
ಶ್ರೀ ಜಲವಿನಾಯಕ ಟ್ರೋಫಿ 2026: ಕ್ರಿಕೆಟ್ ಪಂದ್ಯಾವಳಿಗೆ ಸಜ್ಜಾದ ಹುಣಸವಳ್ಳಿ
ಹುಣಸವಳ್ಳಿ ಹಾಗೂ ಕುರುವಳ್ಳಿ ಪೋಸ್ಟ್, ತೀರ್ಥಹಳ್ಳಿ ತಾಲೂಕು ಕ್ರೀಡಾಭಿಮಾನಿಗಳಿಗೆ ಸಂತಸದ ಸುದ್ದಿ. ಆಗುಂಬೆ ಮತ್ತು ಮುತ್ತೂರು ಹೋಬಳಿ ಆಟಗಾರರಿಗಾಗಿ “ಶ್ರೀ ಜಲವಿನಾಯಕ ಟ್ರೋಫಿ 2026” ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಈ ಪಂದ್ಯಾವಳಿ ಮಾರ್ಚ್ 28 ಮತ್ತು 29, 2026 ರಂದು ಹುಣಸವಳ್ಳಿ ಗ್ರಾಮದಲ್ಲಿರುವ ಬಿಳಿಗೆರೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಕ್ರೀಡಾಭಿಮಾನಿಗಳಲ್ಲಿ ಪಂದ್ಯಾವಳಿಯ ಬಗ್ಗೆ ಸಾಕಷ್ಟು ಉತ್ಸಾಹ ಮೂಡಿದ್ದು, ವಿವಿಧ ಗ್ರಾಮಗಳಿಂದ ತಂಡಗಳು ಭಾಗವಹಿಸಲು ಸಜ್ಜಾಗಿವೆ.

ಈ ಟೂರ್ನಿಯ ಪ್ರಥಮ ಬಹುಮಾನ ₹50,000, ದ್ವಿತೀಯ ಬಹುಮಾನ ₹35,000, ಮತ್ತು ತೃತೀಯ ಬಹುಮಾನ ₹5,000 ನಗದು ರೂಪದಲ್ಲಿ ನೀಡಲಾಗುತ್ತದೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಪ್ರವೇಶ ಶುಲ್ಕ ₹10,000 ನಿಗದಿಪಡಿಸಲಾಗಿದೆ.
ಪಂದ್ಯಾವಳಿಯ ಎಲ್ಲಾ ಪಂದ್ಯಗಳು 29-03-2026 ರ ಭಾನುವಾರದೊಳಗೆ ಪೂರ್ಣಗೊಳ್ಳುವಂತೆ ಆಯೋಜಕರು ಯೋಜನೆ ಮಾಡಿದ್ದಾರೆ. ಹುಣಸವಳ್ಳಿ ಹಾಗೂ ಮೇಲಿನ ಕುರುವಳ್ಳಿ ಆಟಗಾರರ ಲೆಜೆಂಡ್ಸ್ ಕ್ರಿಕೆಟ್ ಕೂಡ ಮಾರ್ಚ್ 29 ರಂದು ಆಯೋಜಿಸಲಾಗುವುದು.
ವಿಶೇಷ ಆಕರ್ಷಣೆಯಾಗಿ, ಈ ವರ್ಷ ನಡೆಯಲಿರುವ ಪಂದ್ಯಾವಳಿಯನ್ನು “Sports Kannada” ಯೂಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರ (Live Telecast) ಮಾಡಲಾಗುತ್ತದೆ.
ಕ್ರಿಕೆಟ್ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದವರು:
9686844187, 9845840574
, 9980325525





