Categories
ಕ್ರಿಕೆಟ್

ಬೆಂಗಳೂರು-ಭಂಡಾರಿ ಸವ್ಯಸಾಚಿ ಪ್ರದರ್ಶನ-ಎಮ್.ಕೆ.ಎಸ್ ಸತತ 2 ನೇ ಗೆಲುವು

ಕೆ‌.ಟಿ‌‌‌.ಪಿ.ಎಲ್ 7 ನೇ ಪಂದ್ಯದಲ್ಲಿ ಎಮ್.ಕೆ‌.ಎಸ್ ಕೋಲಾರ ಮಟ್ಕಲ್ ತುಮಕೂರು ತಂಡವನ್ನು ಸೋಲಿಸಿ ಸತತ 2 ನೇ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಕೆ.ಎಸ್ ಕೋಲಾರ ಆರಂಭಿಕ‌ ಆಟಗಾರರಾದ ನವೀನ್ 17 ಮತ್ತು ಸಾಗರ್ ಭಂಡಾರಿ 16 ರನ್ ನೆರವಿನಿಂದ 8 ಓವರ್ ಗಳಲ್ಲಿ ಎದುರಾಳಿಗೆ 55 ರನ್ ಗಳ ಗುರಿ ನೀಡಿತ್ತು.
ಸವಾಲಿನ ಗುರಿ ಬೆನ್ನತ್ತಿದ ಮಟ್ಕಲ್ ತುಮಕೂರು ಆರಂಭಿಕ‌ ಆಟಗಾರರ ಬ್ಯಾಟಿಂಗ್ ವೈಫಲ್ಯದ ನಡುವೆ,ಅಂತಿಮ ಹಂತದಲ್ಲಿ ಉತ್ತಪ್ಪ ಬಿರುಸಿನ 28 ಮತ್ತು ಆದರ್ಶ 10 ರನ್ ಸಿಡಿಸಿದರೂ,ಅಂತಿಮವಾಗಿ
4 ರನ್ ಗಳ ಅಂತರದ ಸೋಲನುಭವಿಸಿತು‌.
ಸಾಗರ್ ಭಂಡಾರಿ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

7 − 4 =