8.7 C
London
Tuesday, April 16, 2024
Homeಕ್ರಿಕೆಟ್ಸಿಲ್ವರ್ ಕಪ್ 2022-ನಮ್ಮ ಕುಡ್ಲ ರನ್ನರ್ಸ್

ಸಿಲ್ವರ್ ಕಪ್ 2022-ನಮ್ಮ ಕುಡ್ಲ ರನ್ನರ್ಸ್

Date:

Related stories

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...

RCB ಯನ್ನು ಸುಟ್ಟು ಹಾಕಿದ ಮಯಾಂಕ್ ಯಾದವ್ ಅವರ ವೇಗ

RCB ವಿರುದ್ಧ 3/14 ರ ಅದ್ಭುತ ಬೌಲಿಂಗ್ ಅಂಕಿಅಂಶಗಳಿಗಾಗಿ  ಮಯಾಂಕ್ ಯಾದವ್...
spot_imgspot_img
*ಸ್ಪೋರ್ಟ್ಸ್ ಕನ್ನಡ ವರದಿ*
ಬಹ್ರೇನ್-ಬುಸೈಟಿನ ಮೈದಾನದಲ್ಲಿ ನಡೆದ ಸಿಲ್ವರ್ ಕಪ್-2022 ಟಿ-10 ಕ್ರಿಕೆಟ್ ಪಂದ್ಯಾಟದಲ್ಲಿ ನಮ್ಮ ಕುಡ್ಲ ತಂಡ ದ್ವಿತೀಯ ಪ್ರಶಸ್ತಿ ಜಯಿಸಿದೆ.
*ಸವಾಲಿನ ಗುರಿ ನೀಡಿದ ಬಹ್ರೇನ್ ಫಾಲ್ಕನ್ಸ್*
ಲೀಗ್ ಹಂತದ ಹೋರಾಟದ ಬಳಿಕ ಫೈನಲ್ ಅತ್ಯಂತ ರೋಚಕ ಅಂತ್ಯ ಕಂಡಿತ್ತು.ಮೊದಲು ಬ್ಯಾಟಿಂಗ್ ನಡೆಸಿದ ಬಹ್ರೇನ್ ಫಾಲ್ಕನ್ಸ್ ಮೊದಲ 7 ಓವರ್ ಗಳಲ್ಲಿ 51 ರನ್ ಗಳಿಸಿತ್ತು‌.ಅಂತಿಮ ಹಂತದಲ್ಲಿ ಸಿಡಿದ ಬಹ್ರೇನ್ ಫಾಲ್ಕನ್ಸ್ ನ ದಾಂಡಿಗರು ಕೊನೆಯ 3 ಓವರ್ ಗಳಲ್ಲಿ 54 ರನ್ ಕಲೆಹಾಕಿ ಎದುರಾಳಿ ತಂಡಕ್ಕೆ 10 ಓವರ್ ಗಳಲ್ಲಿ 105 ರನ್ ಅಸಾಧ್ಯದ ಗುರಿಯನ್ನು ನೀಡಿದರು.
*ಲಿಸ್ಟನ್ ವೀರೋಚಿತ ಹೋರಾಟ ವ್ಯರ್ಥ*
ಗುರಿಯನ್ನು ಬೆಂಬತ್ತುವ ಭರದಲ್ಲಿ ನಮ್ಮ ಕುಡ್ಲ ತಂಡ ಕೇವಲ 20 ರನ್ ಗಳಿಸುವಷ್ಟರಲ್ಲಿ ಲಘುಬಗನೆ 6 ವಿಕೆಟ್ ಕಳೆದುಕೊಂಡಿತ್ತು.ಆದರೆ ಧೃತಿಗೆಡದ ನಮ್ಮ ಕುಡ್ಲದ ಲಿಸ್ಟನ್ ಸ್ಪೋಟಕ ಹೊಡೆತಗಳ ಮೂಲಕ ಗುರಿಯನ್ನು ತಲುಪಿಸುವ ಕೊನೆಯ ಹಂತದಲ್ಲಿ 4 ಎಸೆತಗಳಲ್ಲಿ 12 ರನ್ ಅವಶ್ಯಕತೆಯ ಸಂದರ್ಭದಲ್ಲಿ ಎದುರಾಳಿಗೆ ವಿಕೆಟ್ ಒಪ್ಪಿಸಿದರು.ಲಿಸ್ಟನ್ ವಿಕೆಟ್ ಪತನದ ಬಳಿಕ ನಮ್ಮ ಕುಡ್ಲ ತಂಡಕ್ಕೆ ಗೆಲುವು ಮರೀಚಿಕೆಯಾಗಿ ಉಳಿಯಿತು.10 ರನ್ ಅಂತರದಲ್ಲಿ ಸೋಲೊಪ್ಪಿಕೊಂಡ ನಮ್ಮ ಕುಡ್ಲ ಸಿಲ್ವರ್ ಕಪ್ ನ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

2 × three =