11.7 C
London
Tuesday, April 16, 2024
Homeಕ್ರಿಕೆಟ್ಶನಿವಾರದಿಂದ ವೈದಿಕರ ಕ್ರಿಕೆಟ್ ದರ್ಬಾರ್; ವಿ ಪಿ ಎಲ್ 2023 ರ ನಾಲ್ಕನೇಯ...

ಶನಿವಾರದಿಂದ ವೈದಿಕರ ಕ್ರಿಕೆಟ್ ದರ್ಬಾರ್; ವಿ ಪಿ ಎಲ್ 2023 ರ ನಾಲ್ಕನೇಯ ಅಧ್ಯಾಯ

Date:

Related stories

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...

RCB ಯನ್ನು ಸುಟ್ಟು ಹಾಕಿದ ಮಯಾಂಕ್ ಯಾದವ್ ಅವರ ವೇಗ

RCB ವಿರುದ್ಧ 3/14 ರ ಅದ್ಭುತ ಬೌಲಿಂಗ್ ಅಂಕಿಅಂಶಗಳಿಗಾಗಿ  ಮಯಾಂಕ್ ಯಾದವ್...
spot_imgspot_img
ವೈದಿಕ ಪ್ರೀಮಿಯರ್ ಲೀಗ್ 2023 ರ ನಾಲ್ಕನೇಯ ಆವೃತ್ತಿಯು ಬಂಟ್ವಾಳ ಸಮೀಪದ ಬರಿಮಾರು ಮಹಾಮಾಯ ದೇವಸ್ಥಾನದ ಮೈದಾನದಲ್ಲಿ ಶನಿವಾರದಿಂದ ಆರಂಭವಾಗಲಿದೆ. ವೈದಿಕರಿಂದ, ವೈದಿಕರಿಗಾಗಿ, ವೈದಿಕರಿಗೋಸ್ಕರ  ಈ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು ಮಾರ್ಚ್ 18-19ಕ್ಕೆ ಕ್ರಿಕೆಟ್ ಪಂದ್ಯಾಟವನ್ನು ಯಶಸ್ವಿಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮಾರ್ಚ್ 18ರಂದು ಕ್ರಿಕೆಟ್ ಲೀಗ್‍ಗೆ ಚಾಲನೆ ಸಿಗಲಿದೆ. ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸುತ್ತಿವೆ.
” ಕ್ರಿಕೆಟ್ ಅಭಿಮಾನಿಗಳಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕ್ರಿಕೆಟ್ ಪಂದ್ಯಾವಳಿ ನಡೆಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ” ಎಂದು ಪಂದ್ಯಾಟದ ರೂವಾರಿಗಳು  ಪಂಡಿತ್ ಕಾಶಿನಾಥ ಆಚಾರ್ಯ  ಮಂಗಳೂರು ಇವರು ಹೇಳಿದರು . ಎಂದಿನಂತೆ ಬರಿಮಾರು ಮಹಾಮಾಯ ದೇವಸ್ಥಾನದ ಮೈದಾನದಲ್ಲಿ ಪಂದ್ಯಾವಳಿಗೆ ಚಾಲನೆ ನೀಡಲಾಗಿದ್ದು, ಇಲ್ಲಿಯೇ ಪಂದ್ಯಾವಳಿ ನಡೆಯಲಿದೆ.
ಎರಡು  ದಿನಗಳ ಪಂದ್ಯಾವಳಿಯನ್ನು ಆಯೋಜಿಸುವ ಗುರಿಯು  ವೈದಿಕ ಕುಟುಂಬದಲ್ಲಿ ಕ್ರೀಡಾ ಮನೋಭಾವವನ್ನು ಉತ್ತೇಜಿಸುವುದು  ಮತ್ತು ಇದು ಬರೇ ಕ್ರಿಕೆಟ್ ಮಾತ್ರವಲ್ಲಇದೊಂದು  ವೈದಿಕರ ಸಮ್ಮಿಲನ.
