ಕ್ರಿಕೆಟ್ತನ್ನ ಹುಟ್ಟಿದ ಹೆಣ್ಣು ಮಗುವಿಗೆ ಅಭಿಮಾನದಿಂದ ಭಾರತದ ಕ್ರೀಡಾಂಗಣದ ಹೆಸರಿಟ್ಟ ವೆಸ್ಟ್...

ತನ್ನ ಹುಟ್ಟಿದ ಹೆಣ್ಣು ಮಗುವಿಗೆ ಅಭಿಮಾನದಿಂದ ಭಾರತದ ಕ್ರೀಡಾಂಗಣದ ಹೆಸರಿಟ್ಟ ವೆಸ್ಟ್ ಇಂಡೀಸ್ ಕ್ರಿಕೆಟರ್ ಬ್ರಾಥ್ ವೈಟ್

-

- Advertisment -spot_img
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ 2016ರ T20 ವಿಶ್ವಕಪ್ ಟೂರ್ನಿಯಲ್ಲಿ ಸರಣಿಯುದ್ದಕ್ಕೂ ದಿಟ್ಟ ಆಟದ ಪ್ರದರ್ಶನ ನೀಡಿ ಭಾರತದ ನೆಲದಲ್ಲಿ ಕ್ರಿಕೆಟ್ ಕಾಶಿ ಎಂದೇ ಬಿಂಬಿತವಾಗಿರುವ ಈಡನ್ ಗಾರ್ಡನ್ ಮೈದಾನದಲ್ಲಿ ನೆಡೆದ ಫೈನಲ್ ಪಂದ್ಯವನ್ನು ಗೆದ್ದು ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು.
ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಘಟ್ಟ ತಲುಪಿತ್ತು ಯಾರು ಊಹಿಸದ ರೀತಿಯಲ್ಲಿ ಒಂದೇ ಓವರ್‌ನಲ್ಲಿ ಸಂಪೂರ್ಣ ಆಟದ ಗತಿಯೇ ಬದಲಾಗಿ ಹೋಯಿತು, ಅದಕ್ಕೆ ಕಾರಣ ವಿಂಡೀಸ್ ಕ್ರಿಕೆಟಿಗ ಕಾರ್ಲೋಸ್ ಬ್ರಾಥ್ ವೈಟ್ ಎಂದರೆ ತಪ್ಪಾಗಲಾರದು.
ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ T20ಯ ವಿಶ್ವ ಚಾಂಪಿಯನ್ ಆಯಿತು. ವೆಸ್ಟ್ ಇಂಡೀಸ್
ಬೆನ್ ಸ್ಟ್ರೋಕ್ ಎಸೆದ ಅಂತಿಮ ಓವರ್‌ನಲ್ಲಿ ಬ್ರಾಥ್‌ವೈಟ್ ಸತತ ನಾಲ್ಕು ಸಿಕ್ಸರ್‌ಗಳನ್ನು ಈಡನ್ ಗಾರ್ಡನ್ ಮೈದಾನದಿಂದಾಚೆ ಬಾರಿಸಿ ತಮ್ಮ ತಂಡಕ್ಕೆ T20 ವಿಶ್ವಕಪ್ ಅನ್ನು ತಂದುಕೊಡಲು ಯಶಸ್ವಿಯಾದರು.
ಅಲ್ಲಿಯವರೆಗೂ ಬ್ರಾತ್‌ವೈಟ್ ಎಂದರೆ ಯಾರು ಎಂದು ತಿಳಿಯದ ಪ್ರಪಂಚಕ್ಕೆ ಅದರಲ್ಲೂ ಕ್ರಿಕೆಟ್ ಪ್ರೇಮಿಗಳಿಗೆ ಒಮ್ಮೆಲೆ ಆ ಪಂದ್ಯದಲ್ಲಿ ಬ್ರಾಥ್‌ವೈಟ್ ಸ್ಟಾರ್ ಕ್ರಿಕೆಟಿಗನಾಗಿ ಹೊರಹೊಮ್ಮಿದರು. ಕೇವಲ ಹತ್ತು ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 34 ರನ್ ಗಳಿಸುವ ಮೂಲಕ ತನ್ನ ಹೆಸರು ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಕಾರ್ಲೋಸ್ ಬ್ರಾಥ್‌ವೈಟ್ ಎಂದು ನೆನಪಿಡುವಂತೆ ಮಾಡಿದರು.
ಅಂದಿನಿಂದ ಭಾರತದ ನೆಲದಲ್ಲಿ ವಿಶ್ವಕಪ್ ಗೆಲ್ಲಲು ಕಾರಣವಾದ ಮತ್ತು ಜಗತ್ತಿಗೆ ತನ್ನ ಹೆಸರು ಪರಿಚಯ ಮಾಡಿಕೊಟ್ಟ ಕ್ರೀಡಾಂಗಣದ ಅಂದರೆ T20 ಫೈನಲ್ ಅಡಿ ಕೊನೆಯ ಓವರ್ ನಲ್ಲಿ  34 ರನ್ ಹೊಡೆದ  ಕಲ್ಕತ್ತಾದ ಈಡನ್ ಗಾರ್ಡನ್ ಮೈದಾನದ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡರು ಬ್ರಾಥ್ ವೈಟ್.
