
ಕ್ರೀಡಾ ಕ್ಷೇತ್ರಕ್ಕೆ ಶಿವನಾರಾಯಣ ಐತಾಳ್ ಕೋಟ ಕೊಡುಗೆ ಅಪಾರ-ಡಾ.ಕೃಷ್ಣಪ್ರಸಾದ್.ಕೆ
ಶಿವ ಬಿಗ್ ಬ್ಯಾಶ್ ಲೀಗ್ ಗೆ ಅದ್ಧೂರಿಯ ಚಾಲನೆ
ಕೋಟ-ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಕೋಟ ಸಾಲಿಗ್ರಾಮ ಇವರ ಆಶ್ರಯದಲ್ಲಿ,ಶಿವನಾರಾಯಣ ಐತಾಳ್ ಕೋಟ ಇವರ ಕ್ರಿಕೆಟ್ ವೀಕ್ಷಕ ವಿವರಣೆಯಲ್ಲಿ ಸಾರ್ಥಕ 35 ವರ್ಷಗಳ ಸವಿನೆನಪಿಗಾಗಿ ಆಯೋಜಿಸಲಾದ ಶಿವ ಬಿಗ್ ಬ್ಯಾಶ್-2025 ಕ್ರಿಕೆಟ್ ಪಂದ್ಯಾಟಕ್ಕೆ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಕೃಷ್ಣಪ್ರಸಾದ್ ಕೆ.ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಡಾ.ಕೃಷ್ಣಪ್ರಸಾದ್ ರವರು “ಕ್ರಿಕೆಟ್ ಕ್ಷೇತ್ರಕ್ಕೆ ಶಿವನಾರಾಯಣ ಐತಾಳ್ ಕೊಡುಗೆ ಅಪಾರ.ಹಲವಾರು ವರ್ಷಗಳಿಂದ ವೀಕ್ಷಕ ವಿವರಣೆ ಮತ್ತು ತೀರ್ಪುಗಾರರಾಗಿ ತಮ್ಮನ್ಮು ತೊಡಗಿಸಿಕೊಂಡಿದ್ದು,ತಮ್ಮದೇ ಆದ ಗುಣಮಟ್ಟವನ್ನು ಕಾಯ್ದಕೊಂಡಿದ್ದಾರೆ ಎಂದರು.


ಈ ಸಂದರ್ಭ ವೇದಿಕೆಯಲ್ಲಿ ಸ್ಪೋರ್ಟ್ಸ್ ಕನ್ನಡ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್,ಕೆ.ಎಸ್.ಸಿ.ಎ ಅಂಗೀಕೃತ ಅಂಪಾಯರ್ ಇಬ್ರಾಹಿಂ ಆತ್ರಾಡಿ, ಶಿವನಾರಾಯಣ ಐತಾಳ್ ಕೋಟ,ಅರವಿಂದ್ ಮಣಿಪಾಲ ಇನ್ನಿತರರು ಉಪಸ್ಥಿತರಿದ್ದರು.

ಫಜಲ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿದರು.

ಸಾಲಿಗ್ರಾಮ ಹಳೆಕೋಟೆಯಲ್ಲಿ ನಡೆಯುತ್ತಿರುವ ಈ ಪಂದ್ಯಾಟದಲ್ಲಿ ಪೊಲೀಸ್ ಇಲೆವೆನ್,ಎಮ್.ಆರ್.ಅಟ್ಯಾಕರ್ಸ್,ಟೀಮ್ ಸಾರಥಿ ಮಲ್ಪೆ,ಮೆಸ್ಕೋಂ ಕರಾವಳಿ ಟೈಗರ್ಸ್,ಜನತಾ ಫಿಶ್ ನೆಟ್ ಕೋಟ,ಜಿಲ್ಲಾ ಆರೋಗ್ಯ ಇಲಾಖೆ,ಆಭರಣ ಚಾಲೆಂಜರ್ಸ್ ಉಡುಪಿ,ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ,ರೋಬೋಸಾಫ್ಟ್(ಐ.ಟಿ ದಿಗ್ಗಜರು),ಪಿಪಿಎಲ್(ಎಮ್.ಸಿಎಫ್)ತಂಡಗಳು ಭಾಗವಹಿಸುತ್ತಿದೆ.


ಎರಡು ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಪಂದ್ಯಾಟದ ನೇರ ಪ್ರಸಾರ ಸ್ಪೋರ್ಟ್ಸ್ ಕನ್ನಡ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.




