Categories
ರಾಜ್ಯ

ಡಿಸೆಂಬರ್ 28 ಹಾಗೂ 29 ರಂದು H.M.S ಶಿರಾ ಕಪ್-2019

ತುಮಕೂರು ಜಿಲ್ಲೆಯ ಮಧುಗಿರಿ ರಸ್ತೆಯ ಶಿರಾ ದಲ್ಲಿನ H.M.S (ಹಝರತ್ ಮೆಹಬೂಬ್ ಸುಬಾನಿ) ಅಂಗಣದಲ್ಲಿ, H.M.S ಅಂಗಣದ ಸಂಸ್ಥಾಪಕ ಮೊಹಮ್ಮದ್ ಜಮೀಲ್ (ಮುನ್ನಾ) ಹಾಗೂ ಅಧ್ಯಕ್ಷ ಹಯಾತ್ ಖಾನ್ ರವರ ಸಹಕಾರದೊಂದಿಗೆ, ಚೌಧರಿ ಮುಬಾರಕ್ ರವರ ಸಾರಥ್ಯದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಡಿಸೆಂಬರ್ 28,29 ರಂದು 2 ದಿನಗಳ‌ ಕಾಲ ಹಗಲಿನಲ್ಲಿ ಏರ್ಪಡಿಸಲಾಗಿದೆ.

ಪ್ರಥಮ ಪ್ರಶಸ್ತಿ ವಿಜೇತ ತಂಡ 1 ಲಕ್ಷ ನಗದು, ದ್ವಿತೀಯ ಸ್ಥಾನಿ ತಂಡ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ತೋರಿದ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ.

ಕೇವಲ 16 ತಂಡಗಳಿಗೆ ಭಾಗವಹಿಸಲು‌ ಅವಕಾಶವಿದ್ದು,ಆಸಕ್ತ ತಂಡಗಳು ಮೇಲ್ಕಾಣಿಸಿದ ಮೊಬೈಲ್ ನಂಬರ್ ನ್ನು ಸಂಪರ್ಕಿಸಬಹುದಾಗಿದೆ.

ಆರ್.ಕೆ.ಆಚಾರ್ಯ ಕೋಟ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

ten − 1 =