫ್.ಜಿ.ಡಿ ನಾಯಕತ್ವದ ಕುದ್ರು ಟೈಗರ್ಸ್,
ದ್ವಿತೀಯ ಸ್ಥಾನಿ ಯಾದವ್ ನಾಯ್ಕ್ ಕೆಮ್ಮಣ್ಣು ಸಾರಥ್ಯದ ಕೆಮ್ಮಣ್ಣು ವಾರಿಯರ್ಸ್ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.ಪ್ರದರ್ಶನ ಪಂದ್ಯದಲ್ಲಿ ಕೀನ್ಯಾ,

ಇಂಗ್ಲೆಂಡ್,ದುಬೈ,ಅಬುಧಾಬಿ,ಸೌದಿ ಅರೇಬಿಯಾ,ಕುವೈಟ್,ಕತಾರ್,ಬಹ್ರೇನ್ ಇನ್ನಿತರ ರಾಷ್ಟ್ರದ ಮಹಿಳಾ ಆಟಗಾರರನ್ನೊಳ ಗೊಂಡ 2 ತಂಡಗಳು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೆಮ್ಮಣ್ಣು ಸೈಂಟ್ ಥೆರೇಸಾ ಚರ್ಚ್ ರೆವ್ ಫಾದರ್ ವಿಕ್ಟರ್ ಡಿಸೋಜಾ,ಕೆ.ಪಿ.ಸಿ.ಸಿ ಪ್ಯಾನೆಲಿಸ್ಟ್ ಶ್ರೀಮತಿ ವೆರೋನಿಕಾ ಕರ್ನೇಲಿಯೋ,ಟೂರ್ನಮೆಂಟ್ ನ ಪ್ರಮುಖ ಆಯೋಜಕರಾದ ಶ್ರೀಯುತ ಆಲ್ಫ್ರೆಡ್ ಕ್ರಾಸ್ಟೋ ಉಪಸ್ಥಿತರಿದ್ದರು..