ಕ್ರಿಕೆಟ್ಒಂದೊಳ್ಳೆ ಪ್ರತಿಭೆಯನ್ನು ಇವರು ಕೊಂದೇ ಬಿಟ್ಟರು..! 

ಒಂದೊಳ್ಳೆ ಪ್ರತಿಭೆಯನ್ನು ಇವರು ಕೊಂದೇ ಬಿಟ್ಟರು..! 

-

- Advertisment -spot_img

ಒಂದೊಳ್ಳೆ ಪ್ರತಿಭೆಯನ್ನು ಇವರು ಕೊಂದೇ ಬಿಟ್ಟರು..! 

ಟೆಸ್ಟ್ ಶತಕ ಬಾರಿಸಿದವನಿಗೆ.. 

ರಣಜಿ ಟ್ರೋಫಿಯಲ್ಲಿ ರನ್ ಹೊಳೆಯನ್ನೇ ಹರಿಸಿದವನಿಗೆ ಭಾರತ ‘ಎ’ ತಂಡದಲ್ಲೂ ಸ್ಥಾನ ಪಡೆಯುವ ಅರ್ಹತೆ ಇಲ್ಲವೆಂದರೆ..? 

ಭಾರತೀಯ ಕ್ರಿಕೆಟ್’ನಲ್ಲಿ ನಡೆಯುತ್ತಿರುವ ಕೊಳಕು ರಾಜಕೀಯಕ್ಕೆ ಮತ್ತೊಬ್ಬ ಬಲಿಪಶು ಈ ಹುಡುಗ.. 

2024ರಲ್ಲಿ ಭಾರತ 46 ರನ್ನಿಗೆ ಆಲೌಟಾದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್’ನಲ್ಲಿ ಅವನು 150 ರನ್ ಬಾರಿಸಿದ್ದ. ಭಾರತ ತಂಡಕ್ಕೆ ಆಯ್ಕೆಯಾಗಿದ್ದು pure meritನೊಂದಿಗೆ. ರಣಜಿ ಕ್ರಿಕೆಟ್’ನಲ್ಲಿ ಸಾವಿರಗಟ್ಟಲೆ ರನ್’ಗಳು, ಸಾಲು ಸಾಲು ಶತಕಗಳು.. ದೊಡ್ಡ ದೊಡ್ಡ ಇನ್ನಿಂಗ್ಸ್’ಗಳೇ ಅವನಿಗೆ ಟೆಸ್ಟ್ ಕ್ಯಾಪ್ ಸಿಗುವಂತೆ ಮಾಡಿದ್ದು. ಅಂಥಾ ಆಟಗಾರನಿಗೆ ಈಗ ಭಾರತ ಎ ತಂಡದಲ್ಲೇ ಸ್ಥಾನವಿಲ್ಲವೆಂದರೆ..? ನಂಬಲಸಾಧ್ಯ..  

ಉತ್ತರ ಪ್ರದೇಶ ಮೂಲದ ಮುಂಬೈ ಹುಡುಗ ಸರ್ಫರಾಜ್ ಖಾನ್’ಗೆ ಆಗಿರುವ ಅನ್ಯಾಯವನ್ನು ಮಾಜಿ ಕ್ರಿಕೆಟಿಗರು ಪ್ರಶ್ನಿಸುತ್ತಿದ್ದಾರೆ. ಇದನ್ನು “mystery’’ ಎಂದು ಕರೆದಿದ್ದಾರೆ ನೇರ ನುಡಿಗೆ ಹೆಸರಾಗಿರುವ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್. ಸರ್ಫರಾಜನಿಗೆ ಆಗಿರುವ ಅನ್ಯಾಯದ ಬಗ್ಗೆ ಸುನಿಲ್ ಗವಾಸ್ಕರ್ ಧ್ವನಿ ಎತ್ತಿದ್ದಾರೆ.

ಸರ್ಫರಾಜ್ ಖಾನ್’ಗೆ ಆಗಿರುವ ಅನ್ಯಾಯ, ಕೇವಲ ಅವನಿಗಷ್ಟೇ ಅನ್ಯಾಯವಲ್ಲ.. ರಣಜಿ ಟ್ರೋಫಿ, ದೇಶೀಯ ಕ್ರಿಕೆಟ್’ನ ಸಾಧನೆಗೆ ಮಾಡಿರುವ ಅಪಮಾನ. 

2022-23ರಿಂದ 2024-25ರ ರಣಜಿ ಟೂರ್ನಿಯಲ್ಲಿ 1600ಕ್ಕೂ ಹೆಚ್ಚು ರನ್. 

