
ಪ್ರಸಿದ್ಧ ಕ್ರಿಕೆಟಿಗ,ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ ನಿಧನ.

ಉಡುಪಿ-ಪ್ರಸಿದ್ಧ ಕ್ರಿಕೆಟಿಗ,ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ(43)ಮೆದುಳಿನ ಕ್ಯಾನ್ಸರ್ ಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾದರು.
ಉತ್ತಮ ಕ್ರಿಕೆಟ್ ಆಟಗಾರರಾಗಿದ್ದ ಸಮೀರ್ ಶರೀಫ್ ಇವರು ಸ್ಪೋರ್ಟ್ಸ್ ಕನ್ನಡ ಮಧ್ಯಪ್ರಾಚ್ಯ ಪ್ರತಿನಿಧಿ ವಿಠಲ್ ರಿಶಾನ್ ನಾಯಕ್ ರವರ ಅತ್ಯಂತ ಆತ್ಮೀಯರಾಗಿದ್ದು,ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದರು.

ಇವರ ಅಂತ್ಯ ಕ್ರಿಯೆಯ ವಿಧಿವಿಧಾನಗಳು ಇಂದು (ಮಾರ್ಚ್ 23)ಸೋಮವಾರ ಸಂಜೆ 4.30 ಕ್ಕೆ ಉದ್ಯಾವರದ ಮಸೀದಿಯಲ್ಲಿ ನಡೆಯಲಿದೆ.
ಬಳಿಕ ದಫನ ಕ್ರಿಯೆ ಉದ್ಯಾವರ ಖಬ್ರಸ್ಥಾನದಲ್ಲಿ ಜರುಗಲಿದೆ.ಪ್ರಸ್ತುತ ಸಮೀರ್ ರವರ ಮೃತದೇಹ ಅವರ ನಿವಾಸ ಉದ್ಯಾವರದ ಪಾಂದೆಯಲ್ಲಿ ಇದ್ದು ಅಂತಿಮ ನಮನ ಸಲ್ಲಿಸಲು ಅವಕಾಶವಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಸಕ್ರಿಯ ಸದಸ್ಯರಾಗಿದ್ದು,ಉದ್ಯಾವರ ಮೊಹಿದ್ದೀನ್ ಜುಮ್ಮಾ ಮಸೀದಿ ಜಮಾತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು,ಮೃತರು ಪತ್ನಿ,ಓರ್ವ ಪುತ್ರಿ ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸ್ಪೋರ್ಟ್ಸ್ ಕನ್ನಡ ಚಾನೆಲ್ ವತಿಯಿಂದ ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.




