12.3 C
London
Friday, May 3, 2024
Homeಕ್ರಿಕೆಟ್ಹರಿಹರೇಶ್ವರ ಟ್ರೋಫಿಯೊಂದಿಗೆ ಫ್ರೆಂಡ್ಸ್ ಬೆಂಗಳೂರು ಮಡಿಲಿಗೆ ಸತತ 6 ನೇ ರಾಜ್ಯಮಟ್ಟದ ಪ್ರಶಸ್ತಿ

ಹರಿಹರೇಶ್ವರ ಟ್ರೋಫಿಯೊಂದಿಗೆ ಫ್ರೆಂಡ್ಸ್ ಬೆಂಗಳೂರು ಮಡಿಲಿಗೆ ಸತತ 6 ನೇ ರಾಜ್ಯಮಟ್ಟದ ಪ್ರಶಸ್ತಿ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿ  ಐತಿಹಾಸಿಕ ದಾಖಲೆ ಬರೆಯುತ್ತಿರುವ ಬಲಿಷ್ಠ ಫ್ರೆಂಡ್ಸ್ ಬೆಂಗಳೂರು ತಂಡ ಇದೀಗ ಮತ್ತೊಂದು ದಾಖಲೆಯನ್ನು ಮಾಡಿದೆ.
ಮಕರ ಸಂಕ್ರಮಣ ಹಬ್ಬದ ಪ್ರಯುಕ್ತ ಜನವರಿ 2024 ರ  ದಿನಾಂಕ  12, 13, 14  ರವರೆಗೆ ದಾವಣಗೆರೆ ಜಿಲ್ಲೆಯ  ಹರಿಹರದ ಡಿ ಆರ್ ಎಮ್ ಹೈಸ್ಕೂಲ್ ಮೈದಾನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೆನ್ನಿಸ್  ಬಾಲ್   ಕ್ರಿಕೆಟ್ ಟೂರ್ನಿ  ”ಶ್ರೀ ಹರಿಹರೇಶ್ವರ ಟ್ರೋಫಿ”  ಯಲ್ಲಿ ಬೆಂಗಳೂರಿನ ಶ್ರೀ ರೇಣು ಗೌಡ ಮಾಲಕತ್ವದ ಫ್ರೆಂಡ್ಸ್ ಬೆಂಗಳೂರು ಜಯಶೀಲರಾಗಿದ್ದಾರೆ.  ಹರಿಹರೇಶ್ವರ ಟ್ರೋಫಿಯೊಂದಿಗೆ ಫ್ರೆಂಡ್ಸ್ ಬೆಂಗಳೂರು ಮಡಿಲಿಗೆ ಸತತ 6 ನೇ ಗೆಲುವಿನ‌ ದಾಖಲೆ ಬರೆಯಿತು‌.
8 ಓವರ್‌ಗಳ ಈ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನ  ಪಡೆದ   ಫ್ರೆಂಡ್ಸ್ ಬೆಂಗಳೂರು ಬೆಂಗಳೂರು 3,00,111 ನಗದು ಮತ್ತು ದ್ವಿತೀಯ ಸ್ಥಾನ ಗಳಿಸಿದ ದಾವಣಗೆರೆ ಇಲೆವೆನ್ ರೂಪಾಯಿ 1,50,555 ನಗದು ಮತ್ತು ರನ್ನರ್  ಅಪ್ ಟ್ರೋಫಿಯನ್ನು ಪಡೆಯಿತು.
2023-24ರ ಸಾಲಿನ ಪಂದ್ಯಾವಳಿಗಳಲ್ಲಿ  ಮೊದಲು ಹಿರಿಯೂರು ಪಂದ್ಯಾವಳಿಯನ್ನು ಗೆದ್ದ ಫ್ರೆಂಡ್ಸ್ ಬೆಂಗಳೂರು  ತದನಂತರ ಸತತವಾಗಿ ಮಹಾಲಕ್ಷ್ಮಿ ಲೇಔಟ್ ಟೂರ್ನಿ, ಶಾಮನೂರು ಡೈಮಂಡ್ ಮತ್ತು ಶಿವಗಂಗಾಕಪ್  ದಾವಣಗೆರೆ, ದುರ್ಗಾ ಇಲೆವೆನ್-  ಅರ್ಜುನ ಕಪ್ 2023 ಚಿತ್ರದುರ್ಗ ಟೂರ್ನಮೆಂಟ್ ಗಳನ್ನು ಗೆದ್ದಿತ್ತು.  ಈ ನಡುವೆ ಶ್ರೀರಂಗಪಟ್ಟಣದಲ್ಲಿ ನಡೆದ ಪಂದ್ಯಾವಳಿಯಲ್ಲೂ ದ್ವಿತೀಯ ಸ್ಥಾನ ಗಳಿಸಿತ್ತು.  ಇದೀಗ ಹರಿಹರದಲ್ಲಿ ನಡೆದ ಈ ಒಂದು ಪಂದ್ಯಾಕೂಟವನ್ನು ಗೆದ್ದುಕೊಂಡು  6 ನೇ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಗಳಾಗಿ ಬೀಗುತ್ತಿದ್ದಾರೆ.
ಈ ಸಂದರ್ಭದಲ್ಲಿ ಸ್ಪೋರ್ಟ್ಸ್ ಕನ್ನಡ ವಾಹಿನಿಯು ತಂಡದ ಮಾಲೀಕರಾದ ಶ್ರೀಯುತ ರೇಣು ಗೌಡ ಇವರನ್ನು ದೂರವಾಣಿ  ಮೂಲಕ  ಸಂಪರ್ಕಿಸಿ ಅಭಿನಂದಿಸಿತು. ರೇಣುಗೌಡ ಅವರು ಮಾತನಾಡಿ,“ಆಟಗಾರರ ನಡುವಿನ ಪರಸ್ಪರ ಹೊಂದಾಣಿಕೆ,ಒಬ್ಬರ ಯಶಸ್ಸನ್ನು ಇನ್ನೊಬ್ಬರು ಸಂಭ್ರಮಿಸುವುದು ಹಾಗೂ ದೇವರ ದಯೆ,
ಅಭಿಮಾನಿಗಳ ಹಾರೈಕೆಯಿಂದ ಯಶಸ್ಸು ಲಭಿಸಿದೆ,ತಂಡದ ಮೇಲಿನ ಪ್ರೀತಿ,ಹಾರೈಕೆಗೆ ಸದಾ ಆಭಾರಿ”ಎಂದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

three + 8 =