ಕ್ರಿಕೆಟ್ಅವನು ಲಕ್ಷ್ಮಣನಲ್ಲ.. ಭಾರತೀಯ ಕ್ರಿಕೆಟ್’ನ ಅಭಿನವ ಶ್ರೀರಾಮ..! 

ಅವನು ಲಕ್ಷ್ಮಣನಲ್ಲ.. ಭಾರತೀಯ ಕ್ರಿಕೆಟ್’ನ ಅಭಿನವ ಶ್ರೀರಾಮ..! 

-

- Advertisment -spot_img

ಅವನು ಲಕ್ಷ್ಮಣನಲ್ಲ.. ಭಾರತೀಯ ಕ್ರಿಕೆಟ್’ನ ಅಭಿನವ ಶ್ರೀರಾಮ..! 

ಕ್ರಿಕೆಟಿಗರ ಬಗ್ಗೆ ಕ್ರಿಕೆಟಿಗರಿಂದಲೇ ಹತ್ತಾರು ಕಥೆಗಳನ್ನು ಕೇಳಿದ್ದೇನೆ. ಅದರಲ್ಲಿ ಕೆಲವರದ್ದು ವರ್ಣರಂಜಿತ.. ಇನ್ನು ಕೆಲವರದ್ದು ರೋಚಕ.. ಹಲವರದ್ದು ‘ರಸ’ವತ್ತಾದ ಕಥೆಗಳು. ಅಷ್ಟೂ ಕಥೆಗಳನ್ನು ಕೇಳಿದ ನಂತರ ನಡತೆಯಲ್ಲಿ, ವ್ಯಕ್ತಿತ್ವದಲ್ಲಿ ಶ್ರೀರಾಮಚಂದ್ರನಂತೆ ಕಂಡದ್ದು ಈ ಲಕ್ಷ್ಮಣ.. 

ವಿವಿಎಸ್ ಲಕ್ಷ್ಮಣ್.. ವೆಂಗಿಪರಪ್ಪು ವೆಂಕಟಸಾಯಿ ಲಕ್ಷ್ಮಣ್.. ತೆಲಂಗಾಣದ ಈ ಕ್ರಿಕೆಟಿಗನನ್ನು ಕ್ರಿಕೆಟ್ ಜಗತ್ತು ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಎಂದೇ ಕರೆಯುತ್ತದೆ. ಹೌದು.. ಆಟದಂತೆ ಅವರ ವ್ಯಕ್ತಿತ್ವವೂ ವೆರಿ ವೆರಿ ಸ್ಪೆಷಲ್. 

90ರ ದಶಕದ ಹುಡುಗರಂತೆ ನಾನೂ ಕೂಡ ವಿವಿಎಸ್ ಲಕ್ಷ್ಮಣ್ ಅವರ ಆಟವನ್ನು ನೋಡುತ್ತಾ ಬಂದವನು. ಟೆಸ್ಟ್ ಕ್ರಿಕೆಟ್’ನ ಅಸಲಿ ಶಕ್ತಿ ಅರ್ಥವಾಗುವ ಮುನ್ನ ಲಕ್ಷ್ಮಣ್ ಆಟ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಆದರೆ ಒಮ್ಮೆ ಟೆಸ್ಟ್ ಕ್ರಿಕೆಟ್ ಇಷ್ಟವಾಗುತ್ತಿದ್ದಂತೆ ಲಕ್ಷ್ಮಣ್ ಅವರ ಆಟವೂ ಇಷ್ಟವಾಗುತ್ತಾ ಹೋಯಿತು. 

ಕೋಲ್ಕತಾ ಟೆಸ್ಟ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರಿಸಿದ ಆ 280 ರನ್.. ಸಿಡ್ನಿ ಟೆಸ್ಟ್’ನಲ್ಲಿ ಸಿಡಿಸಿದ ಶತಕ.. ಇಂತಹ ವಿಶೇಷ ಆಟಗಳೇ ಲಕ್ಷ್ಮಣ್’ರನ್ನು ವಿಶೇಷ ಸ್ಥಾನದಲ್ಲಿ ನಿಲ್ಲಿಸಿರುವುದು. 

ಮೂಲತಃ ಅಗ್ರಕ್ರಮಾಂಕದ ಆಟಗಾರ.. ತಂಡ ಅಗತ್ಯತೆಗೆ, ಪರಿಸ್ಥಿತಿಯ ಅನಿವಾರ್ಯತೆಗೆ ಕಟ್ಟು ಬಿದ್ದು ಕೆಳಕ್ರಮಾಂಕದಲ್ಲಿ ಆಡಿ ದಂತಕಥೆ ಎನಿಸಿಕೊಂಡವರು ಲಕ್ಷ್ಮಣ್. ತಮ್ಮದಲ್ಲದ ಜಾಗದಲ್ಲಿ ಆಡಬೇಕೆಂದಾಗ ಯಾವ ತಕರಾರನ್ನೂ ತೆಗೆಯದೆ ತಂಡಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದ ‘ನಿಸ್ವಾರ್ಥ’ ಆಟಗಾರ. 