ರಣಜಿ ಟ್ರೋಫಿ 2019-20: 

6 ಪಂದ್ಯ, 928 ರನ್, 154.66 ಸರಾಸರಿ, 3 ಶತಕ

ರಣಜಿ ಟ್ರೋಫಿ 2021-22: 

6 ಪಂದ್ಯ, 982 ರನ್, 122.75 ಸರಾಸರಿ, 3 ಶತಕ

 

ರಣಜಿ ಟ್ರೋಫಿ 2022-23: 

6 ಪಂದ್ಯ, 556 ರನ್, 92.66 ಸರಾಸರಿ, 3 ಶತಕ

ರಣಜಿ ಟ್ರೋಫಿ 2023-24: 

3 ಪಂದ್ಯ, 200 ರನ್, ಸರಾಸರಿ 100

ಪ್ರಥಮದರ್ಜೆ ಕ್ರಿಕೆಟ್ ಸಾಧನೆ: 55 ಪಂದ್ಯ, 4,685 ರನ್, 65.98 ಸರಾಸರಿ, 16 ಶತಕ. 

ಇದೇ ವರ್ಷ ಇಂಗ್ಲೆಂಡ್’ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ 92 ರನ್ (ಭಾರತ ಎ ಪರ) ಬಾರಿಸಿದ್ದ ಸರ್ಫರಾಜ್ ಖಾನ್. 

ಆಟಕ್ಕಿಂತ ಅವನ ಫಿಟ್ನೆಸ್ ಬಗ್ಗೆ ಕೆಲವರಿಗೆ ತಕರಾರಿತ್ತು. 17 ಕೆ.ಜಿ ತೂಕ ಇಳಿಸಿಕೊಂಡ ಸರ್ಫರಾಜ್ ಖಾನ್ ಅದನ್ನೂ ಸರಿಪಡಿಸಿಕೊಂಡ. 

ಇಷ್ಟರ ಮಧ್ಯೆಯೂ ಭಾರತ ಎ ತಂಡಕ್ಕೂ ಅವನು ಬೇಡವಾಗಿದ್ದಾನೆ ಎಂದರೆ, ಇದರ ಹಿಂದೆ ಕ್ರಿಕೆಟ್ ಹೊರತಾದ ಕಾರಣವಿರಲೇಬೇಕು. ಆ ಕಾರಣ ಏನೆಂಬುದನ್ನು ಆಯ್ಕೆ ಮಾಡಬೇಕಾದ ಸ್ಥಾನದಲ್ಲಿರುವವರು ಅನಾವರಣ ಮಾಡಲೇಬೇಕು. ಇಲ್ಲವಾದಲ್ಲಿ ರಣಜಿ ಕ್ರಿಕೆಟ್ ಸಾಧನೆಗಳಿಗೆ ಬೆಲೆಯೇ ಇರುವುದಿಲ್ಲ. ದೇಶೀಯ ಕ್ರಿಕೆಟ್’ನಲ್ಲಿ ರನ್ ಹೊಡೆದರೆ ಭಾರತ ತಂಡದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆಯೂ ಸುಳ್ಳಾಗಬಹುದು. 

-ಸುದರ್ಶನ್

LEAVE A REPLY

Please enter your comment!
Please enter your name here

twelve − eight =

Latest news

Проститутки Москва Ашу: практический гид по доступу, приватности и премиум‑опыту

Проститутки Москва ашу: практический гид, который вы искали Что такое «Ашу» и...

ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ

ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ **ಮಂಗಳೂರು, ಜೂನ್ 29:** ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ...

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್.

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್. ಬ್ರಹ್ಮಾವರ ಸಂತೆಕಟ್ಟೆಯಲ್ಲಿ ವಿರಾಟ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಮಾನ್ಸೂನ್ ಟ್ರೋಫಿ -26 ಕ್ರಿಕೆಟ್ ಪಂದ್ಯಾಟವು ಶುಭಾರಂಭಗೊಂಡಿತು. ದುಬೈ ಟೆಕ್ನೋಟೈಟಾನ್ಸ್ ಕ್ರಿಕೆಟ್...

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ; ಅದು ಜನರ ಭಾವನೆ ಮತ್ತು ಗುರುತಿನ ಭಾಗವಾಗಿದೆ. ಆದರೆ ದೀರ್ಘಕಾಲದವರೆಗೆ ಬಿಹಾರ...
- Advertisement -spot_imgspot_img

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...

Must read

- Advertisement -spot_imgspot_img

You might also likeRELATED
Recommended to you