17.9 C
London
Wednesday, May 15, 2024
Homeಕ್ರಿಕೆಟ್ಏಪ್ರಿಲ್ 29 ಮತ್ತು 30 ರಂದು ಮಂಗಳೂರಿನಲ್ಲಿ ಎ.ಜೆ ಗ್ರೂಪ್ಸ್ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಾವಳಿ

ಏಪ್ರಿಲ್ 29 ಮತ್ತು 30 ರಂದು ಮಂಗಳೂರಿನಲ್ಲಿ ಎ.ಜೆ ಗ್ರೂಪ್ಸ್ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಾವಳಿ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಮಂಗಳೂರು-ಎ.ಜೆ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್  ಕಾರ್ಪೊರೇಟ್ ಪ್ರೀಮಿಯರ್  ಲೀಗ್‌ ‘ ಅತಿ ದೊಡ್ಡ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಾವಳಿ ಮಂಗಳೂರಿನಲ್ಲಿ  ಏಪ್ರಿಲ್ 29 ರಿಂದ 30 ರವರೆಗೆ ಎ ಜೆ  ಮೈದಾನದಲ್ಲಿ ಆಯೋಜಿಸಲಾಗಿದೆ
ಒತ್ತಡದ ಕಾರ್ಪೊರೇಟ್ ಜೀವನಕ್ಕೆ ಒಂದು ಚಿಟಿಕೆ ಉತ್ಸಾಹವನ್ನು ನೀಡುವ ನಿಟ್ಟಿನಲ್ಲಿ, ಎ ಜೆ ಕ್ರಿಕೆಟ್ ಕ್ಲಬ್  ಕರಾವಳಿಯ ಕಾರ್ಪೊರೇಟ್‌ಗಳಲ್ಲಿ ಕ್ರಿಕೆಟ್ ಕ್ರಿಯೆಯನ್ನು ಉತ್ತೇಜಿಸಲು – ‘ AJ ಕಾರ್ಪೊರೇಟ್ ಪ್ರೀಮಿಯರ್ ಲೀಗ್‌ ‘ ಎಂಬ ಶೀರ್ಷಿಕೆಯ ನವೀನ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಗಳ ಸರಣಿಯನ್ನು ರೂಪಿಸಿದೆ.  ಹದಿನಾರು ತಂಡಗಳು, ಪ್ರತಿನಿಧಿಗಳು ಸೇರಿದಂತೆ ದೊಡ್ಡ ಕಂಪನಿಗಳು ಈ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತವೆ. ಪಂದ್ಯಗಳು  ಹಗಲು-ರಾತ್ರಿ ರೂಪದಲ್ಲಿ ನಡೆಯುತ್ತವೆ.
ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳುವ  ತಂಡಗಳು:
ಕೆಎಂಸಿ ಮಣಿಪಾಲ
ಮಣಿಪಾಲ್ ಟೆಕ್ನಾಲಜೀಸ್
ಮಾಹೆ, ಮಣಿಪಾಲ
ಕೆಎಂಸಿ ಮಂಗಳೂರು
ಸೆಮ್ನಾಕ್ಸ್ ಸೊಲ್ಯೂಷನ್ಸ್
ನೋವಿಗೊ
ಎ ಆರ್  ಎಲ್
ನಿಟ್ಟೆ ಯೂನಿವರ್ಸಿಟಿ
ಯೇನಪೋಯ ಗ್ರೂಪ್
ಇಂಡಿಯಾನಾ ಗ್ರೂಪ್
ಎ ಜೆ ಹಾಸ್ಪಿಟಲ್ಸ್ ಗ್ರೂಪ್
ಎ ಜೆ ರೆಸ್ಟಾರಂಟ್ಸ್
ಎಂ ಸಿ ಎಫ್
ನಿವಿಯಸ್
ಜೆ ಎಸ್ ಐ ಸ್ಪೋರ್ಟ್ಸ್ ಇಂಟರ್ನ್ಯಾಷನಲ್
ಮಂಗಳೂರು ವಿಶ್ವವಿದ್ಯಾನಿಲಯ
• ಕಾರ್ಪೊರೇಟ್ ಕಂಪನಿಯ ಉದ್ಯೋಗಿಗಳು ಮಾತ್ರ ಆಡಲು ಅರ್ಹರಾಗಿರುತ್ತಾರೆ.
