
ಎಸ್.ಎಸ್.ಇ.ಟಿ ಅಂಡರ್-14 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಸೆಪ್ಟೆಂಬರ್ 29ರಿಂದ

ಪಾಂಡವಪುರ ತಾಲೂಕು ಜಯಂತಿನಗರದ ಶ್ರೀ ಶಂಭುಲಿಂಗೇಶ್ವರ ಕ್ರೀಡಾ ಅಕಾಡೆಮಿ ವತಿಯಿಂದ ಎಸ್.ಎಸ್.ಇ.ಟಿ ಅಂಡರ್-14 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 3ರವರೆಗೆ ನಡೆಯಲಿದೆ.
ಈ ಟೂರ್ನಮೆಂಟ್ನ್ನು ಟೀ-20 ಫಾರ್ಮ್ಯಾಟ್ನಲ್ಲಿ ಆಯೋಜಿಸಲಾಗಿದ್ದು, ಪ್ರತೀ ತಂಡಕ್ಕೆ ಮೂರು ಲೀಗ್ ಪಂದ್ಯಗಳ ಅವಕಾಶ ದೊರೆಯಲಿದೆ. ಪಂದ್ಯಗಳು ಮ್ಯಾಟಿಂಗ್ ವಿಕೆಟ್ನಲ್ಲಿ ನಡೆಯಲಿವೆ.

ಪ್ರವೇಶ ಶುಲ್ಕ: ₹9000/-
ಪಂದ್ಯದಲ್ಲಿ ಪಾಲ್ಗೊಳ್ಳಲು 01-09-2011 ಅಥವಾ ಅದರ ನಂತರ ಜನಿಸಿದ ಆಟಗಾರರಿಗೆ ಮಾತ್ರ ಅವಕಾಶವಿದೆ. ಪ್ರತಿ ಗುಂಪಿನ ಮೊದಲ 2 ತಂಡಗಳು ಸೆಮಿಫೈನಲ್ಗೆ ಅರ್ಹರಾಗುತ್ತವೆ. ಎಲ್ಲಾ ಆಟಗಾರರು ಶ್ವೇತ ಬಣ್ಣದ ಡ್ರೆಸ್ ಕೋಡ್ ಪಾಲಿಸಬೇಕಾಗಿದೆ.
ದಿನಚರಿ:
1ನೇ ಪಂದ್ಯ: ಬೆಳಿಗ್ಗೆ 7:30
2ನೇ ಪಂದ್ಯ: ಬೆಳಿಗ್ಗೆ 10:30
3ನೇ ಪಂದ್ಯ: ಮಧ್ಯಾಹ್ನ 1:30
ಪಂದ್ಯಗಳ ದಿನ ಆಟಗಾರರು ಕನಿಷ್ಠ 15 ನಿಮಿಷ ಮೊದಲು ಮೈದಾನದಲ್ಲಿ ಹಾಜರಾಗಬೇಕು. ಎಲ್ಲ ಆಟಗಾರರಿಗೆ ಮಧ್ಯಾಹ್ನ ಊಟವನ್ನು ವ್ಯವಸ್ಥೆ ಮಾಡಲಾಗುತ್ತದೆ. ಆಧಾರ್ ಕಾರ್ಡ್ ತಂದುಕೊಂಡು ಬರುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಟೂರ್ನಮೆಂಟ್ಗೆ ವಿಶೇಷ ಪ್ರಾಯೋಜಕ ಹಾಗೂ ಅತಿಥಿಯಾಗಿ ಆರಾವು ಸಂತೋಷ್ ಅವರು ಆಗಮಿಸಲಿದ್ದಾರೆ.




