ಕ್ರಿಕೆಟ್ಶನಿವಾರದಿಂದ ವೈದಿಕರ ಕ್ರಿಕೆಟ್ ದರ್ಬಾರ್; ವಿ ಪಿ ಎಲ್ ...

ಶನಿವಾರದಿಂದ ವೈದಿಕರ ಕ್ರಿಕೆಟ್ ದರ್ಬಾರ್; ವಿ ಪಿ ಎಲ್ 2023 ರ ನಾಲ್ಕನೇಯ ಅಧ್ಯಾಯ

-

- Advertisment -spot_img
ವೈದಿಕ ಪ್ರೀಮಿಯರ್ ಲೀಗ್ 2023 ರ ನಾಲ್ಕನೇಯ ಆವೃತ್ತಿಯು ಬಂಟ್ವಾಳ ಸಮೀಪದ ಬರಿಮಾರು ಮಹಾಮಾಯ ದೇವಸ್ಥಾನದ ಮೈದಾನದಲ್ಲಿ ಶನಿವಾರದಿಂದ ಆರಂಭವಾಗಲಿದೆ. ವೈದಿಕರಿಂದ, ವೈದಿಕರಿಗಾಗಿ, ವೈದಿಕರಿಗೋಸ್ಕರ  ಈ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು ಮಾರ್ಚ್ 18-19ಕ್ಕೆ ಕ್ರಿಕೆಟ್ ಪಂದ್ಯಾಟವನ್ನು ಯಶಸ್ವಿಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮಾರ್ಚ್ 18ರಂದು ಕ್ರಿಕೆಟ್ ಲೀಗ್‍ಗೆ ಚಾಲನೆ ಸಿಗಲಿದೆ. ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸುತ್ತಿವೆ.
” ಕ್ರಿಕೆಟ್ ಅಭಿಮಾನಿಗಳಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕ್ರಿಕೆಟ್ ಪಂದ್ಯಾವಳಿ ನಡೆಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ” ಎಂದು ಪಂದ್ಯಾಟದ ರೂವಾರಿಗಳು  ಪಂಡಿತ್ ಕಾಶಿನಾಥ ಆಚಾರ್ಯ  ಮಂಗಳೂರು ಇವರು ಹೇಳಿದರು . ಎಂದಿನಂತೆ ಬರಿಮಾರು ಮಹಾಮಾಯ ದೇವಸ್ಥಾನದ ಮೈದಾನದಲ್ಲಿ ಪಂದ್ಯಾವಳಿಗೆ ಚಾಲನೆ ನೀಡಲಾಗಿದ್ದು, ಇಲ್ಲಿಯೇ ಪಂದ್ಯಾವಳಿ ನಡೆಯಲಿದೆ.
ಎರಡು  ದಿನಗಳ ಪಂದ್ಯಾವಳಿಯನ್ನು ಆಯೋಜಿಸುವ ಗುರಿಯು  ವೈದಿಕ ಕುಟುಂಬದಲ್ಲಿ ಕ್ರೀಡಾ ಮನೋಭಾವವನ್ನು ಉತ್ತೇಜಿಸುವುದು  ಮತ್ತು ಇದು ಬರೇ ಕ್ರಿಕೆಟ್ ಮಾತ್ರವಲ್ಲಇದೊಂದು  ವೈದಿಕರ ಸಮ್ಮಿಲನ.
ಈ ಬಾರಿಯ ಟೂರ್ನಿಯನ್ನು ಅಗ್ರ ವೈದಿಕರು ಹಾಗೂ ಗಣ್ಯಾತಿ ಗಣ್ಯರು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ ಪಂದ್ಯಗಳು  ನಡೆಯಲಿದ್ದು, ಪಂದ್ಯಾವಳಿಯು ಮಾರ್ಚ್ 19 ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಈ ಬಾರಿ  VPL ಟ್ರೋಫಿಗಾಗಿ 8 ತಂಡಗಳು ಪೈಪೋಟಿ ನಡೆಸಲಿವೆ.
ಚರಣ್ ಭಟ್ರ  Bhatji Avengers
ವಿಠ್ಠಲ್ ಭಟ್ರ  Veera Vaidika cricketers
ಸುಧೇಶ್ ಭಟ್ರ  Bhatji’ಸ್ Super Kings
ಬಿ ರಾಕೇಶ್ ಪ್ರಭುರವರ  Mahamaya cricketers Barimaru
