17.3 C
London
Monday, May 13, 2024
Homeಕ್ರಿಕೆಟ್ತೀರ್ಥಹಳ್ಳಿಯಲ್ಲಿ ಉಡುಪಿ ಹುಡುಗರ ಮೇಲುಗೈ-ಇಜಾನ್ ಸ್ಪೋರ್ಟ್ಸ್ ಮಡಿಲಿಗೆ ಡಿ.ಕೆ.ಶಿವಕುಮಾರ್ ಕಪ್

ತೀರ್ಥಹಳ್ಳಿಯಲ್ಲಿ ಉಡುಪಿ ಹುಡುಗರ ಮೇಲುಗೈ-ಇಜಾನ್ ಸ್ಪೋರ್ಟ್ಸ್ ಮಡಿಲಿಗೆ ಡಿ.ಕೆ.ಶಿವಕುಮಾರ್ ಕಪ್

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಶಿವಮೊಗ್ಗ-ತೀರ್ಥಹಳ್ಳಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್,ದೇಶಕ್ಕಾಗಿ ನಾವು ತೀರ್ಥಹಳ್ಳಿ,ಸ್ನೇಹಜೀವಿ ಗೆಳೆಯರ ಬಳಗ ಇವರ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ “ಡಿ.ಕೆ.ಶಿವಕುಮಾರ್ ಕಪ್-ಸೀಸನ್ 2” ಪ್ರಶಸ್ತಿಯನ್ನು ಇಜಾನ್ ಸ್ಪೋರ್ಟ್ಸ್ ಉಡುಪಿ ಗೆದ್ದುಕೊಂಡಿತು.
ಇಜಾನ್ ಸ್ಪೋರ್ಟ್ಸ್ ಸಂಘಟಿತ ಹೋರಾಟ-ಡಿ‌.ಕೆ‌.ಶಿ ಕಪ್ ಚಾಂಪಿಯನ್ಸ್ ಕಿರೀಟ
ಉದ್ಯಾನ ನಗರಿಯ ಯುವ ಉದಯೋನ್ಮುಖ ಆಟಗಾರ ಪ್ರಶಾಂತ್ ಪಿಳ್ಳೆ ಹೊರತು ಪಡಿಸಿ,ಸಂಪತ್ ಬೈಲಾಕೆರೆ ನಾಯಕತ್ವದಲ್ಲಿ,ಸಾಗರ್ ವಿಶ್ವ ಮಾರ್ಗದರ್ಶನದಲ್ಲಿ,10 ಮಂದಿ ಉಡುಪಿಯ ಯುವ ಆಟಗಾರರನ್ನೇ ನೆಚ್ಚಿಕೊಂಡ ಇಜಾನ್ ಸ್ಪೋರ್ಟ್ಸ್ ಲೀಗ್ ಹಂತದಿಂದಲೇ ಈ ಹಿಂದಿನ ಟೂರ್ನಮೆಂಟ್ ಗಳ ಸೋಲಿನ ಲೆಕ್ಕ ಒಂದೊಂದೇ ಚುಕ್ತಾ ಮಾಡುತ್ತಾ ಬಂದಿತ್ತು.
ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಪ್ರಕೃತಿ ನ್ಯಾಶ್ ವಿರುದ್ಧ ಅಕ್ಷಯ್ ಶೆಟ್ಟಿ ಮತ್ತು ಡೆರಿನ್,ಕ್ವಾರ್ಟರ್ ಫೈನಲ್ ನಲ್ಲಿ ಜನಪ್ರಿಯ ಮೈಟಿ ದಾವಣಗೆರೆ ವಿರುದ್ಧ ಪವನ್  ಪಿಳ್ಳೆ,ಸೆಮಿಫೈನಲ್ ನಲ್ಲಿ ರಿಯಲ್ ಫೈಟರ್ಸ್ ವಿರುದ್ಧ ಪವನ್,ಪಿಳ್ಳೆ ಮತ್ತು ರಾಹಿಲ್ ಅತ್ಯುತ್ತಮ ಪ್ರದರ್ಶನ ನೀಡಿ,ಕೂದಲೆಳೆ ಅಂತರದಲ್ಲಿ ಸಾಲು ಸಾಲು ಘಟಾನುಘಟಿ ತಂಡಗಳನ್ನು ಮಣಿಸಿ ಫೈನಲ್ ನೆಗೆದೇರಿತ್ತು.
ಫೈನಲ್ ಡೆರಿನ್ ಸ್ಪೋಟಕ ಆಟ
