ಕ್ರಿಕೆಟ್35 ಎಸೆತಗಳಲ್ಲಿ ಐಪಿಎಲ್ ಸೆಂಚುರಿ..? ಅದೂ 14ನೇ ವಯಸ್ಸಲ್ಲಿ..? ಅದ್ಭುತ ಹುಡುಗ..!

35 ಎಸೆತಗಳಲ್ಲಿ ಐಪಿಎಲ್ ಸೆಂಚುರಿ..? ಅದೂ 14ನೇ ವಯಸ್ಸಲ್ಲಿ..? ಅದ್ಭುತ ಹುಡುಗ..!

-

- Advertisment -spot_img

35 ಎಸೆತಗಳಲ್ಲಿ ಐಪಿಎಲ್ ಸೆಂಚುರಿ..? ಅದೂ 14ನೇ ವಯಸ್ಸಲ್ಲಿ..? ಅದ್ಭುತ ಹುಡುಗ..!

ಅಬ್ಬಾ.. ಅದೇನು ಧೈರ್ಯ.. ಅದೇನು ವೈಭವ..? ಅದೇನು ಆಟ.. ಈತ ಬರೀ ಪೋರನಲ್ಲ.. ಪ್ರಚಂಡ ಪೋರ..

ಐಪಿಎಲ್ ಹುಟ್ಟಿದಾಗ ವೈಭವ್ ಸೂರ್ಯವಂಶಿ ಹುಟ್ಟಿಯೇ ಇರಲಿಲ್ಲ.. ಐಪಿಎಲ್ ಶುರುವಾಗಿ 3 ವರ್ಷಗಳ ನಂತರ ಹುಟ್ಟಿದವನು ಇವತ್ತು ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.

14ನೇ ವಯಸ್ಸಿನಲ್ಲಿ ರಶೀದ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾರಂತಹ ವರ್ಲ್ಡ್ ಕ್ಲಾಸ್ ಬೌಲರ್’ಗಳ ಮುಂದೆ ಎದೆಯುಬ್ಬಿಸಿ ನಿಂತು ಶತಕ ಬಾರಿಸುವುದೆಂದರೆ..? ಅದೂ 35 ಎಸೆತಗಳಲ್ಲಿ..! ನಂಬಲಸಾಧ್ಯ..

ಇಶಾಂತ್ ಶರ್ಮಾನ ಒಂದೇ ಓವರ್’ನಲ್ಲಿ 3 ಸಿಕ್ಸರ್ಸ್, 28 ರನ್. 18 ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ರಿಕಿ ಪಾಂಟಿಂಗ್’ನನ್ನು ಇಶಾಂತ್ ಶರ್ಮಾ ಬೆಚ್ಚಿ ಬೀಳಿಸಿದ್ದ. ಆಗ ಈ ಸೂರ್ಯವಂಶಿ ಹುಟ್ಟಿರಲಿಲ್ಲ. ಈಗ ಅದೇ ಇಶಾಂತ್’ಗೆ ಈ ಹುಡುಗ ಆ ಪರಿ ಚಚ್ಚುತ್ತಾನೆ ಎಂದರೆ ಇವನು fearless. This kid is so special.

ಗುಜರಾತ್ ವಿರುದ್ಧ ವೈಭವ್ ಸೂರ್ಯವಂಶಿ ಪವರ್ ಪ್ಲೇನಲ್ಲೇ ಬಾರಿಸಿದ್ದು ಆರು ಸಿಕ್ಸರ್’ಗಳು. ನೆನಪಿರಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಡೀ ಟೂರ್ನಿಯಲ್ಲಿ ಪವರ್ ಪ್ಲೇನಲ್ಲಿ ಬಾರಿಸಿದ ಸಿಕ್ಸರ್’ಗಳ ಸಂಖ್ಯೆ ಐದು..!

ಬೆನ್ನ ಹಿಂದೆ 12 ಎಂದು ಬರೆಸಿಕೊಂಡಿದ್ದಾನೆ. ಅದು ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಬಳಸುತ್ತಿದ್ದ ಜರ್ಸಿ ನಂಬರ್.

ವೈಭವ್ ಸೂರ್ಯವಂಶಿ ಬಿಹಾರದ ಸಮಷ್ಠಿಪುರದವನು. ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಜೀವನಕ್ಕೆ ಆಧಾರವಾಗಿದ್ದ ತುಂಡು ಜಮೀನನ್ನು ಮಾರಿದ್ದರು ತಂದೆ ಸಂಜೀವ್ ಸೂರ್ಯವಂಶಿ. ಇವತ್ತು ಆ ತಂದೆ ಮಗನ ಆಟವನ್ನು ನೋಡಿ ಹೆಮ್ಮೆ ಪಡುತ್ತಿರಬಹುದು..!

‘’ಹೀಗೊಬ್ಬ ಹುಡುಗನಿದ್ದಾನೆ, ನೋಡು’’ ಎಂದು ಸೂರ್ಯವಂಶಿ ಬಗ್ಗೆ ರಾಜಸ್ಥಾನ ರಾಯಲ್ಸ್ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಹೇಳಿದವರು ವಿವಿಎಸ್ ಲಕ್ಷ್ಮಣ್. ಅಂಡರ್-19 one-day Challenger tournamentನಲ್ಲಿ ಆಡುತ್ತಿದ್ದಾಗ ದಿಗ್ಗಜ ಲಕ್ಷ್ಮಣ್ ಅವರ ಗಮನವನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆದಿದ್ದ ಈ ವೈಭವ್ ಸೂರ್ಯವಂಶಿ. ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ 58 ಎಸೆತಗಳಲ್ಲಿ ಅಂಡರ್-19 ಶತಕ ಬಾರಿಸಿದಾಗ ವೈಭವ್ ವಯಸ್ಸು ಜಸ್ಟ್ 13. ಈಗ 14ನೇ ವಯಸ್ಸಿಗೆ ಐಪಿಎಲ್ ಶತಕ. ಟಿ20 ಕ್ರಿಕೆಟ್’ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯನೆಂಬ ವಿಶ್ವದಾಖಲೆ.

Remember the name ವೈಭವ್ ಸೂರ್ಯವಂಶಿ.

LEAVE A REPLY

Please enter your comment!
Please enter your name here

eighteen − eight =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you