• ಪ್ರತಿಯೊಂದು ತಂಡವು ಲೀಗ್ ಹಂತದ ಮತ್ತು ನಾಕ್ ಔಟ್ ಪಂದ್ಯಗಳಲ್ಲಿ ಪಂದ್ಯಗಳನ್ನು ಆಡುತ್ತದೆ
• ಇಡೀ ಪಂದ್ಯಾವಳಿಯನ್ನು ಟೆನಿಸ್ ಬಾಲ್ (ವಿಲ್ಸನ್) ನೊಂದಿಗೆ ಆಡಲಾಗುತ್ತದೆ.
• ಎಲ್ಲಾ ಕ್ರಿಕೆಟ್ ಆಟಗಾರರು ಸಂಘಟಕರು ನೀಡುವ ಸಮವಸ್ತ್ರವನ್ನು ಧರಿಸಬೇಕು
ಟೂರ್ನಮೆಂಟ್ ಕಮಿಟಿಯ ಡಾಕ್ಟರ್ ಸಾಕ್ಷಾತ್ ರೈ ಪಂದ್ಯಾವಳಿಯ ವಿವರಗಳನ್ನು ಸ್ಪೋರ್ಟ್ಸ್ ಕನ್ನಡದ ಜೊತೆ ಹಂಚಿಕೊಡರು. ” ಈ ವರ್ಷದಲ್ಲಿ ಏಪ್ರಿಲ್ 29 ಮತ್ತು 30 ರಂದು  ಎಜೆ ಮೈದಾನದಲ್ಲಿ ನಡೆಯಲಿರುವ ಕ್ರಿಕೆಟ್ ಸಂಭ್ರಮಕ್ಕೆ ತಮ್ಮೆಲ್ಲರನ್ನು ಆಹ್ವಾನಿಸುತ್ತೇನೆ!  ಕಾರ್ಪೊರೇಟ್ ತಂಡಗಳಿಗೆ  ಪವರ್ ಹಿಟ್ಟಿಂಗ್ ಅನ್ನು ಪ್ರದರ್ಶಿಸಲು ಇದು ಒಳ್ಳೆಯ ಅವಕಾಶ! ಮೈದಾನದಲ್ಲಿ ಕಷ್ಟಪಟ್ಟು ಆಡೋಣ ಆದರೆ ಮುಖ್ಯವಾಗಿ ಸೌಹಾರ್ದತೆಯನ್ನು ಹಂಚಿಕೊಳ್ಳೋಣ! ”  ಎಂದು ಅವರು ತಿಳಿಸಿದರು. ಟೂರ್ನಮೆಂಟ್ ಸಂಘಟನಾ ಕಾರ್ಯದರ್ಶಿ ಡಾಕ್ಟರ್  ಶರಣ್ ಜೆ ಶೆಟ್ಟಿ ಅವರು ಪಂದ್ಯಾವಳಿಯ  ಕ್ರಿಕೆಟ್ ಸಂಭ್ರಮ ಆನಂದಿಸಲು ಸಂಬಂಧಪಟ್ಟ ಎಲ್ಲರನ್ನು ಆಹ್ವಾನಿಸಿದ್ದಾರೆ.
ಸ್ಪೋರ್ಟ್ಸ್ ಕನ್ನಡದ  ಕೆ ಆರ್ ಕೆ ಆಚಾರ್ಯ ಮಾತನಾಡಿ ”ಒತ್ತಡದ ಕೆಲಸದ ಜೀವನ ಮತ್ತು ಬೇಸರದ ಜೀವನಶೈಲಿಯು ದೈಹಿಕ ಚಟುವಟಿಕೆಗಳು ಮತ್ತು ಆರೋಗ್ಯದ ಮೇಲೆ ಸಾಮಾನ್ಯವಾಗಿ  ಸಮಸ್ಯೆ ಬೀರುವ ಕಾರಣ ಇಂತಹ ಟೂರ್ನಮೆಂಟ್ ಗಳು ಅನುಕೂಲ ಮತ್ತು ಅಗತ್ಯವಾಗಿದೆ” ಎಂದರು.
ಕ್ರಿಕೆಟ್ ಪ್ರೇಮಿಗಳು ಅತ್ಯಾಕರ್ಷಕ ಕಾರ್ಪೊರೇಟ್ ಟೂರ್ನಮೆಂಟನ್ನು ವೀಕ್ಷಿಸಿ ಕ್ರಿಕೆಟ್ ಲೀಗ್ (CPL) ಹೆಚ್ಚು ದೊಡ್ಡ ಮತ್ತು ಉತ್ತಮ ಸ್ವರೂಪದಲ್ಲಿ ನಡೆಯಲಿ.
ಶುಭ ಕೋರುವ,
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ ಡಾಟ್ ಕಾಮ್
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

twenty − 4 =