Categories
ಕ್ರಿಕೆಟ್

ಬೆಂಗಳೂರು-ಗಣೇಶ್ ಚಾಲೆಂಜಿಂಗ್ ಆಟ-ರಾಕರ್ಸ್ ಗೆಲುವಿನ ನಾಗಾಲೋಟ

ಕೆ.ಟಿ‌.ಪಿ‌‌.ಎಲ್ 8 ನೇ ಪಂದ್ಯದಲ್ಲಿ ರಾಕರ್ಸ್ ರಾಗಿಗುಡ್ಡ,
ಕ್ರಿಕೆಟ್ ನಕ್ಷತ್ರ ತಂಡವನ್ನು ಸೋಲಿಸುವುದರ ಮೂಲಕ ಸತತ 2 ನೇ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕ್ರಿಕೆಟ್ ನಕ್ಷತ್ರ,ಆರಂಭಿಕ ಕ್ರಮಾಂಕದ ಆಟಗಾರರ ಕುಸಿತದ ಬಳಿಕ ಸಚಿನ್ ಮಹಾದೇವ್ ಮತ್ತು ವಿಜಯ್ ತಂಡವನ್ನು ಆಧರಿಸಿ ನಿಗದಿತ 8 ಓವರ್ ಗಳಲ್ಲಿ 48 ರನ್ ಪೇರಿಸಿತ್ತು.
ಓವರೊಂದಕ್ಕೆ ಸರಾಸರಿ 6 ರನ್ ಗಳ ಗುರಿ ಪಡೆದ ಶಿವಮೊಗ್ಗದ ರಾಕರ್ಸ್ ರಾಗಿಗುಡ್ಡ ತಂಡ,ಮೊದಲ ಓವರ್ ನಲ್ಲಿ ಸಚಿನ್ ಮಹಾದೇವ್ ಮೊನಚಾದ ಬೌಲಿಂಗ್ ದಾಳಿಗೆ,6 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.ತದ ನಂತರ ಕ್ರೀಸ್ ಆಗಮಿಸಿದ ಗಿಳಿಯಾರು ನಾಗ ಮತ್ತು ಗಣೇಶ್ ಅಜೇಯವಾಗಿ ಗೆಲುವಿನ ಇನ್ನಿಂಗ್ಸ್ ಕಟ್ಟಿದರು.
ಗಿಳಿಯಾರು ನಾಗ 16 ರನ್ ಗಳಿಸಿದರೆ,ಗಣೇಶ್ ಭರ್ಜರಿ 2 ಸಿಕ್ಸರ್,1 ಆಕರ್ಷಕ ಬೌಂಡರಿಗಳ ಸಹಾಯದಿಂದ 26 ರನ್ ಗಳಿಸಿ 7 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿದರು.
ಅರ್ಹವಾಗಿ ಗಣೇಶ್ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

16 − 6 =