ಬಲಿಷ್ಟ ಫ್ರೆಂಡ್ಸ್ ಬೆಂಗಳೂರು ತಂಡದೆದುರಿನ ಫೈನಲ್ ಪಂದ್ಯದಲ್ಲಿ ಇಜಾನ್ ಸ್ಪೋರ್ಟ್ಸ್ ಉಡುಪಿಯ ಡ್ಯಾಶಿಂಗ್ ಓಪನರ್ ಡೆರಿನ್ ಫ್ರೆಂಡ್ಸ್ ಬೆಂಗಳೂರಿನ ಪ್ರಸಾದ್ ನೇರಳಕಟ್ಟೆ ಎಸೆದ ಅಂತಿಮ ಓವರ್ ನಲ್ಲಿ ಎರಡು ಬೌಂಡರಿ ಹಾಗೂ ಎರಡು ಭರ್ಜರಿ‌ ಸಿಕ್ಸರ್ ಸಹಿತ 21 ರನ್ ಸಿಡಿಸಿ ಭಾಗಶಃ ಫ್ರೆಂಡ್ಸ್ ಬೆಂಗಳೂರು ತಂಡವನ್ನು ಒತ್ತಡಕ್ಕೆ ಸಿಲುಕಿಸಿತ್ತು‌.ಇಜಾನ್ ಸ್ಪೋರ್ಟ್ಸ್ ನ‌ ವೇಗಿ ರಾಹಿಲ್ ಫ್ರೆಂಡ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟರ್ ಗಳ ವಿಕೆಟ್ ಉರುಳಿಸಿ ಇಜಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಚಾಂಪಿಯನ್ಸ್ ಇಜಾನ್ ಸ್ಪೋರ್ಟ್ಸ್ ಉಡುಪಿ ಪ್ರಥಮ ಬಹುಮಾನ 3 ಲಕ್ಷ ರೂ ನಗದು ಹಾಗೂ ದ್ವಿತೀಯ ಸ್ಥಾನಿ ಫ್ರೆಂಡ್ಸ್ ಬೆಂಗಳೂರು 1.5 ಲಕ್ಷ ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆದರು.
ಪಂದ್ಯಾಟದ ಬೆಸ್ಟ್ ಬೌಲರ್ ರಾಹಿಲ್ ಇಜಾನ್ ,ಬೆಸ್ಟ್ ಬ್ಯಾಟರ್ ಸಾಗರ್ ಭಂಡಾರಿ ಫ್ರೆಂಡ್ಸ್,ಬೆಸ್ಟ್ ಫೀಲ್ಡರ್ ಅಕ್ಷಯ್ ಶೆಟ್ಟಿ ಇಜಾನ್,ಬೆಸ್ಟ್ ಕೀಪರ್ ಶಂಕರ್ ಜೈ ಕರ್ನಾಟಕ ಹಾಗೂ ಫೈನಲ್ ಪಂದ್ಯಶ್ರೇಷ್ಟ-ಸರಣಿ ಶ್ರೇಷ್ಠ ಪ್ರಶಸ್ತಿ ಡೆರಿನ್ ಪಡೆದುಕೊಂಡರು.
*ಇಜಾನ್ ಸ್ಪೋರ್ಟ್ಸ್ ಗೆಲುವಿಗೆ ಹರ್ಷ ವ್ಯಕ್ತಪಡಿಸಿ,ಸ್ಪೋರ್ಟ್ಸ್ ಕನ್ನಡದೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ* *ಮಾತನಾಡಿದ ತಂಡದ ಮಾಲೀಕರಾದ ಮೊಹಮ್ಮದ್  ಸರ್ಫರಾಜ್ ರೆಹಮತ್*
*“ನಮ್ಮ ತಂಡದ ಯುವ ಆಟಗಾರರ ಸಂಯೋಜನೆ,ಸಂಘಟಿತ ಹೋರಾಟದ ಫಲವಾಗಿ ಜಯ ಲಭಿಸಿದ್ದು,ಮುಂದಿನ ದಿನಗಳಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಿದ್ದು,ಭವಿಷ್ಯದಲ್ಲಿ ಯುವಕರಿಗೆ ಉದ್ಯೋಗ ಮತ್ತು ಇಜಾನ್ ಸ್ಪೋರ್ಟ್ಸ್ ಸಂಸ್ಥೆಯ ಮೂಲಕ ಬಹಳಷ್ಟು ಸಮಾಜ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ” ಎಂದರು.*
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

4 × 3 =