5 C
London
Wednesday, April 24, 2024
Homeಇತರೆಕರಾವಳಿ ಕನ್ನಡಿಗ ಕೋಟ ರಾಮಕೃಷ್ಣ ಆಚಾರ್ಯರಿಗೆ ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕರಾವಳಿ ಕನ್ನಡಿಗ ಕೋಟ ರಾಮಕೃಷ್ಣ ಆಚಾರ್ಯರಿಗೆ ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಟೆನ್ನಿಸ್ ಬಾಲ್ ಕ್ರಿಕೆಟ್ ಗೆ ಆಟಗಾರರ ಮಧ್ಯೆ ಒಂದು ಸಂಕೋಲೆಯನ್ನು  ಸೃಷ್ಟಿಸಿದ ಕರ್ನಾಟಕದ ಮೊತ್ತ ಮೊದಲ ಕ್ರೀಡಾ ವೆಬ್ ಸೈಟ್ ಎಂಬ ಕೀರ್ತಿಗೆ ಪಾತ್ರವಾಗಿದೆ
ಈ sportskannada.com . ಕೋಟ ರಾಮಕೃಷ್ಣ ಆಚಾರ್ ರವರು ಸತತ 10 ವರ್ಷಗಳ ಅಧ್ಯಯನ ಮತ್ತು ಅವಿರತ ಶ್ರಮದಿಂದ ಕರ್ನಾಟಕದಲ್ಲಿರುವ 1970 ರಿಂದ 2020 ರ ಕಾಲಘಟ್ಟದ ಹಿರಿಯ ಹಾಗೂ ಕಿರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರರನ್ನು ಅವರಿದ್ದಲ್ಲೇ ಹೋಗಿ ಸಂದರ್ಶಿಸಿ ಅವರ ಬಗೆಗಿನ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಹಿರಿಯ ಆಟಗಾರರ ಅನುಭವಗಳನ್ನು ನಮ್ಮ ಭವಿಷ್ಯದ ಪೀಳಿಗೆಗಳಿಗೆ ಹಂಚಿ ಟೆನ್ನಿಸ್ ಬಾಲ್ ಕ್ರಿಕೆಟ್ ಎಂಬ ಹಳೆಯ ಬೇರು ಹೊಸ ಚಿಗುರೊಡೆಯುದಕ್ಕೊಸ್ಕರ ನೀರೆರೆಯುವ ಪ್ರಯತ್ನವನ್ನ ಮಾಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಹಿರಿಯ ಮತ್ತು ಕಿರಿಯ ಆಟಗಾರರನ್ನು “ರಾಜ್ಯ ಟೆನ್ನಿಸ್ ಕ್ರಿಕೆಟ್” ಎಂಬ ಗ್ರೂಪ್ ಮೂಲಕ ಒಗ್ಗೂಡಿಸುವ ಸಫಲ ಪ್ರಯತ್ನವನ್ನು ಮಾಡಿರುವ ಆರ್.ಕೆ sportskannada.com ವೆಬ್ಸೈಟ್ ಗಾಗಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ವೆಬ್ಸೈಟ್ ಲಾಂಚಿಂಗ್  ಕಾರ್ಯಕ್ರಮದ ಯಶಸ್ಸಿಗೆ  ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಸ್ವಯಂ ಪ್ರೇರಿತರಾಗಿ ಸಹಾಯವನ್ನು ಮಾಡಿರುವರು ಎನ್ನುವುದಕ್ಕೆ ಸಂತಸ ಪಡಬೇಕು ಹಾಗೂ ಯಾವುದೇ ಸಹಾಯಕ್ಕಾಗಿ ಆರ್.ಕೆ ಯವರು ಎಂದಿಗೂ ಕೈ ಚಾಚಿಲ್ಲ ಎಂಬುವುದು ನಾವು ಗಮನಿಸಬೇಕಾದ ಮುಖ್ಯ ವಿಷಯ.
ಕೇವಲ ಮೂರು ವರ್ಷದಲ್ಲೇ ಊಹಿಸಲಸಾಧ್ಯವಾಗುವಷ್ಟು ಸಾಧನೆಗಳನ್ನು ಮಾಡಿದ್ದಾರೆ. ಸುಮಾರು 2000ಕ್ಕಿಂತಲೂ ಹೆಚ್ಚು ಕ್ರೀಡಾಪಟುಗಳನ್ನು ಸಂದರ್ಶನ ನಡೆಸಿ ಅವರ ಬಗೆಗೆನ ಲೇಖನ, ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಗೊಳಿಸಿದ್ದಾರೆ.  ಅಸಂಖ್ಯಾತ ಅಭಿಮಾನಿ ಓದುಗರನ್ನು ಹೊಂದಿದ್ದು ಇದರಲ್ಲಿ ಬರುವ ಕ್ರೀಡಾ ಸುದ್ಧಿಗಳು, ವಿಶೇಷ ವರದಿಗಳು, ಉತ್ತಮ ಅಂಕಣಗಳಿಗೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿನಿತ್ಯ ಈ ವೆಬ್ ಸೈಟ್ನಲ್ಲಿ ಬರುವ ಹೊಸ ವಿಷಯಗಳಿಗಾಗಿ ಕಾದು ಕುಳಿತುಕೊಳ್ಳುವ ಒಂದಷ್ಟು ಜನ ಸಮೂಹವೇ ಇದೆ ಎಂದರೆ ತಪ್ಪಾಗದು.
