ಕ್ರಿಕೆಟ್777 ಟ್ರೋಫಿ ಗೆ ಸಾಕ್ಷಿಯಾಗಲಿರುವ ಉಡುಪಿ; ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್ ದಿಗ್ಗಜರಿಗೆ...

777 ಟ್ರೋಫಿ ಗೆ ಸಾಕ್ಷಿಯಾಗಲಿರುವ ಉಡುಪಿ; ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್ ದಿಗ್ಗಜರಿಗೆ ಸನ್ಮಾನ!

-

- Advertisment -spot_img

 

777 ಟ್ರೋಫಿ ಗೆ ಸಾಕ್ಷಿಯಾಗಲಿರುವ ಉಡುಪಿ; ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್ ದಿಗ್ಗಜರಿಗೆ ಸನ್ಮಾನ!

ಉಡುಪಿ: ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್ ಲೋಕದ ದಿಗ್ಗಜರಿಗೆ ಸಮರ್ಪಿತವಾದ “777 ಟ್ರೋಫಿ 2025 – ಲೆಜೆಂಡರಿ ಕ್ರಿಕೆಟರ್ಸ್ ಟೂರ್ನಮೆಂಟ್” ಉಡುಪಿ ನಗರದಲ್ಲಿ ಈ ವಾರ ಅದ್ದೂರಿಯಾಗಿ ನಡೆಯಲಿದೆ.

ಈ ಟೂರ್ನಮೆಂಟ್ ನ ವಿಶೇಷತೆ ಎಂದರೆ – ಇದು ಒಂದು ಆಕ್ಷನ್‌ ಆಧಾರಿತ ಟೂರ್ನಮೆಂಟ್ ಆಗಿದ್ದು, ತಂಡಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಪ್ರತಿ ತಂಡವೂ ತಮ್ಮ ತಮ್ಮ ಆಕ್ಷನ್‌ನಲ್ಲಿ ಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಈಗಲೇ ಕುತೂಹಲ ಮೂಡಿಸಿದೆ – ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕು!

ಈ ಟೂರ್ನಿಯ ಆಯೋಜಕ ಸಂದೇಶ್ ಕುಂದರ್, ಅವರು ಹಿಂದಿನ ದಿನಗಳಲ್ಲಿ ಪ್ರಸಿದ್ಧ “ಸೀಶೆಲ್ಸ್ ಇಂಟರ್‌ನ್ಯಾಷನಲ್” ತಂಡವನ್ನು ಪ್ರತಿನಿಧಿಸಿದ್ದರೆ, ಅಂದಿನ ದಿನಗಳಲ್ಲಿ ಅವರು “777 ಕ್ರಿಕೆಟ್ ಕ್ಲಬ್” ಪರವೂ ಆಡಿದ್ದರು. ಆ ನೆನಪಿಗೆ ಗೌರವವಾಗಿ, ಅವರು ಈಗ ಇದೇ ಹೆಸರಿನಲ್ಲಿ ಈ ಅದ್ದೂರಿ ಟೂರ್ನಿಯನ್ನು ಆಯೋಜಿಸಿದ್ದಾರೆ. ಸಂದೇಶ್ ಕುಂದರ್ ಅವರು ಮುಂಚಿನ “ವಾಹಿನಿ ಪಡುಕರೆ” ತಂಡದ ಸ್ಟಾರ್ ಆಟಗಾರರಾಗಿದ್ದರು.

ಈ ಸಂದರ್ಭದಲ್ಲಿ, ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್‌ಗೆ ಮಹತ್ವದ ಕೊಡುಗೆ ನೀಡಿದ ಆರು ಹಿರಿಯ ಕ್ರಿಕೆಟಿಗರನ್ನು ಗೌರವಿಸುವ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.

ಗೌರವಕ್ಕೆ ಆಯ್ಕೆಯಾದ ಆಟಗಾರರು:
➡️ ಪ್ರದೀಪ್ ವಾಜ್ ( ಚಕ್ರವರ್ತಿ ಕುಂದಾಪುರ)
➡️ ಸುರೇಂದ್ರ ( ವೀರಕೇಸರಿ ಸುರತ್ಕಲ್)
➡️ ದಿನೇಶ್ ಪೈ (ಸ್ವಾಮಿ ಗಂಗೊಳ್ಳಿ)
➡️ ಸತೀಶ್ ಕುಂದರ್ (ವಾಹಿನಿ ಪಡುಕರೆ)
➡️ ಸತೀಶ್.ಜಿ (ಸೀ ಶೋರ್ ಮಲ್ಪೆ)
➡️ ಡಾ. ವಿನೋದ್ ನಾಯಕ್ (ಸ್ಪಾರ್ಕ್ ಉಡುಪಿ)

777 ಕ್ರಿಕೆಟರ್ಸ್ ತೆಂಕನಿಡಿಯೂರು ಆಯೋಜಿಸುತ್ತಿರುವ ಈ ಟೂರ್ನಮೆಂಟ್‌ ಅಕ್ಟೋಬರ್ 31, ನವೆಂಬರ್ 1 ಮತ್ತು 2ರಂದು ನೇಜಾರು ಗ್ರೌಂಡ್ ನಲ್ಲಿ ನಡೆಯಲಿದ್ದು, ಪಂದ್ಯಗಳು Sports ಕನ್ನಡ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. Sports Mail ಕೂಡ ಈ ಟೂರ್ನಿಯ ಅಧಿಕೃತ ಪ್ರಸಾರಕರು.

ಉಡುಪಿ ಕ್ರಿಕೆಟ್ ಅಭಿಮಾನಿಗಳಿಗೆ ಇದು ನಿಜಕ್ಕೂ ವಿಶಿಷ್ಟ ಕ್ರಿಕೆಟ್ ಹಬ್ಬವಾಗಲಿದ್ದು, ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್‌ನ ಶ್ರೇಷ್ಠ ಪ್ರತಿಭೆಗಳ ಪ್ರದರ್ಶನ ಕಣ್ತುಂಬಿಕೊಳ್ಳಲು ಎಲ್ಲರೂ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here

12 − four =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you