
ಈ ವ್ಯಕ್ತಿ ಭಾರತ ತಂಡದ ಕೋಚ್ ಆಗಿ disaster ಎಂಬ ಮಾತೇ ನಿಜವಾಗುತ್ತಿದೆ!

ಭಾರತ ಕ್ರಿಕೆಟ್ ತಂಡದ ಕೋಚ್ ಆದವನು ಆಟಗಾರರಿಗೆ ಬ್ಯಾಟಿಂಗ್, ಬೌಲಿಂಗ್ ಪಾಠಗಳನ್ನು ಹೇಳಿ ಕೊಡಬೇಕಿಲ್ಲ. ಅವರು ಅದನ್ನೆಲ್ಲಾ ಕಲಿತೇ ಅಲ್ಲಿಗೆ ತಲುಪಿರುತ್ತಾರೆ. ಕೋಚ್ ಆದವನ ಕೆಲಸ ಆಟಗಾರರ ಮಧ್ಯೆ ಒಳ್ಳೆಯ ಬಾಂಧವ್ಯ ಮೂಡಿಸುವುದು, ಆಟಗಾರರ ಮಧ್ಯೆ ಇರಬಹುದಾದ egoಗಳನ್ನು ಕರಗಿಸಿ ತಂಡದಲ್ಲೊಂದು ಸೌಹಾರ್ದ ವಾತಾವರಣ ಮೂಡುವಂತೆ ಮಾಡುವುದು. ಆದರೆ ಜಗತ್ತಿನ ಅಷ್ಟೂ ego, ಅಹಂಗಳನ್ನೆಲ್ಲಾ ತನ್ನೊಳಗೇ ತುಂಬಿಕೊಂಡಿರುವ, ಅಹಂಕಾರಕ್ಕೆ ರಾಯಭಾರಿ ಎಂಬಂತಿರುವ ವ್ಯಕ್ತಿಯಿಂದ ಇದನ್ನೆಲ್ಲಾ ನಿರೀಕ್ಷಿಸುವುದೇ ಅಪರಾಧ..!

ರವಿ ಶಾಸ್ತ್ರಿ ಭಾರತ ತಂಡದ ಕೋಚ್ ಆಗಿ ಯಶಸ್ಸು ಗಳಿಸಿದ್ದೇ man management skill ಮೂಲಕ.
2020..
ಆಗ ನಾಯಕನಾಗಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಧ್ಯೆ ಅಂತರ್ಯುದ್ಧ ನಡೆಯುತ್ತಿದ್ದ ಸಮಯ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಬ್ಬರನ್ನೂ ಎದುರು-ಬದುರು ಕೂರಿಸಿ ಬುದ್ಧಿ ಹೇಳಿ ಇಬ್ಬರ egoಗಳನ್ನು ಕರಗಿಸಿ, ಇಬ್ಬರೂ ಒಂದಾಗುವಂತೆ ಮಾಡಿದವರು ರವಿ ಶಾಸ್ತ್ರಿ. ಭಾರತ ತಂಡದ ಕೋಚ್ ಆಗಿ ಮಾಡಬೇಕಿರುವುದು ಇಷ್ಟೇ.. ಜೊತೆಗೆ ಪಿಚ್, ಕಂಡಿಷನ್’ಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ರಣವ್ಯೂಹಗಳನ್ನು ಹೆಣೆಯುವುದು. ಈ ಅಷ್ಟೂ ಜವಾಬ್ದಾರಿಗಳಲ್ಲಿ ಗೌತಮ್ ಗಂಭೀರ್ ವಿಫಲವಾಗಿರುವುದು evident ಆಗಿ ಕಾಣುತ್ತಿದೆ.
Seam friendly ಚಿನ್ನಸ್ವಾಮಿಯಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರ, ನಮ್ಮ ಪ್ರೀಮಿಯಂ ಬ್ಯಾಟರ್’ಗಳು ಫಾರ್ಮ್’ನಲ್ಲಿಲ್ಲ ಎಂಬುದು ಗೊತ್ತಿದ್ದೂ ಪುಣೆ ಮತ್ತು ಮುಂಬೈನಲ್ಲಿ rank turner wicketಗಳನ್ನು ಕೇಳಿದ್ದು.. ಪರಿಣಾಮ ಕಣ್ಣ ಮುಂದೆಯೇ ಇದೆ.
ಟೆಸ್ಟ್ ಸರಣಿ ಗೆಲ್ಲುವ ಮಾತು ಹಾಗಿರಲಿ.. ನ್ಯೂಜಿಲೆಂಡ್ ತಂಡ 38 ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಪಂದ್ಯವನ್ನೇ ಗೆದ್ದಿರಲಿಲ್ಲ.. ಬರಿಗೈಯಲ್ಲಿ ಬಂದವರು ವೈಟ್ ವೈಶಾ ಬಳಿದು ಹೋದರು.. ಎಂಥಾ ಅಪಮಾನ..! ಬಾಂಗ್ಲಾದೇಶ ವಿರುದ್ಧ ಗೆದ್ದು ನ್ಯೂಜಿಲೆಂಡ್ ತಂಡವನ್ನೂ ಅದೇ ರೀತಿ ಬಗ್ಗು ಬಡಿಯುತ್ತೇವೆ ಎಂದು ಹೊರಟವರ ಬೆನ್ನು ಮೂಳೆಯೇ ಮುರಿದು ಬಿದ್ದಿದೆ.
ಇದಕ್ಕೂ ಮೊದಲು ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋಲು..!
ಐಪಿಎಲ್’ನಲ್ಲಿ ತಂಡವೊಂದರ ಮಾರ್ಗದರ್ಶಕನಾಗಿ ಯಶಸ್ಸಿನ ಶ್ರೇಯವನ್ನು ಪಡೆದಷ್ಟು ಸುಲಭವಲ್ಲ ಭಾರತ ತಂಡದ ತರಬೇತುದಾರನ ಜವಾಬ್ದಾರಿ. ಅದು ಯಾವತ್ತಿಗೂ ಮುಳ್ಳಿನ ಸಿಂಹಾಸನ.