ಇತ್ತೀಚೆಗೆ ರಾಯಚೂರು ಜಿಲ್ಲೆಯಲ್ಲಿ ಕಲಾ ಸಂಕುಲ ಸಂಸ್ಥೆ (ರಿ) ರಾಯಚೂರು ಇವರ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಆರ್ ಕೆ.ಯವರ ಮೇಲಿನ ಅಭಿಮಾನ ಇನ್ನಷ್ಟು ಇಮ್ಮಡಿಯಾಗಿದೆ. ಇದೇ ಬರುವ 28-11-2020ರಂದು ರಾಯಚೂರುನಲ್ಲಿ ನಡೆಯಲಿರುವ ಈ ಕಲ್ಯಾಣ ಕರ್ನಾಟಕ ಉತ್ಸವ್ದಲ್ಲಿ ವಿವಿಧ ಸಾಹಿತಿಗಳು,ಸಂಸದರು, ಶಾಸಕರು ಉಪಸ್ಥಿತರಿರುವ ವೇಧಿಕೆಯಲ್ಲಿ ಕ್ರೀಡ ಕ್ಷೇತ್ರಕ್ಕೆ ವಿಶಿಷ್ಟ ಸಾಧನೆಗೈದ ಸಾಮಾನ್ಯ ಯುವಕನೊಬ್ಬನು ಸನ್ಮಾನಿಸಲ್ಪಡುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಇಷ್ಟೊಂದು ಸಾಧಿಸಿದರೂ, ಕಳೆದ 2 ವರ್ಷಗಳಲ್ಲಿ ಪ್ರಶಸ್ತಿಗಳ ಸಾಲೇ ಹರಿದು ಬಂದರೂ ಕ್ರೀಡಾಲೋಕದ ಮೇಲಿರುವ ಆರ್.ಕೆ ಯ ಕನಸು ಬೆಟ್ಟದಷ್ಟಿದೆ. ಇದು ಕೇವಲ ಆರಂಭ,ತಲುಪಬೇಕಾದ ಹಾದಿ ಬಲುದೂರವಿದೆ.
ಯಾವುದೇ ಸರಕಾರದ ಅಕಾಡೆಮಿಗಳ ನೆರವುಗಳಿಲ್ಲದೆ ತನ್ನ ಸ್ವಂತ ಪ್ರಯತ್ನದಲ್ಲಿ ಕ್ರೀಡಾರಂಗಕ್ಕೋಸ್ಕರ, ಕ್ರೀಡಾಪಟುಗಳಿಗೋಸ್ಕರ, ಹಿರಿಯ ನಿವೃತ್ತ ಆಟಗಾರರಿಗೊಸ್ಕರ, ಮುಂದಿನ ಯುವ ಪೀಳಿಗೆಗೊಸ್ಕರ ದುಡಿಯುತ್ತಿರುವ ನಮ್ಮ ಆರ್.ಕೆ ಗೆ ನಮ್ಮೆಲ್ಲರ ಪ್ರೊತ್ಸಾಹದ ಅಗತ್ಯವಿದೆ. ಆಶೀರ್ವಾದದ ಅಗತ್ಯವಿದೆ. ಆರ್ ಕೆ. ಯವರ ಕನಸಿನಂತೆ ನಮ್ಮ ರಾಜ್ಯದಲ್ಲೊಂದು ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಸ್ಥಾಪನೆಗೊಳ್ಳಲಿ.  ಸಮಾಜದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕಿ ಅಸಾಮಾನ್ಯ ರೀತಿಯ ಸಾಧನೆಯನ್ನು ಮಾಡಿದ ನಮ್ಮ ಆರ್ ಕೆ ಯವರಿಗೆ ಸರಕಾರದ ವಿವಿಧ ಪ್ರಶಸ್ತಿಗಳು ದೊರಕಲಿ. ಅವರ ಕಾರ್ಯಕ್ಕೆ ಸರಕಾರದ ಬೆಂಬಲ ಸಿಗಲಿ. ಅದರಿಂದ ಅವರ ಈ ಒಂದು ವಿಭಿನ್ನ ಪ್ರಯತ್ನ ಇನ್ನಷ್ಟು ಉತ್ತುಂಘ ಶಿಖರವನ್ನೇರಲಿ. ಆರ್.ಕೆ ಯಂತವರ ಪ್ರಯತ್ನದಿಂದ ನಮ್ಮ ಊರಿನ ಮಕ್ಕಳು ಮುಂದೆ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ. ಆರ್.ಕೆ ಯ ಕನಸು ನನಸಾಗಲಿ ಎಂದು ನಾವೆಲ್ಲ ಹಾರೈಸೋಣ.
ದಿನೇಶ ಆಚಾರ್ಯ ಸಾಲಿಗ್ರಾಮ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

nineteen + two =