
ನಿಡ್ಡೋಡಿ ಎನ್ಪಿಎಲ್ ಕ್ರಿಕೆಟ್ ಹಬ್ಬಕ್ಕೆ ಅದ್ದೂರಿ ತೆರೆ
ನಿಡ್ಡೋಡಿಯ *ಶ್ರೀ ಬಾಪೂಜಿ ಕಲ್ಚರಲ್ ಅಂಡ್ ಗೇಮ್ಸ್ ಕ್ಲಬ್ (ರಿ) ಶುಂಠಿಲಪದವು* ವತಿಯಿಂದ ಆಯೋಜಿಸಲಾದ 8ನೇ ಆವೃತ್ತಿಯ ಎನ್ಪಿಎಲ್ (NPL) ಕ್ರಿಕೆಟ್ ಟೂರ್ನಮೆಂಟ್ ಎರಡು ದಿನಗಳ ಕಾಲ ಭರ್ಜರಿಯಾಗಿ ನಡೆಯಿತು. ಶನಿವಾರ ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭದೊಂದಿಗೆ ಟೂರ್ನಮೆಂಟ್ಗೆ ಚಾಲನೆ ನೀಡಲಾಗಿದ್ದು, ಎಲ್ಲಾ 6 ತಂಡಗಳು ಉತ್ಸಾಹದಿಂದ ಭಾಗವಹಿಸಿ ಕ್ರೀಡಾಸ್ಪೂರ್ತಿಯನ್ನು ಮೆರೆದವು.

ಫೈನಲ್ ಪಂದ್ಯದಲ್ಲಿ ನಮೋ ವಾರಿಯರ್ಸ್ ತಂಡವು ಎನ್ವೈಬಿ ಪ್ಯಾಂಥರ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ವಿಜೇತ ತಂಡಕ್ಕೆ ₹50,000 ನಗದು ಬಹುಮಾನ ಹಾಗೂ ಟ್ರೋಫಿ ಪ್ರದಾನ ಮಾಡಲಾಯಿತು. ರನ್ನರ್-ಅಪ್ ಆಗಿದ್ದ ಎನ್ವೈಬಿ ಪ್ಯಾಂಥರ್ಸ್ ತಂಡಕ್ಕೆ ₹30,000 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು.


ಕ್ವಾಲಿಫೈಯರ್-2 ಪಂದ್ಯದಲ್ಲಿ ಈಗಲ್ ಇಡ್ಡಬೆಟ್ಟು ತಂಡ ಸೋಲು ಕಂಡಿತು.
ಈ ಕಾರ್ಯಕ್ರಮದಲ್ಲಿ ಈಶ್ವರ ಕಟೀಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ವಿಜೇತರು, ರನ್ನರ್-ಅಪ್ ತಂಡ ಹಾಗೂ ವೈಯಕ್ತಿಕ ಬಹುಮಾನ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಶ್ರೀ ಬಾಪೂಜಿ ಕಲ್ಚರಲ್ & ಗೇಮ್ಸ್ ಕ್ಲಬ್ (ರಿ)ನ ಗೌರವ ಅಧ್ಯಕ್ಷರು /ಅಧ್ಯಕ್ಷರು /ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಶಾ ಐಕಳ ಅವರು ಸುಗಮವಾಗಿ ನಡೆಸಿಕೊಟ್ಟರು. ದುರ್ಗಾ ಪ್ರಸಾದ್, ಉದಯ ಪ್ರಸನ್ನ ಮತ್ತು ಮಧು ಕಿಶೋರ್ ಅಂಪೈರ್ಗಳಾಗಿ ಕಾರ್ಯನಿರ್ವಹಿಸಿದರೆ, ಹರೀಶ್ ಐಕಳ ಸ್ಕೋರರ್ ಆಗಿ ಸೇವೆ ಸಲ್ಲಿಸಿದರು.

ಕಾಮೆಂಟ್ರಿ ವಿಭಾಗದಲ್ಲಿ ಅಜಯ್ ರಾಜ್ ಮಂಗಳೂರು, ಶ್ರೀಷಾ ಐಕಳ ಮತ್ತು ಸುರೇಶ್ ಭಟ್ ಮುಲ್ಕಿ ಉಪಸ್ಥಿತರಿದ್ದು ಪಂದ್ಯಗಳಿಗೆ ಉತ್ಸಾಹ ತುಂಬಿದರು. ಪ್ರೈಮ್ ಟಿವಿ ಈ ಟೂರ್ನಮೆಂಟ್ನ ನೇರ ಪ್ರಸಾರವನ್ನು ನಡೆಸಿತು.

ಒಟ್ಟಾರೆ, ಈ ಎನ್ಪಿಎಲ್ ಟೂರ್ನಮೆಂಟ್ ನಿಡ್ಡೋಡಿ ಭಾಗದ ಕ್ರೀಡಾಭಿಮಾನಿಗಳಿಗೆ ನಿಜವಾದ ಕ್ರಿಕೆಟ್ ಹಬ್ಬದ ಅನುಭವವನ್ನು ನೀಡಿದ್ದು, ಸ್ಥಳೀಯರ ಒಗ್ಗಟ್ಟು ಮತ್ತು ಕ್ರೀಡಾ ಪ್ರೀತಿ ಮೆರೆದ ಅದ್ದೂರಿ ಕಾರ್ಯಕ್ರಮವಾಗಿ ಮೂಡಿಬಂದಿತು.