ಇದೇ ಕಾರಣದಿಂದಲೇ ಬ್ರಾಥ್‌ವೈಟ್ ಅವರು ವಿಶೇಷವಾಗಿ ಈಡನ್ ಗಾರ್ಡನ್ಸ್ ಕ್ರೀಡಾಂಗಣವನ್ನು  ಇಷ್ಟಪಡುತ್ತೇನೆ ಎಂದು ಅವರೆ ಹಲವಾರು ಸಂದರ್ಭಗಳಲ್ಲಿ  ಹೇಳಿಕೊಂಡಿದ್ದರು.
ಇತ್ತೀಚೆಗಷ್ಟೇ ಈಡನ್ ಗಾರ್ಡನ್‍ ಮೇಲಿನ ಅಭಿಮಾನದಿಂದ ಮತ್ತು ತನ್ನ ಜೀವಿತಾವಧಿಯ ಕೊನೆಯವರೆಗೂ ನೆನಪಿಡುವ ಸಲುವಾಗಿ ತನ್ನ ಹುಟ್ಟಿದ ಹೆಣ್ಣು ಮಗುವಿಗೆ ‘ಈಡನ್’ ಎಂದು ನಾಮಕರಣ ಮಾಡಿದ್ದಾರೆ. ಫೆಬ್ರವರಿ 6 ರಂದು, ಕಾರ್ಲೋಸ್ ಬ್ರಾಥ್ವೈಟ್ ಪತ್ನಿ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದೇ ಖುಷಿಯಲ್ಲಿ ತನ್ನ ಮಗುವಿಗೆ ಈಡನ್ ಎಂದು ಹೆಸರಿಟ್ಟಿದ್ದೇನೆ ಎಂದು ಬ್ರಾಥ್‌ವೈಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ
ನನ್ನ ಮಗುವಿನ ಹೆಸರನ್ನು ನೆನಪಿಟ್ಟುಕೊಳ್ಳಿ.. ಈಡನ್ ರೋಸ್ ಬ್ರಾಥ್‌ವೈಟ್. ಹುಟ್ಟಿದ ದಿನಾಂಕ 2/6/22 . ನಾನು ನಿನ್ನನ್ನು ಯಾವಾಗಲೂ ಅಪ್ಪನಂತೆ ಪ್ರೀತಿಸುತ್ತೇನೆ ಮಗಳೇ. ಧನ್ಯವಾದಗಳು ಜೆಸ್ಸಿ ಪರ್ಪಲ್. ನೀನು ನನ್ನ ಜೀವನಕ್ಕೆ ಬಂದಿದ್ದು ನನ್ನ ಅದೃಷ್ಟ. ಖಂಡಿತವಾಗಿಯೂ ಈಡನ್ ರೋಸ್ ಬ್ರಾಥ್‌ವೈಟ್‌ಗೆ ನೀನು ಒಳ್ಳೆಯ ತಾಯಿಯಾಗಿರುತ್ತೀಯ ಎಂದು ಭಾವಿಸಿದ್ದೇನೆ. ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
   ಇದನ್ನೇ ಹೇಳೊದು ನಿಜವಾದ ಆಭಿಮಾನವೆಂದು
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

LEAVE A REPLY

Please enter your comment!
Please enter your name here

15 − 14 =

Latest news

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...
- Advertisement -spot_imgspot_img

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ

  ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ Maharaja Trophy: ಜೂನ್‌ 20 ರಿಂದ ಟೂರ್ನಿ ಆರಂಭ, ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪಂದ್ಯ ಆಯೋಜನೆ ಐದನೇ ಆವೃತ್ತಿಯ...

Must read

- Advertisement -spot_imgspot_img

You might also likeRELATED
Recommended to you