
ಸೈಮಂಡ್ಸ್ ಕಡಿಯಾಳಿ ತಂಡಕ್ಕೆ ಮಾರ್ನಿಂಗ್ ಸ್ಟಾರ್ ಟ್ರೋಫಿ
ಮಾರ್ನಿಂಗ್ ಸ್ಟಾರ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ಮುಕ್ತಾಯ
ಕಳೆದ ವಾರ ಅಲೆವೂರು ನೆಹರು ಮೈದಾನದಲ್ಲಿ ನಡೆದ ಮಾರ್ನಿಂಗ್ ಸ್ಟಾರ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ಮುಕ್ತಾಯವಾಯಿತು. ಅಂತಿಮ ಪಂದ್ಯದಲ್ಲಿ ಸೈಮಂಡ್ಸ್ ಕಡಿಯಾಳಿ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಕಟ್ಟೆ ಗಣಪತಿ ಅಲೂರು ತಂಡ ರನ್ನರ್ಸ್ಅಪ್ ಸ್ಥಾನ ಪಡೆದುಕೊಂಡಿತು.

ಟೂರ್ನಮೆಂಟ್ನಲ್ಲಿ ಉತ್ತಮ ಆಟ ಪ್ರದರ್ಶಿಸಿದ ಪೆರ್ಡೂರ್ ನ ಪ್ರಸನ್ನ ಆಚಾರ್ಯ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಲಭಿಸಿತು. ಕಲ್ಮಾಡಿಯ ರಾಕೇಶ್ ಅವರಿಗೆ ಉತ್ತಮ ಬೌಲರ್ ಪ್ರಶಸ್ತಿ ದೊರೆತರೆ, ಪ್ರಸಿದ್ಧ ಆಚಾರ್ಯ ಅವರು ಉತ್ತಮ ಬ್ಯಾಟ್ಸ್ಮನ್ ಗೌರವಕ್ಕೆ ಪಾತ್ರರಾದರು. ಸಂಪೂರ್ಣ ಸರಣಿಯಲ್ಲಿ ಸತತ ಉತ್ತಮ ಪ್ರದರ್ಶನ ನೀಡಿದ ಕೋಟಾದ ಅಬಿ ಅವರಿಗೆ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ ಪ್ರದಾನಿಸಲಾಯಿತು.

ವಿಜೇತ ತಂಡ ಸೈಮಂಡ್ಸ್ ಕಡಿಯಾಳಿ ಅವರಿಗೆ ರೂ.30,000 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗಿದ್ದು, ರನ್ನರ್ಸ್ಅಪ್ ಕಟ್ಟೆ ಗಣಪತಿ ಅಲೂರು ತಂಡಕ್ಕೆ ರೂ.15,000 ನಗದು ಬಹುಮಾನ ನೀಡಲಾಯಿತು.

ಕಳೆದ ಭಾನುವಾರ ನಡೆದ ಟೂರ್ನಮೆಂಟ್ ಕ್ರೀಡಾಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದಿದ್ದು, ಸ್ಥಳೀಯ ಯುವಕರ ಪ್ರತಿಭೆಗೆ ವೇದಿಕೆಯಾಗುವಲ್ಲಿ ಈ ಟೂರ್ನಮೆಂಟ್ ಮಹತ್ವದ ಪಾತ್ರ ವಹಿಸಿದೆ.




