17.3 C
London
Monday, May 13, 2024
Homeಕ್ರಿಕೆಟ್43 ವರ್ಷಗಳ ಹಿಂದೆ ಸಮುದ್ರದಲ್ಲಿ ಮುಳುಗಬೇಕಿದ್ದ ಹುಡುಗ, ಬಂಗಾಳದ ‘ಆಕಾಶದೀಪ’ನಿಗೆ ದ್ರೋಣಾಚಾರ್ಯನಾದ..!

43 ವರ್ಷಗಳ ಹಿಂದೆ ಸಮುದ್ರದಲ್ಲಿ ಮುಳುಗಬೇಕಿದ್ದ ಹುಡುಗ, ಬಂಗಾಳದ ‘ಆಕಾಶದೀಪ’ನಿಗೆ ದ್ರೋಣಾಚಾರ್ಯನಾದ..!

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಈ ಕಥೆ ಶುರುವಾಗುವುದು 80ರ ದಶಕದ ಆರಂಭದಲ್ಲಿ. ಅವತ್ತು ಪಶ್ಚಿಮ ಬಂಗಾಳದ ರಣಜಿತ್ ಬೋಸ್ ಎಂಬ ವ್ಯಕ್ತಿ, ಪತ್ನಿ ಮತ್ತು 2 ವರ್ಷದ ಮಗನೊಂದಿಗೆ ಕಲ್ಕತ್ತಾದಿಂದ ಪೋರ್ಟ್ ಬ್ಲೇರ್’ಗೆ ಸಮುದ್ರ ಮಾರ್ಗವಾಗಿ ಹೊರಟಿದ್ದರು. ಮಾರ್ಗ ಮಧ್ಯೆ ಹಡಗು ಬಂಡೆಯೊಂದಕ್ಕೆ ಬಡಿದು ಮುಳುಗಲು ಪ್ರಾರಂಭಿಸಿತು.
ಸಮುದ್ರ ಉಗ್ರಾವತಾರ ತಾಳಿತ್ತು. ಹೀಗಾಗಿ ಹತ್ತಿರದಲ್ಲಿದ್ದ ಹಡಗುಗಳಿಗೆ ಮುಳುಗುತ್ತಿದ್ದ ಹಡಗಿನ ಬಳಿ ಬರಲು ಸಾಧ್ಯವಾಗಲಿಲ್ಲ. ರಣಜಿತ್ ಬೋಸ್’ಗೆ ಮೊದಲು ಪುಟ್ಟ ಮಗನನ್ನು ಉಳಿಸಿಕೊಳ್ಳಬೇಕಿತ್ತು. ಬೇರೆ ದಾರಿ ಕಾಣದೆ ಮಗನನ್ನು ಹಿಡಿದು ಹತ್ತಿರದಲ್ಲಿದ್ದ ಹಡಗಿಗೆ ಎಸೆದು ಬಿಟ್ಟರು. ಅಲ್ಲೊಬ್ಬ ವ್ಯಕ್ತಿ ಆ ಪುಟ್ಟ ಹುಡುಗನನ್ನು ಸುರಕ್ಷಿತವಾಗಿ ಹಿಡಿದುಕೊಂಡ.
18 ವರ್ಷಗಳ ನಂತರ ಆ ಹುಡುಗ ಬಂಗಾಳ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ. ಆತನ ಹೆಸರು ರಣದೇವ್ ಬೋಸ್.
2006-07ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕೇವಲ ಎಂಟೇ ಪಂದ್ಯಗಳಿಂದ 57 ವಿಕೆಟ್ ಕಬಳಿಸಿದ್ದ ರಣದೀಪ್ ಬೋಸ್, ಭಾರತ ಪರ ಆಡುವ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದ್ದ ವೇಗದ ಬೌಲರ್.
ಆದರೆ ಬಂಗಾಳದ ಕ್ರಿಕೆಟ್ ಸೈನಿಕನಿಗೆ ಆ ಅವಕಾಶ ಸಿಗಲಿಲ್ಲ.
ಆಟಗಾರನಾಗಿ ಮಾಡಲು ಸಾಧ್ಯವಾಗದ್ದನ್ನು ಬೌಲಿಂಗ್ ಕೋಚ್ ಆಗಿ ಸಾಧಿಸಿದ್ದಾರೆ ರಣದೇವ್ ಬೋಸ್.
ಭಾರತ ಟೆಸ್ಟ್ ತಂಡಕ್ಕೆ ಬಂಗಾಳದಿಂದ ಇಬ್ಬರು ಫಾಸ್ಟ್ ಬೌಲರ್’ಗಳನ್ನು ತಯಾರು ಮಾಡಿ ಕಳುಹಿಸಿದ್ದಾರೆ. ಒಬ್ಬ ಮುಕೇಶ್ ಕುಮಾರ್, ಇನ್ನೊಬ್ಬ ಆಕಾಶ್’ದೀಪ್. ರಣದೇವ್ ಬೋಸ್ ಗರಡಿಯಲ್ಲೇ ಪಳಗಿದ ಇಶಾನ್ ಪೊರೆಲ್ ಎಂಬ ಮತ್ತೊಬ್ಬ ಯುವ ವೇಗದ ಬೌಲರ್ 2018ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ.
ರಣದೇವ್ ಬೋಸ್ ಅವರ ಶಿಷ್ಯರಲ್ಲಿ ಒಬ್ಬನಾದ ಆಕಾಶ್’ದೀಪ್, ರಾಂಚಿಯಲ್ಲಿ ಶುಕ್ರವಾರ ಭಾರತ ಪರ ಟೆಸ್ಟ್ ಪದಾರ್ಪಣೆ ಮಾಡಿದ್ದಾನೆ.
43 ವರ್ಷಗಳ ಹಿಂದೆ ಸಮುದ್ರಕ್ಕೆ ಆಹುತಿಯಾಗಬೇಕಿದ್ದ ಆ ಹುಡುಗನೇ ಈಗ ಭಾರತ ಪರ ಆಡುವ ಕನಸು ಕಾಣುವ ಬಂಗಾಳದ ಯುವ ವೇಗದ ಬೌಲರ್’ಗಳ ಪಾಲಿಗೆ ದ್ರೋಣಾಚಾರ್ಯ.
#Akashdeep #RanadebBose

Latest stories

LEAVE A REPLY

Please enter your comment!
Please enter your name here

fifteen − five =