ಟೆನಿಸ್ಬಾಲ್ ಕ್ರಿಕೆಟ್ ನ ಜಗಜಟ್ಟಿಗಳ ಕಾಳಗ- ಬೆಣ್ಣೆ ನಗರಿಯಲ್ಲಿ ನಡೆಯಲಿದೆಯೇ ಲಂಕಾ ದಹನ?

ಟೆನಿಸ್ಬಾಲ್ ಕ್ರಿಕೆಟ್ ನ ಜಗಜಟ್ಟಿಗಳ ಕಾಳಗ- ಬೆಣ್ಣೆ ನಗರಿಯಲ್ಲಿ ನಡೆಯಲಿದೆಯೇ ಲಂಕಾ ದಹನ?

ಟೆನಿಸ್ಬಾಲ್ ಕ್ರಿಕೆಟ್ ನ ಜಗಜಟ್ಟಿಗಳ ಕಾಳಗ- ಬೆಣ್ಣೆ ನಗರಿಯಲ್ಲಿ ನಡೆಯಲಿದೆಯೇ ಲಂಕಾ ದಹನ?

ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಗೆ ಬೆಣ್ಣೆನಗರಿ ಸಜ್ಜಾಗುತ್ತಿದೆ.‌ಇದೇ ಬರುವ ನವೆಂಬರ್ 26 ದಾವಣಗೆರೆಯಲ್ಲಿ ಕ್ರಿಕೆಟ್ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಕ್ರಿಕೆಟ್ ಪ್ರಿಯರ ಬಹು ನಿರೀಕ್ಷೆಯ ಶಾಮನೂರು ಡೈಮಂಡ್ ಮತ್ತು ಶಿವಗಂಗಾ ಕಪ್ 17 ನೇ ಬಾರಿ ದಿವಂಗತ ಪಾರ್ವತಿ ಶಿವಶಂಕರಪ್ಪ ಇವರ ಸ್ಮರಣಾರ್ಥ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಣ್ಣು ಕೋರೈಸುವ ಹೊನಲು ಬೆಳಕಿನಲ್ಲಿ ನಡೆಯಲಿದೆ.

ಪ್ರತೀ ವರ್ಷ ದಾವಣಗೆರೆ ಕ್ರಿಕೆಟ್ ಪಂದ್ಯವನ್ನಾಡಲು ಕನಸು ಕಾಣುವ ಆಟಗಾರರ ಪಡೆ ಬಹಳಷ್ಟು ದೊಡ್ಡದಿದೆ. ಈ ಬಾರಿಯೂ ಕೂಡ ಮುಂಬಯಿ,ಮಧ್ಯಪ್ರದೇಶ,ಕೇರಳ,ಚೆನ್ನೈ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 50 ತಂಡಗಳು ಕತ್ತು ಕತ್ತಿನ ಹೋರಾಟ ನಡೆಯಲಿದ್ದು ಕ್ರೀಡಾ ಪ್ರೇಕ್ಷಕರ ಕಣ್ಣು ದಾವಣಗೆರೆಯತ್ತ ನೆಟ್ಟಿದೆ.

ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾ ತಂಡ ಬಂದಿಳಿಯಲಿದ್ದು, ನವೆಂಬರ್ 30 ಸಂಜೆ 7 ಗಂಟೆಗೆ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಲಿದೆ. ಮೊನಚಾದ ಬೌಲಿಂಗ್,ಅಬ್ಬರದ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಶ್ರೀಲಂಕಾ,ಬಹುತೇಕ ಕರ್ನಾಟಕದ ಆಟಗಾರರಿಂದ ಕೂಡಿದ ಭಾರತ ತಂಡವನ್ನು ಮಣಿಸುವುದೇ ಅಥವಾ ಬೆಣ್ಣೆಗೆರೆ ದಾವಣಗೆರೆಯಲ್ಲಿ ಲಂಕಾ ದಹನ ನಡೆಯುವುದೇ ಕಾದು ನೋಡೋಣ.

ದಾವಣಗೆರೆ ಕ್ರಿಕೆಟ್ ಹಬ್ಬದ ಕ್ಷಣ ಕ್ಷಣದ ಮಾಹಿತಿಗಾಗಿ ಸ್ಪೋರ್ಟ್ಸ್ ಕನ್ನಡ ಚಾನೆಲ್ ವೀಕ್ಷಿಸಿ.

Leave a Reply

Your email address will not be published. Required fields are marked *