ಕ್ರಿಕೆಟ್ಭಾರತ ತಂಡದ ಕ್ರಿಕೆಟಿಗನೊಬ್ಬ ಸ್ಮಶಾನ ವಾಸಿಯ ಕಾಲಿಗೆರಗಿದ ಕ್ಷಣ..! 

ಭಾರತ ತಂಡದ ಕ್ರಿಕೆಟಿಗನೊಬ್ಬ ಸ್ಮಶಾನ ವಾಸಿಯ ಕಾಲಿಗೆರಗಿದ ಕ್ಷಣ..! 

-

- Advertisment -spot_img

ಭಾರತ ತಂಡದ ಕ್ರಿಕೆಟಿಗನೊಬ್ಬ ಸ್ಮಶಾನ ವಾಸಿಯ ಕಾಲಿಗೆರಗಿದ ಕ್ಷಣ..! 

ಅವನೆಂದರೆ ಕ್ರಿಕೆಟಿಗರು ಕೈಯೆತ್ತಿ ಮುಗಿಯುತ್ತಾರೆ, ಕಾಲಿಗೂ ನಮಸ್ಕರಿಸುತ್ತಾರೆ..! ಅವನು ದೇವರಲ್ಲ.. ಆಟವನ್ನೇ ದೇವರೆಂದುಕೊಂಡವನು… 

ನಂಬಿಕೆ ಇಟ್ಟದ್ದು ತನ್ನ ಕೆಲಸದ ಮೇಲೆ.. ಬದ್ಧತೆ ಕ್ರಿಕೆಟ್ ಮೇಲೆ.. ಪ್ರಾಮಾಣಿಕತೆ ಅವನ ಟ್ರೇಡ್ ಮಾರ್ಕ್.. ಕ್ರಿಕೆಟ್ ಅವನ ಲ್ಯಾಂಡ್ ಮಾರ್ಕ್. 

ಕ್ರಿಕೆಟಿಗರು ಬರುತ್ತಾರೆ, ಹೋಗುತ್ತಾರೆ. ಆದರೆ ಅವನಂತಹ ಮತ್ತೊಬ್ಬ ವ್ಯಕ್ತಿ ಭಾರತ ಕ್ರಿಕೆಟ್ ತಂಡಕ್ಕೆ ಯಾವತ್ತೂ ಸಿಗಲಾರ, ಯಾವತ್ತಿಗೂ.. 

ಜಗತ್ತೇ ಆರಾಧಿಸುವ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವನ ಬಗ್ಗೆ ಕೃತಜ್ಞತಾ ಭಾವದಿಂದ ಮಾತನಾಡುತ್ತಾನೆ. ಜಸ್ಪ್ರೀತ್ ಬುಮ್ರಾನಂತಹ ವಿಶ್ವಶ್ರೇಷ್ಠ ವೇಗಿ ಅವನ ಮುಂದೆ ನಡು ಬಗ್ಗಿಸಿ ಕೈ ಮುಗಿಯುತ್ತಾನೆ. ತಿಲಕ್ ವರ್ಮಾನಂತೂ ಎಲ್ಲರ ಮುಂದೆ ಅವನ ಕಾಲಿಗೆ ಎರಗಿಯೇ ಬಿಡುತ್ತಾನೆ. ಅದು ಅವನ ವ್ಯಕ್ತಿತ್ವಕ್ಕೆ, ಅವನ ಪ್ರಾಮಾಣಿಕತೆಗೆ, ಅವನ ಬದ್ಧತೆಗೆ ಭಾರತ ಕ್ರಿಕೆಟ್ ತಂಡದಲ್ಲಿ ಸಿಗುತ್ತಿರುವ ಗೌರವ. 

ಮಾಡುವ ಕೆಲಸದ ಮೇಲೆ ಶ್ರದ್ಧೆಯಿದ್ದರೆ, ಕಾಯಕವನ್ನೇ ದೇವರೆಂದುಕೊಂಡರೆ ನಿಮ್ಮನ್ನು ತಡೆಯಲು ಈ ಜಗತ್ತಿನಲ್ಲಿ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂಬುದಕ್ಕೆ ಅತ್ಯಂತ ದೊಡ್ಡ ಉದಾಹರಣೆ ಭಾರತ ಕ್ರಿಕೆಟ್ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿ. 

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಒಬ್ಬ ಸಾಮಾನ್ಯ ಶಾಲಾ ಶಿಕ್ಷಕನ ಮಗ.. ಕ್ರಿಕೆಟ್ ಹುಚ್ಚು ಹಿಡಿಸಿಕೊಂಡು ಕೇವಲ 21 ರೂಪಾಯಿಗಳೊಂದಿಗೆ ಮನೆ ಬಿಟ್ಟವನು ಬಂದು ಸೇರಿದ್ದು ಹುಬ್ಬಳ್ಳಿಗೆ. ಮಲಗಲು ಸೂರು ಸಿಗದಾಗ ಸೇರಿದ್ದು ಸ್ಮಶಾನ.. ಮಳೆ, ಗಾಳಿ, ಬಿಸಿಲು, ಚಳಿ.. ಎಷ್ಟೋ ದಿನಗಳನ್ನು ಹೊಟ್ಟೆಗೆ ಹಿಟ್ಟಿಲ್ಲದೆ ಕಳೆದದ್ದಿದೆ.. ಹೀಗೆ ಸ್ಮಶಾನದಲ್ಲೇ ಸಾಗಿದ್ದು ನಾಲ್ಕೂವರೆ ವರ್ಷ.

25 ವರ್ಷಗಳ ಹಿಂದೆ ಹುಬ್ಬಳ್ಳಿಯ ಸ್ಮಶಾನದಲ್ಲಿ ಮಲಗುತ್ತಿದ್ದ ರಾಘವೇಂದ್ರ ದಿವಗಿ ಭಾರತ ಕ್ರಿಕೆಟ್ ತಂಡದ ಹೃದಯ, ಉಸಿರಾಗಿ ಬೆಳೆದು ನಿಂತಿದ್ದಾನೆ ಎಂದರೆ, ಇದೇನು ಸಾಮಾನ್ಯ ಪ್ರಯಾಣವಲ್ಲ.. ಅವನ ಜೀವನವೇ ಒಂದು ಚರಿತ್ರೆ.. ಆ ಚರಿತ್ರೆಯ ಪ್ರತಿಯೊಂದು ಅಧ್ಯಾಯವೂ ಅದ್ಭುತ.. 

-ಸುದರ್ಶನ್ 

PC: BCCI

LEAVE A REPLY

Please enter your comment!
Please enter your name here

twenty − 16 =

Latest news

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಯುವ...

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!   2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್...

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ!

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತಿಹಾಸದಲ್ಲಿ ಕೆಲವು ಆಟಗಾರರು ಕೇವಲ ಕ್ರಿಕೆಟಿಗರಾಗಿ ಮಾತ್ರ ಉಳಿಯುವುದಿಲ್ಲ; ಅವರು ಭಾವನೆಗಳಾಗುತ್ತಾರೆ....

RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ… ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ?

  RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ... ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ? ಈ ಋತುವಿನ ಐಪಿಎಲ್‌ನ ಮೊದಲ ಅರ್ಹತಾ ಸುತ್ತಿನಲ್ಲಿ ಬೆಂಗಳೂರು ಮತ್ತು ಗುಜರಾತ್...
- Advertisement -spot_imgspot_img

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

Must read

- Advertisement -spot_imgspot_img

You might also likeRELATED
Recommended to you