14.8 C
London
Tuesday, May 14, 2024
Homeಕ್ರಿಕೆಟ್ಕೊಲ್ಲಿ ರಾಷ್ಟ್ರದಲ್ಲಿ ವಿಜಯದುಂಧುಭಿ ಮೊಳಗಿಸಿದ ಆಟೋಡೀಲ್ ಮೂಡಬಿದಿರೆ- ಕರ್ನಾಟಕ ಪ್ರೀಮಿಯರ್ ಲೀಗ್ ನ ವಿನೂತನ ಚಾಂಪಿಯನ್ಸ್.

ಕೊಲ್ಲಿ ರಾಷ್ಟ್ರದಲ್ಲಿ ವಿಜಯದುಂಧುಭಿ ಮೊಳಗಿಸಿದ ಆಟೋಡೀಲ್ ಮೂಡಬಿದಿರೆ- ಕರ್ನಾಟಕ ಪ್ರೀಮಿಯರ್ ಲೀಗ್ ನ ವಿನೂತನ ಚಾಂಪಿಯನ್ಸ್.

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img

ಕೊಲ್ಲಿ ರಾಷ್ಟ್ರದಲ್ಲಿ ವಿಜಯದುಂಧುಭಿ ಮೊಳಗಿಸಿದ
ಆಟೋಡೀಲ್ ಮೂಡಬಿದಿರೆ- ಕರ್ನಾಟಕ ಪ್ರೀಮಿಯರ್ ಲೀಗ್ ನ ವಿನೂತನ ಚಾಂಪಿಯನ್ಸ್.

ಕೋಸ್ಟಲ್ ಫ್ರೆಂಡ್ಸ್ ದುಬೈ ಆಶ್ರಯದಲ್ಲಿ
ಅಲ್ ಹಮ್ರಿಯಾ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಅಜ್ಮನ್ ದುಬೈನ ಅಂಗಣದಲ್ಲಿ ನಿನ್ನೆ ನಡೆದ
ಹಗಲು ರಾತ್ರಿಯ
ಕೊಲ್ಲಿ ರಾಷ್ಟ್ರದ ಅತ್ಯಂತ ವೈಭವೋಪೇತ ಪಂದ್ಯಾವಳಿ ಎಂದೇ ಖ್ಯಾತಿ ಪಡೆದ “ಕರ್ನಾಟಕ ಪ್ರೀಮಿಯರ್ ಲೀಗ್” ಕೆ.ಪಿ.ಎಲ್- ಸೀಸನ್ 2″ ನ್ನು ಆಟೋಡೀಲ್ ಮೂಡಬಿದಿರೆ ಜಯಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು.

ಪ್ರತಿಷ್ಟಿತ ಪ್ರಶಸ್ತಿಗಾಗಿ 8 ಫ್ರಾಂಚೈಸಿಗಳು ಸೆಣಸಾಡಿದ್ದವು.
ಲೀಗ್ ಹಂತದ ರೋಚಕ ಕದನಗಳ ಬಳಿಕ ಅಂತಿಮವಾಗಿ,
ಮೊದಲ ಕ್ವಾಲಿಫೈಯರ್ ಸುತ್ತಿನಲ್ಲಿ
ಆಟೋಡೀಲ್ ತಂಡ ಕಳೆದ ಸಾಲಿನ ಚಾಂಪಿಯನ್ ಹೀಟ್ ಶೀಲ್ಡ್ ಗ್ಲಾಡಿಯೇಟರ್ಸ್ ಶಿಮಂತೂರು ತಂಡವನ್ನು ಸೋಲಿಸಿ ನೇರವಾಗಿ ಫೈನಲ್ ಪ್ರವೇಶಿಸಿತ್ತು.

ಎಲಿಮಿನೇಟರ್ ಸುತ್ತಿನಲ್ಲಿ ಚಕ್ರವರ್ತಿ ಕುಂದಾಪುರ ತಂಡವನ್ನು ಸೋಲಿಸಿದ ಗಂಗೊಳ್ಳಿ ಸ್ಟ್ರೈಕರ್ಸ್
ಎರಡನೇ ಕ್ವಾಲಿಫೈಯರ್ ಸುತ್ತು ಪ್ರವೇಶಿಸಿದರೂ, ಹೀಟ್ ಶೀಲ್ಡ್ ಗ್ಲಾಡಿಯೇಟರ್ಸ್ ತಂಡದೆದುರು ಪರಾಭವಗೊಂಡಿತು.