ಲಕ್ಷ್ಮಣ್ ಅವರ ಶುಭ್ರ ವ್ಯಕ್ತಿತ್ವದ ಬಗ್ಗೆ ಅವರನ್ನು ತುಂಬಾ ಹತ್ತಿರದಿಂದ ಬಲ್ಲವರಿಂದಲೇ ಕೇಳಿದ್ದೆ. ಅವರು ಎಂಥಾ ಸರಳ ಮನುಷ್ಯ ಎಂಬುದು ಪ್ರತ್ಯಕ್ಷವಾಗಿ ಅರ್ಥವಾಗಿದ್ದು ಕಳೆದ ವರ್ಷ. 

ವಿವಿಎಸ್ ಲಕ್ಷ್ಮಣ್ ಅವರಿಗೆ ಸಂಬಂಧಿಸಿದ ವೈಯಕ್ತಿಕ ಕಾರ್ಯನಿಮಿತ್ತ ಕಳೆದ ವರ್ಷ ಬಹುತೇಕ ಇದೇ ಸಮಯದಲ್ಲಿ ಅವರೊಂದಿಗೆ ಎರಡು ದಿನಗಳ ಕಾಲ ಮಾತನಾಡುವ ಅವಕಾಶ ಸಿಕ್ಕಿತ್ತು. ಕರೆ ಮಾಡಿದರು.. ‘’ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬನ್ನಿ, ಅಲ್ಲೇ ಮಾತನಾಡೋಣ’’ ಎಂದರು. 

ದೊಡ್ಡ ಕ್ರಿಕೆಟಿಗ.. ದಂತಕಥೆ..

ಕೊಂಚ ಸಂಕೋಚದಿಂದಲೇ ಹೋಗಿ ಅವರ ಮುಂದೆ ನಿಂತೆ.. ಅಲ್ಲಿಯವರೆಗೆ ಅವರನ್ನು ಮುಖತಃ ಭೇಟಿಯಾಗಿರಲಿಲ್ಲ. 

‘ಯಾರು’ ಎಂಬ ಮುಖಭಾವದಲ್ಲಿ ನನ್ನತ್ತ ನೋಡಿದರು. ‘ಸರ್, ಸುದರ್ಶನ್’ ಎಂದೆ.. 

‘’Oh, sorry.. ಗೊತ್ತಾಗಲಿಲ್ಲ.. ಬನ್ನಿ ಕುಳಿತುಕೊಳ್ಳಿ’’ ಎಂದರು. ಕುಡಿಯಲು ಬಿಸಿ ಬಿಸಿ ಕಾಫಿ ತರಿಸಿದರು. ಸರಿ ಸುಮಾರು ಒಂದೂವರೆ ಗಂಟೆ ಮಾತನಾಡಿದರು. ಈ ಮನುಷ್ಯ ವೆರಿ ವೆರಿ ಸ್ಪೆಷಲ್ ಅಷ್ಟೇ ಅಲ್ಲ.. ಅಷ್ಟೇ ಸರಳ ಅನ್ನಿಸಿತು. ಕ್ರಿಕೆಟ್ ವಲಯದಲ್ಲಿ ಇವರಿಗೆ ಸಿಗುವ ಗೌರವದ ಗುಟ್ಟೇನು ಎಂಬುದು ಪ್ರತ್ಯಕ್ಷವಾಗಿ ಅರಿವಾಯಿತು. 

ವೆರಿ ವೆರಿ ಸ್ಪೆಷಲ್ ಕ್ರಿಕೆಟರ್.. ವೆರಿ ವೆರಿ ಸ್ಪೆಷಲ್ ವ್ಯಕ್ತಿ..

Happy birthday Legend VVS Laxman❤️

-ಸುದರ್ಶನ್

LEAVE A REPLY

Please enter your comment!
Please enter your name here

19 − seventeen =

Latest news

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS ಕಪ್ 2026

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS CUP 2026 CHIVAS ಎಫ್‌ಸಿ ವತಿಯಿಂದ ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್ “CHIVAS ಕಪ್ 2026”...

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...
- Advertisement -spot_imgspot_img

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ ಮಂಗಳೂರು: ಎಂಜಾಯ್ ಟೈಟನ್ಸ್ ಯುನೈಟೆಡ್ ಆಯೋಜಿಸಿದ್ದ ಜಿಎಸ್‌ಬಿ ಸಮುದಾಯದ ಪ್ರತಿಷ್ಠಿತ “ಎಂಜಾಯ್...

Must read

- Advertisement -spot_imgspot_img

You might also likeRELATED
Recommended to you