
ತುಮಕೂರಿನಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್
ಡಾ. ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ, ತುಮಕೂರು ಹಾಗೂ ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್ ತುಮಕೂರು ಇವರ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ.
ಈ ಟೂರ್ನಮೆಂಟ್ ಡಾ. ಜಯರಾಮ್ ಅವರ ಸ್ಮರಣಾರ್ಥವಾಗಿ ಡಾ. ಪುನೀತ್ ಕುಮಾರ್ ಕಪ್ ರೂಪದಲ್ಲಿ ನಡೆಯಲಿದ್ದು, ಡಿಸೆಂಬರ್ 25 ರಿಂದ 28, 2025ರವರೆಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ, ತುಮಕೂರು ನಲ್ಲಿ ಜರುಗಲಿದೆ.


ಈ ಪಂದ್ಯಾವಳಿ ರಾಜ್ಯದ ವಿವಿಧ ಭಾಗಗಳಿಂದ ಯುವ ಕ್ರಿಕೆಟಿಗರನ್ನು ಒಂದೇ ವೇದಿಕೆಯಲ್ಲಿ ತರಲಿದ್ದು, ಪ್ರತಿಭಾವಂತರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಸುವರ್ಣಾವಕಾಶ ಒದಗಿಸುತ್ತದೆ.
ಪ್ರಥಮ ಬಹುಮಾನವಾಗಿ ₹5 ಲಕ್ಷ ನಗದು, ದ್ವಿತೀಯ ಬಹುಮಾನ ₹2.5 ಲಕ್ಷ, ಹಾಗೂ ಉತ್ತಮ ಬ್ಯಾಟ್ಸ್ಮನ್ ಮತ್ತು ಬೌಲರ್ ಪ್ರಶಸ್ತಿಗಳಿಗೆ ತಲಾ ₹50,000 ನಗದು ಬಹುಮಾನ ನೀಡಲಾಗುವುದು.
ಟೂರ್ನಮೆಂಟ್ನ ಪ್ರಮುಖ ಉದ್ದೇಶ — ಕ್ರೀಡಾ ಸ್ಪೂರ್ತಿ, ಶಿಸ್ತು ಹಾಗೂ ಸಹಕಾರದ ಮನೋಭಾವ ಬೆಳೆಸುವುದು. ಕಾರ್ಯಕ್ರಮದ ಆಯೋಜಕರು ತಿಳಿಸಿರುವಂತೆ, ಡಿಸೆಂಬರ್ 16ರೊಳಗೆ ತಂಡಗಳ ನೋಂದಣಿ ಪೂರ್ಣಗೊಳಿಸಬೇಕು.
ಈ ಕ್ರೀಡಾ ಉತ್ಸವಕ್ಕೆ ರಾಜ್ಯದ ಎಲ್ಲಾ ಕ್ರೀಡಾಭಿಮಾನಿಗಳು, ತಂಡಗಳು ಹಾಗೂ ಯುವಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘದವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು:
ಪ್ರಕಾಶ್ ಚಕ್ರವರ್ತಿ – 9845895324
ರವಿ – 9620995156
ಯಶ್ – 7349653896




