ಉಳ್ಳಾಲದಲ್ಲಿ ಯಶಸ್ವಿಯಾಗಿ ನಡೆದ ಎಸ್‌ಎಲ್‌ಎನ್‌ಸಿ ಟ್ರೋಫಿ–2025 ಕ್ರಿಕೆಟ್ ಟೂರ್ನಿ

ಉಳ್ಳಾಲದಲ್ಲಿ ಯಶಸ್ವಿಯಾಗಿ ನಡೆದ ಎಸ್‌ಎಲ್‌ಎನ್‌ಸಿ ಟ್ರೋಫಿ–2025 ಕ್ರಿಕೆಟ್ ಟೂರ್ನಿ

ಉಳ್ಳಾಲದಲ್ಲಿ ಯಶಸ್ವಿಯಾಗಿ ನಡೆದ ಎಸ್‌ಎಲ್‌ಎನ್‌ಸಿ ಟ್ರೋಫಿ–2025 ಕ್ರಿಕೆಟ್ ಟೂರ್ನಿ

ಉಳ್ಳಾಲದ ಶ್ರೀ ಲಕ್ಷ್ಮೀನರಸಿಂಹ ಸ್ಪೋರ್ಟ್ಸ್ ಕ್ಲಬ್ (SLNC) ವತಿಯಿಂದ ಎಸ್‌ಎಲ್‌ಎನ್‌ಸಿ ಟ್ರೋಫಿ–2025 ಹೆಸರಿನ ಕ್ರಿಕೆಟ್ ಟೂರ್ನಿಯನ್ನು ಡಿಸೆಂಬರ್ 21ರ ಭಾನುವಾರ ಭಾರತ್ ಶಾಲಾ ಮೈದಾನ, ಉಳ್ಳಾಲದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಮೊದಲ ಬಾರಿಗೆ ಆಯೋಜಿಸಲಾದ ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿಗಳಿಗೆ ರೋಚಕ ಪಂದ್ಯಾವಳಿಗಳನ್ನು ನೀಡಿದವು.

ಅಂತಿಮ ಪಂದ್ಯದಲ್ಲಿ ಟೀಮ್ ಜಿಎಸ್‌ಬಿ ಕುಂದಾಪುರ ತಂಡವು ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಫೈನಲ್‌ನಲ್ಲಿ ಉತ್ತಮ ಪೈಪೋಟಿ ನೀಡಿದ ಡೆಡ್ಲಿ ಪ್ಯಾಂಥರ್ಸ್ ತಂಡವು ಟೂರ್ನಿಯ ರನ್ನರ್ಸ್‌ಅಪ್ ಸ್ಥಾನವನ್ನು ಪಡೆದುಕೊಂಡಿತು. ಅರ್ಬನ್ ಕ್ರಿಕೆಟ್ ಕ್ಲಬ್ ತಂಡ 2 ನೇ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ಅಂತಿಮ ಪಂದ್ಯದಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಜಿಎಸ್‌ಬಿ ಕುಂದಾಪುರ ತಂಡದ ಅಶ್ವಿನ್ ಅವರಿಗೆ ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿ ಲಭಿಸಿತು. ಅವರು ಟೂರ್ನಿಯ ಅತ್ಯುತ್ತಮ ಬ್ಯಾಟರ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ತೆಂಕಪೇಟೆ ಫ್ರೆಂಡ್ಸ್ ತಂಡದ ವಿಜಯ ನಾಯಕ್ ಅವರಿಗೆ ಅತ್ಯುತ್ತಮ ಬೌಲರ್ ಪ್ರಶಸ್ತಿ ದೊರಕಿದರೆ, ಡೆಡ್ಲಿ ಪ್ಯಾಂಥರ್ಸ್ ತಂಡದ ದೀಪಕ್ ಬದಾಲ್ ಅವರು ‘ಮ್ಯಾನ್ ಆಫ್ ದ ಸೀರಿಸ್’ ಪ್ರಶಸ್ತಿಗೆ ಭಾಜನರಾದರು.

ಟೂರ್ನಿಯ ಅವಧಿಯಲ್ಲೆಲ್ಲಾ ಆಟಗಾರರು ಹಾಗೂ ಪ್ರೇಕ್ಷಕರಿಗೆ ಆಹಾರ ಮತ್ತು ಪಾನೀಯ ವ್ಯವಸ್ಥೆಯನ್ನು ಆಯೋಜಕರು ಸಮರ್ಪಕವಾಗಿ ಒದಗಿಸಿದ್ದರು. ಮೊದಲ ಬಾರಿಗೆ ಆಯೋಜಿಸಿದ್ದರೂ ಶಿಸ್ತಿನಿಂದ ಹಾಗೂ ಅತ್ಯಂತ ವ್ಯವಸ್ಥಿತವಾಗಿ ನಡೆಸಿದ ಈ ಟೂರ್ನಿ ಸಂಪೂರ್ಣ ಯಶಸ್ಸಿನಿಂದ ಮುಕ್ತಾಯಗೊಂಡಿತು.

ಕ್ರೀಡಾಭಿಮಾನಿಗಳು ಹಾಗೂ ಭಾಗವಹಿಸಿದ ಎಲ್ಲಾ ತಂಡಗಳು ಶ್ರೀ ಲಕ್ಷ್ಮೀನರಸಿಂಹ ಸ್ಪೋರ್ಟ್ಸ್ ಕ್ಲಬ್‌ನ ಆಯೋಜಕರ ಕಾರ್ಯಕ್ಷಮತೆಯನ್ನು ಮೆಚ್ಚಿ ಅಭಿನಂದನೆಗಳನ್ನು ಸಲ್ಲಿಸಿದರು. ಉಳ್ಳಾಲ ಪ್ರದೇಶದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೊಸ ಉತ್ತೇಜನ ನೀಡಿದ ಈ ಟೂರ್ನಿ ಭವಿಷ್ಯದಲ್ಲೂ ಇಂತಹ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

 

Leave a Reply

Your email address will not be published. Required fields are marked *