ಫೈನಲ್ ನಲ್ಲಿ ಆಟೋಡೀಲ್ ಮೂಡಬಿದಿರೆ,ಹೀಟ್ ಶೀಲ್ಡ್ ಗ್ಲಾಡಿಯೇಟರ್ಸ್ ವಿರುದ್ಧ 9 ವಿಕೆಟ್ ಗಳ ಅನಾಯಾಸ ಗೆಲುವು ಸಾಧಿಸಿತು.

ವಿಜೇತ ತಂಡ ಗರಿಷ್ಠ ನಗದು ಬಹುಮಾನ‌ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.

ವೈಯಕ್ತಿಕ ಪ್ರಶಸ್ತಿಯಾಗಿ
ಫೈನಲ್ ನ ಪಂದ್ಯಶ್ರೇಷ್ಟ ಆಟೋಡೀಲ್ ನ ಮಿಥುನ್ ಶೆಟ್ಟಿ,
ಟೂರ್ನಿಯ ಬೆಸ್ಟ್ ಬೌಲರ್ ಹೀಟ್ ಶೀಲ್ಡ್ ನ ವಿನಯ್,ಬೆಸ್ಟ್ ಬ್ಯಾಟ್ಸ್‌ಮನ್ ಚಕ್ರವರ್ತಿಯ ಗುರು ಪ್ರಸಾದ್, ಬೆಸ್ಟ್ ವಿಕೆಟ್ ಕೀಪರ್ ಹೀಟ್ ಶೀಲ್ಡ್ ನ ಹಮ್ದಾನ್,ಪಂದ್ಯಾವಳಿಯುದ್ದಕ್ಕೂ ಶ್ರೇಷ್ಠ ನಿರ್ವಹಣೆ ತೋರಿದ ಆಟೋ ಡೀಲ್ ನ ಮಿಥುನ್ ಶೆಟ್ಟಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ,
ಫೇರ್ ಪ್ಲೇ ಪ್ರಶಸ್ತಿ ಡಿ.ಜೆ‌.ಚಾಲೆಂಜರ್ಸ್ ಪಾಲಾಯಿತು.

ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಆಟೋಡೀಲ್ ಮಾಲೀಕ ಸೈಯ್ಯದ್ ಫೈಝಲ್,ಕಾಪು ಫ್ರೆಂಡ್ಸ್ ನ ಮೊಹಮ್ಮದ್ ಶಫಿ,
ಡಿ.ಜೆ ಚಾಲೆಂಜರ್ಸ್ ಪಡೀಲ್ ನ ದೀಪಕ್,ಹೀಟ್ ಶೀಲ್ಡ್ ಗ್ಲಾಡಿಯೇಟರ್ಸ್ ನ ಪ್ರೇಮನಾಥ್ ಶೆಟ್ಟಿ, ಅಲ್ ಸಿತಾರಾದ ಪರ್ವೇಜ್,ಗ್ಲೋಬಲಿಂಕ್ ವೆಸ್ಟರ್ನ್ ನ ಸಮೀರ್ ,ಕೋಸ್ಟಲ್ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು.

ಪ್ರಸಿದ್ಧ ಕನ್ನಡ ವೀಕ್ಷಕ ವಿವರಣೆಕಾರ ಸತೀಶ್ ಮಣಿಪಾಲ್ ಕಾರ್ಯಕ್ರಮ ನಿರೂಪಣೆಗೈದರು.
ಪಂದ್ಯಾವಳಿಯ ನೇರ ಪ್ರಸಾರವನ್ನು ನಮ್ಮ ಕುಡ್ಲ ಹಾಗೂ ಯೂಟ್ಯೂಬ್ ಚಾನೆಲ್ ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಿತ್ತು.
ಆರ್.ಕೆ.ಆಚಾರ್ಯ ಕೋಟ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

1 × 3 =