
ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ.
ಖ್ಯಾತ ಕ್ರಿಕೆಟ್ ಆಟಗಾರ ವಿಠಲ್ ರಿಶಾನ್ ನಾಯಕ್ ಅವರು ದುಬೈನ ಪ್ರಸಿದ್ಧ ಕ್ರಿಕೆಟ್ ತಂಡವಾದ ಕರ್ನಾಟಕ ಕ್ರಿಕೆಟ್ ಲೀಗ್ ತಂಡದ ಮುಖ್ಯ ಸಲಹೆಗಾರರಾಗಿ ಇದೀಗ ಆಯ್ಕೆಯಾಗಿರುತ್ತಾರೆ.

ಅರಬ್ ಸಂಯುಕ್ತ ರಾಷ್ಟ್ರದ ದುಬೈಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ಆಟದ ಮೂಲಕ ವಿಶೇಷ ಸಂಚಲನ ಸೃಷ್ಟಿಸುತ್ತಿರುವ ಉಡುಪಿ ಕುಂದಾಪುರ ಸಮೀಪದ ಸೂರಾಲಿನ ಪ್ರತಿಭೆ ವಿಠಲ್ ರಿಶಾನ್ ನಾಯಕರ ಸೇವೆ ಸಾಧನೆಯನ್ನು ಪರಿಗಣಿಸಿ ಅರಬ್ ಸಂಯುಕ್ತ ರಾಷ್ಟ್ರದ ಪ್ರತಿಷ್ಠಿತ ಕ್ರಿಕೆಟ್ ಸಂಸ್ಥೆ ಕರ್ನಾಟಕ ಕ್ರಿಕೆಟ್ ಲೀಗ್ ತಂಡವು ವಿಠಲ್ ರಿಶಾನ್ ಅವರನ್ನು ಗೌರವಾನ್ವಿತ ಸಲಹೆಗಾರರನ್ನಾಗಿ ನೇಮಿಸಿದೆ.

ಈಗಾಗಲೇ ಗಲ್ಫ್ ಮಧ್ಯಪ್ರಾಚ್ಯ ದೇಶಗಳಿಗೆ ವಿಠಲ್ ರಿಶಾನ್ ನಾಯಕ್ ಅವರು ಸ್ಪೋರ್ಟ್ಸ್ ಕನ್ನಡ ಚಾನೆಲಿನ ಮುಖ್ಯ ಕಾರ್ಯನಿರ್ವಾಹಕ ಪ್ರತಿನಿಧಿಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದೇ ಬರುವ ನವೆಂಬರ್ 22 ಮತ್ತು 23ರಂದು ಕರ್ನಾಟಕ ಕ್ರಿಕೆಟ್ ಲೀಗ್ ಸಂಸ್ಥೆಯ ಆಶ್ರಯದಲ್ಲಿ ದುಬೈನಲ್ಲಿ ಬೃಹತ್ ಕ್ರಿಕೆಟ್ ಪಂದ್ಯಾಟವು ಜರಗಲಿದ್ದು ಗಲ್ಫ್ ರಾಷ್ಟ್ರದ ಬಹುತೇಕ ಬಲಿಷ್ಠ ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿವೆ.ಈ ಹಿನ್ನೆಲೆಯಲ್ಲಿ ವಿಠಲ್ ರಿಶಾನ್ ಅವರ ಆಯ್ಕೆ ನೆರವೇರಿದೆ.
ಕರ್ನಾಟಕ ಕ್ರಿಕೆಟ್ ಲೀಗ್ ಸಂಸ್ಥೆಯು ಅರಬ್ ಸಂಯುಕ್ತ ರಾಷ್ಟ್ರದಲ್ಲಿರುವ ಗಲ್ಫ್ ಗೆಳೆಯರು ಕರ್ನಾಟಕ ಕುಟುಂಬ ಸಂಸ್ಥೆಯ ಸಹಸಂಸ್ಥೆಯಾಗಿದೆ.ಈ ಸಂಸ್ಥೆಯು ಹಲವಾರು ವರ್ಷಗಳಿಂದ ಸಾಮಾಜಿಕ,ಸಾಂಸ್ಕೃತಿಕ ಚಟುವಟಿಕೆಯ ಜೊತೆಗೆ ಸಹಾಯ,ಸಹಕಾರ,ಸಂಪರ್ಕ,ಮಾಹಿತಿ,ಉದ್ಯೋಗ,ಕ್ರೀಡೆ ಸೇರಿದಂತೆ ಜನೋಪಯೋಗಿ ಸೇವಾ ಕೈಂಕರ್ಯವನ್ನು ನಿರಂತರವಾಗಿ ನಡೆಸುತ್ತಾ ಸಾವಿರಾರು ಕನ್ನಡಿಗರಿಗೆ ಆಸರೆಯನ್ನು ನೀಡುತ್ತಿದೆ.ಸುಮಾರು 5000ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ ದುಬೈನ ಬಹುದೊಡ್ಡ ಸಂಘಟನೆಯಾಗಿದೆ.
ಇದೀಗ ಈ ಸಂಸ್ಥೆಯು ನಮ್ಮೂರ ಕ್ರೀಡಾ ಪ್ರತಿಭೆ ಹಾಗೂ ಪಾದರಸದಂತೆ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ವಿಠಲ್ ರಿಶಾನ್ ಅವರನ್ನು ಕರ್ನಾಟಕ ಲೀಗ್ ತಂಡದ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿರುವುದು ಉಡುಪಿಗೆ ಹೆಮ್ಮೆ.ಕರ್ನಾಟಕ ಕ್ರಿಕೆಟ್ ಲೀಗನ ನೂತನ ಜವಾಬ್ದಾರಿಯು ವಿಠಲ ರಿಶಾನರ ಸೇವಾ ತತ್ಪರತೆಯ ಮಿನುಗುವ ಮುಕುಟಕ್ಕೆ ಮಗದೊಂದು ಮುತ್ತಿನ ಮಣಿ.ವಿಠಲ ರಿಶಾನ್ ನಾಯಕರಿಗೆ ಸ್ಪೋರ್ಟ್ಸ್ ಕನ್ನಡ ಕ್ರೀಡಾವಾಹಿನಿ ಹಾಗೂ ಉಡುಪಿಯ ಜನತೆಯ ಪರವಾಗಿ ಉಜ್ವಲ ಯಶಸ್ಸು ಭವಿಷ್ಯ ಪ್ರಾರ್ಥಿಸಿ ಹೃತ್ಪೂರ್ವಕ ಶುಭಹಾರೈಕೆಗಳು.
ಪಿ.ಲಾತವ್ಯ ಆಚಾರ್ಯ ಉಡುಪಿ.




