
ಮಯಾಂಕ್ 600, ಕರುಣ್ 500.. ವಿಜಯ್ ಹಜಾರೆ ಟ್ರೋಫಿಯಲ್ಲಿ ಕನ್ನಡಿಗರದ್ದೇ ಹವಾ!
ಒಬ್ಬ ಕರ್ನಾಟಕ ತಂಡದ ನಾಯಕ, ಮತ್ತೊಬ್ಬ ವಿದರ್ಭ ತಂಡದ ಸಾರಥಿ.. ಇಬ್ಬರೂ ಆತ್ಮೀಯ ಸ್ನೇಹಿತರು.. ಕ್ರಿಕೆಟ್ ಆರಂಭಿಸಿದ್ದು, ಆಡಿದ್ದು ಎಲ್ಲವೂ ಒಟ್ಟೊಟ್ಟಿಗೇ. ಇದೀಗ ಇಬ್ಬರ ಮಧ್ಯೆ ಭಾರೀ ಸ್ಪರ್ಧೆ. ಯೆಸ್.. ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಸ್ಪರ್ಧೆಗೆ ಬಿದ್ದವರಂತೆ ಶತಕಗಳ ಮೇಲೆ ಶತಕಗಳನ್ನು ಬಾರಿಸುತ್ತಿದ್ದಾರೆ.
ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ 7 ಪಂದ್ಯಗಳಿಂದ 4 ಶತಕಗಳನ್ನು ಬಾರಿಸಿದ್ರೆ, ವಿದರ್ಭ ತಂಡದ ಸಾರಥ್ಯ ವಹಿಸಿರುವ ಕರುಣ್ ನಾಯರ್ 6 ಪಂದ್ಯಗಳಿಂದ 4 ಶತಕ ಸಿಡಿಸಿದ್ದಾರೆ.


ಮಯಾಂಕ್ 7 ಪಂದ್ಯಗಳಿಂದ 4 ಶತಕಗಳು ಮತ್ತು ಒಂದು ಅರ್ಧಶತಕ ಸಹಿತ ಟೂರ್ನಿಯಲ್ಲಿ ಒಟ್ಟು 613 ರನ್ ಗಳಿಸಿದ್ರೆ, ಕರುಣ್ ನಾಯರ್ 5 ಇನ್ನಿಂಗ್ಸ್’ಗಳಿಂದ 4 ಶತಕಗಳ ಸಹಿತ 542 ರನ್ ಕಲೆ ಹಾಕಿದ್ದಾರೆ.

ಉತ್ತರಾಖಂಡ್ ಪರ ಆಡುತ್ತಿರುವ ಕರ್ನಾಟಕದ ಮತ್ತೊಬ್ಬ ಆಟಗಾರ ಆರ್. ಸಮರ್ಥ್ 7 ಪಂದ್ಯಗಳಿಂದ 2 ಶತಕ ಹಾಗೂ ಒಂದು ಅರ್ಧಶತಕ ಸಹಿತ 385 ರನ್ ಗಳಿಸಿದ್ದಾರೆ.