ಈ ಬಾರಿಯ ಟೂರ್ನಿಯನ್ನು ಅಗ್ರ ವೈದಿಕರು ಹಾಗೂ ಗಣ್ಯಾತಿ ಗಣ್ಯರು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ ಪಂದ್ಯಗಳು  ನಡೆಯಲಿದ್ದು, ಪಂದ್ಯಾವಳಿಯು ಮಾರ್ಚ್ 19 ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಈ ಬಾರಿ  VPL ಟ್ರೋಫಿಗಾಗಿ 8 ತಂಡಗಳು ಪೈಪೋಟಿ ನಡೆಸಲಿವೆ.
ಚರಣ್ ಭಟ್ರ  Bhatji Avengers
ವಿಠ್ಠಲ್ ಭಟ್ರ  Veera Vaidika cricketers
ಸುಧೇಶ್ ಭಟ್ರ  Bhatji’ಸ್ Super Kings
ಬಿ ರಾಕೇಶ್ ಪ್ರಭುರವರ  Mahamaya cricketers Barimaru
ಹರೀಶ್ ಭಟ್ರ  Rocking Vaidiks Mumbai
ಭರತ್ ಭಟ್ರ  Anant Vaidiks
ಗೋಪಾಲ್ ಭಟ್ರ  Vaidik Gladiators
ರಂಜಿತ್ ಭಟ್ರ  Bhat Brothers
ಟೂರ್ನಿಗೆ ಪ್ರಾಕ್ಟೀಸ್ ನಡೆಯುತ್ತಿದ್ದು, 8 ತಂಡಗಳ ಪ್ಲೇಯರ್ಸ್ ಗಳು ಪ್ರಾಕ್ಟೀಸ್ ಮಾಡುತ್ತಿದ್ದಾರೆ.  ವಿಜೇತರು ಮತ್ತು ಉತ್ತಮ ಆಟಗಾರರಿಗೆ ಆಕರ್ಷಕ ಬಹುಮಾನದೊಂದಿಗೆ ಟ್ರೋಫಿಗಳನ್ನು ನೀಡಲಾಗುತ್ತದೆ.
ಕಳೆದ ಮೂರೂ VPL ಸೀಸನ್ ಗಳು ಭರ್ಜರಿ ಯಶಸ್ಸಿನೊಂದಿಗೆ ನಡೆದು ನಾಲ್ಕನೆಯ ಸೀಸನ್ ಅನ್ನು ಬರುವ ವಾರಾಂತ್ಯದಲ್ಲಿ ಪ್ರಾರಂಭಿಸಲು ನಿರ್ಧರಿಸಿದ್ದಾರೆ.  ಪಂಡಿತ್ ಕಾಶಿನಾಥ ಆಚಾರ್ಯ ಇವರ ಸಂಯೋಜನೆಯಲ್ಲಿ ಬಹುನಿರೀಕ್ಷಿತ ವಿಪಿಎಲ್ ಪಂದ್ಯಾವಳಿ ಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ.
ಬಿ ರಾಕೇಶ್ ಪ್ರಭು, ಅನುವಂಶಿಕ ಮೊಕ್ತೇಸರರು ಹಾಗೂ ಧರ್ಮದರ್ಶಿಗಳು ಶ್ರೀ ಮಹಮ್ಮಾಯ ದೇವಸ್ಥಾನ ಬರಿಮಾರು ಈ VPL ಟೂರ್ನಮೆಂಟ್ ನ ಪ್ರಮುಖ ಪ್ರೋತ್ಸಾಹಕರು ಆಗಿರುತ್ತಾರೆ.
 ಕಳೆದ ಬಾರಿ VPLಮೂರನೇ ಆವೃತ್ತಿಯಲ್ಲಿ ಭಟ್ಜಿಸ್ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿತ್ತು. ಈ ಬಾರಿ ಯಾರು ಕಪ್ ಗೆಲ್ಲುತ್ತಾರೋ ಕಾದು ನೋಡಬೇಕು.
ಬರಿಮಾರು ಮಹಾಮಾಯ ದೇವಸ್ಥಾನದ  ಗ್ರೌಂಡ್ ಅಭಿಮಾನಿಗಳಿಂದ ತುಂಬಿರುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ.
ಆಟ ಶುರುವಾಗಲಿ!
ಅಂಕಣಕಾರರು
ಸುರೇಶ್ ಭಟ್ ಮೂಲ್ಕಿ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

9 − 3 =