ಹರೀಶ್ ಭಟ್ರ  Rocking Vaidiks Mumbai
ಭರತ್ ಭಟ್ರ  Anant Vaidiks
ಗೋಪಾಲ್ ಭಟ್ರ  Vaidik Gladiators
ರಂಜಿತ್ ಭಟ್ರ  Bhat Brothers
ಟೂರ್ನಿಗೆ ಪ್ರಾಕ್ಟೀಸ್ ನಡೆಯುತ್ತಿದ್ದು, 8 ತಂಡಗಳ ಪ್ಲೇಯರ್ಸ್ ಗಳು ಪ್ರಾಕ್ಟೀಸ್ ಮಾಡುತ್ತಿದ್ದಾರೆ.  ವಿಜೇತರು ಮತ್ತು ಉತ್ತಮ ಆಟಗಾರರಿಗೆ ಆಕರ್ಷಕ ಬಹುಮಾನದೊಂದಿಗೆ ಟ್ರೋಫಿಗಳನ್ನು ನೀಡಲಾಗುತ್ತದೆ.
ಕಳೆದ ಮೂರೂ VPL ಸೀಸನ್ ಗಳು ಭರ್ಜರಿ ಯಶಸ್ಸಿನೊಂದಿಗೆ ನಡೆದು ನಾಲ್ಕನೆಯ ಸೀಸನ್ ಅನ್ನು ಬರುವ ವಾರಾಂತ್ಯದಲ್ಲಿ ಪ್ರಾರಂಭಿಸಲು ನಿರ್ಧರಿಸಿದ್ದಾರೆ.  ಪಂಡಿತ್ ಕಾಶಿನಾಥ ಆಚಾರ್ಯ ಇವರ ಸಂಯೋಜನೆಯಲ್ಲಿ ಬಹುನಿರೀಕ್ಷಿತ ವಿಪಿಎಲ್ ಪಂದ್ಯಾವಳಿ ಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ.
ಬಿ ರಾಕೇಶ್ ಪ್ರಭು, ಅನುವಂಶಿಕ ಮೊಕ್ತೇಸರರು ಹಾಗೂ ಧರ್ಮದರ್ಶಿಗಳು ಶ್ರೀ ಮಹಮ್ಮಾಯ ದೇವಸ್ಥಾನ ಬರಿಮಾರು ಈ VPL ಟೂರ್ನಮೆಂಟ್ ನ ಪ್ರಮುಖ ಪ್ರೋತ್ಸಾಹಕರು ಆಗಿರುತ್ತಾರೆ.
 ಕಳೆದ ಬಾರಿ VPLಮೂರನೇ ಆವೃತ್ತಿಯಲ್ಲಿ ಭಟ್ಜಿಸ್ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿತ್ತು. ಈ ಬಾರಿ ಯಾರು ಕಪ್ ಗೆಲ್ಲುತ್ತಾರೋ ಕಾದು ನೋಡಬೇಕು.
ಬರಿಮಾರು ಮಹಾಮಾಯ ದೇವಸ್ಥಾನದ  ಗ್ರೌಂಡ್ ಅಭಿಮಾನಿಗಳಿಂದ ತುಂಬಿರುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ.
ಆಟ ಶುರುವಾಗಲಿ!
ಅಂಕಣಕಾರರು
ಸುರೇಶ್ ಭಟ್ ಮೂಲ್ಕಿ

LEAVE A REPLY

Please enter your comment!
Please enter your name here

19 − 7 =

Latest news

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ; ಅದು ಜನರ ಭಾವನೆ ಮತ್ತು ಗುರುತಿನ ಭಾಗವಾಗಿದೆ. ಆದರೆ ದೀರ್ಘಕಾಲದವರೆಗೆ ಬಿಹಾರ...

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ಉಡುಪಿ...
- Advertisement -spot_imgspot_img

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

Must read

- Advertisement -spot_imgspot_img

You might also likeRELATED
Recommended to you