Categories
ಕ್ರಿಕೆಟ್

ಸಿಲ್ವರ್ ಕಪ್ 2022-ನಮ್ಮ ಕುಡ್ಲ ರನ್ನರ್ಸ್

*ಸ್ಪೋರ್ಟ್ಸ್ ಕನ್ನಡ ವರದಿ*
ಬಹ್ರೇನ್-ಬುಸೈಟಿನ ಮೈದಾನದಲ್ಲಿ ನಡೆದ ಸಿಲ್ವರ್ ಕಪ್-2022 ಟಿ-10 ಕ್ರಿಕೆಟ್ ಪಂದ್ಯಾಟದಲ್ಲಿ ನಮ್ಮ ಕುಡ್ಲ ತಂಡ ದ್ವಿತೀಯ ಪ್ರಶಸ್ತಿ ಜಯಿಸಿದೆ.
*ಸವಾಲಿನ ಗುರಿ ನೀಡಿದ ಬಹ್ರೇನ್ ಫಾಲ್ಕನ್ಸ್*
ಲೀಗ್ ಹಂತದ ಹೋರಾಟದ ಬಳಿಕ ಫೈನಲ್ ಅತ್ಯಂತ ರೋಚಕ ಅಂತ್ಯ ಕಂಡಿತ್ತು.ಮೊದಲು ಬ್ಯಾಟಿಂಗ್ ನಡೆಸಿದ ಬಹ್ರೇನ್ ಫಾಲ್ಕನ್ಸ್ ಮೊದಲ 7 ಓವರ್ ಗಳಲ್ಲಿ 51 ರನ್ ಗಳಿಸಿತ್ತು‌.ಅಂತಿಮ ಹಂತದಲ್ಲಿ ಸಿಡಿದ ಬಹ್ರೇನ್ ಫಾಲ್ಕನ್ಸ್ ನ ದಾಂಡಿಗರು ಕೊನೆಯ 3 ಓವರ್ ಗಳಲ್ಲಿ 54 ರನ್ ಕಲೆಹಾಕಿ ಎದುರಾಳಿ ತಂಡಕ್ಕೆ 10 ಓವರ್ ಗಳಲ್ಲಿ 105 ರನ್ ಅಸಾಧ್ಯದ ಗುರಿಯನ್ನು ನೀಡಿದರು.
*ಲಿಸ್ಟನ್ ವೀರೋಚಿತ ಹೋರಾಟ ವ್ಯರ್ಥ*
ಗುರಿಯನ್ನು ಬೆಂಬತ್ತುವ ಭರದಲ್ಲಿ ನಮ್ಮ ಕುಡ್ಲ ತಂಡ ಕೇವಲ 20 ರನ್ ಗಳಿಸುವಷ್ಟರಲ್ಲಿ ಲಘುಬಗನೆ 6 ವಿಕೆಟ್ ಕಳೆದುಕೊಂಡಿತ್ತು.ಆದರೆ ಧೃತಿಗೆಡದ ನಮ್ಮ ಕುಡ್ಲದ ಲಿಸ್ಟನ್ ಸ್ಪೋಟಕ ಹೊಡೆತಗಳ ಮೂಲಕ ಗುರಿಯನ್ನು ತಲುಪಿಸುವ ಕೊನೆಯ ಹಂತದಲ್ಲಿ 4 ಎಸೆತಗಳಲ್ಲಿ 12 ರನ್ ಅವಶ್ಯಕತೆಯ ಸಂದರ್ಭದಲ್ಲಿ ಎದುರಾಳಿಗೆ ವಿಕೆಟ್ ಒಪ್ಪಿಸಿದರು.ಲಿಸ್ಟನ್ ವಿಕೆಟ್ ಪತನದ ಬಳಿಕ ನಮ್ಮ ಕುಡ್ಲ ತಂಡಕ್ಕೆ ಗೆಲುವು ಮರೀಚಿಕೆಯಾಗಿ ಉಳಿಯಿತು.10 ರನ್ ಅಂತರದಲ್ಲಿ ಸೋಲೊಪ್ಪಿಕೊಂಡ ನಮ್ಮ ಕುಡ್ಲ ಸಿಲ್ವರ್ ಕಪ್ ನ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

5 × four =